Breaking News

ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಬೇಡಜಂಗಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು ; ಇತ್ತಿಚ್ಚಿಗೆ ರಾಜ್ಯದಲ್ಲಿ ಮಿಸಲಾತಿ ಹೋರಾಟಗಳು ಸರಕಾರಕ್ಕೆ ನುಂಗಕಾರ ತುತ್ತಾದರೆ ,ದಶಕಗಳಿಂದ ಬೇಡಜಂಗಮ ಮಿಸಲಾತಿ ಹೋರಾಟ ಸಮಿತಿ ಇಂದು ಅಧಿಕೃತ ನೋಂದಣಿ ಮಾಡಲಾಯಿತು, ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಆಯ್ಕೆಯಾದರು.

ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಶ್ರೀ ದಾನಯ್ಯ ಹಿರೇಮಠ ಆಯ್ಕೆ

ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ದಾನಯ್ಯ ಹಿರೇಮಠ ಅವರು ಪ,ಪೂ, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಶ್ರೀ ವಿರೇಶ ಕೂಡ್ಲಿಗಿಮಠ ಅವರ ಮಾರ್ಗದಲ್ಲಿ ಹಾಗೂ ಈ ಬೇಡಜಂಗಮ ಹೋರಾಟಕ್ಕೆ ಬುನಾದಿ ಹಾಕಿದ ಎಲ್ಲಾ ಗುರು ಹಿರಿಯರಿಗೆ ಈ ಸಂದರ್ಭದಲ್ಲಿ ನಾನು ಭರವಸೆ ನೀಡುತ್ತೇನೆ ,ರಾಜ್ಯದ ಪ್ರತಿ ಹಳ್ಳಿಗಳಿಂದ ನಮ್ಮ ಸಮಾಜದ ಬಲಾಢ್ಯ ಸಂಘಟನೆಯನ್ನು ಇನ್ನೂ ಬಲಗೊಳಿಸಿ ಸಂವಿಧಾನ ಬದ್ದವಾಗಿ ನಮ್ಮ ಹಕ್ಕುಗಳನ್ನು ನಾವು ಸರಕಾರಕ್ಕೆ ಕೇಳುತ್ತಿದ್ದೇವೆ ಆದರೆ ಸರಕಾರ ನಮ್ಮ ಮನವಿ ಹಾಗೂ ಹೋರಾಟವನ್ನು ಇಲ್ಲಿಯವರೆಗೂ ಬಹಳ ನಿರ್ಲಕ್ಷ್ಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರ ಇದಕ್ಕೆ ಸ್ಪಂದಿಸಿ ಬೇಡಜಂಗಮ್ಮ ಎಸ್,ಸಿ, ಮಿಸಲಾತಿ ಜಾರಿ ಗೋಳಿಸಬೇಕು ಇಲ್ಲದಿದ್ದರೆ, ಬಿಜೆಪಿ ಸರಕಾರ ಸದಾಶಿವ ವರದಿ ಜಾರಿ ಮಾಡಿ ನೆಲಕಚ್ಚಿತು, ನಮಗೆ ಮಿಸಲಾತಿ ನೀಡದಿದ್ದರೆ ಈ ಸರಕಾರನೂ ಕೂಡ ಗಂಭೀರವಾಗಿ ಅನೇಕ ಸವಾಲುಗಳನ್ನು ಎದುರಿಸಲಿದೆ ಎಂದು ಎಚ್ಚರಿಸಿದರು.

ಬೇಡಜಂಗಮ ನೂತನ ಸಿಂಬಾಲ್

About vijay_shankar

Check Also

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ  ಎನ್.ಎಸ್.ಬೋಸರಾಜ

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ

ರಾಯಚೂರು : ಇಂದು ರಾಯಚೂರು ನಗರದ ಸಚಿವರ ಅಧಿಕೃತ ಕಾರ್ಯಾಲಯದಲ್ಲಿ ಹುನಗುಂದ ತಾಲೂಕಿನ ಅಮೀನಗಡ ನಗರದ ಯುವ ಪತ್ರಕರ್ತರು ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.