೮೦ನೇ ಸ್ವಾತಂತ್ರ್ಯ ದಿನೋತ್ಸವದ  ಧ್ಜಜಾರೋಹಣ ನೇರವೇರಿಸಿದ ಶಾಲೆಯ ಪ್ರಾಂಶುಪಾಲ ಎಮ್,ಎಚ್, ಹಡಪದ

ಅಮೀನಗಡ :
ಹುನಗುಂದ ತಾಲೂಕಿನ ಸೂಳೇಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 80ನೇ ಭಾರತ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ವನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಎಮ್,ಎಚ್ ಹಡಪದ ಅವರು ಧ್ವಜಾರೋಹಣ ನಿರ್ವಹಿಸಿ ಮಾತನಾಡಿದ ಅವರು

ಈ ಭಾರತ ದೇಶದ ಸದೃಢವಾದ ಸಮಾಜವನ್ನು ಕಟ್ಟುವಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯವಾಗಿದೆ,ಈ ದೇಶಕ್ಕೆ ೧೯೪೭ ರಲ್ಲಿ ಭಾರತ ಸ್ವತಂತ್ರವಾದಾಗ ಶೇಖಡಾ ೯೦ ರಷ್ಟು ಮಕ್ಕಳಿಗೆ ಶಿಕ್ಷಣ ದೊರೆತಿದ್ದಿಲ್ಲ, ಆಗ ಹಗಲು ರಾತ್ರಿ ಅನಕ್ಷರಸ್ಥ ಎಲ್ಲಾ ವಯಸ್ಕರಲ್ಲಿ ಶಿಕ್ಷಣದ ಕ್ರಾಂತಿಯನ್ನು ಪ್ರಾರಂಭ ಮಾಡಿ

ಸಾಕ್ಷಾರತೆ ರಾತ್ರಿ ಶಾಲೆ ಪ್ರಾರಂಭವಾದವು ಈಗ ಇಂದಿನ ಪ್ರಸ್ತುತದಲ್ಲಿ ಇಡೀ ಭಾರದ ದೇಶದತ್ತ ಜಗತ್ತು ತಿರುಗಿ ನೋಡುತ್ತಿದೆ, ಭಾರದ ಎಲ್ಲಾ ರಂಗದಲ್ಲಿ ಇಡೀ ವಿಶ್ವದಲ್ಲೇ 3 ನೇ ಸ್ಥಾನ ಪಡೆದಿದೆ,ಶಿಕ್ಷಣ ಕ್ಷೇತ್ರದಲ್ಲಿ ಇವತ್ತು ಶೇಖಡಾ ೯೯ ರಷ್ಟು ಶಿಕ್ಷಣ ಎಲ್ಲಾ ಜಾತಿ ಜನಾಂಗದ ಮಕ್ಕಳಿಗೆ ಸಿಕ್ಕಿದೆ. ತಾವು ಈ ಕೂಡ ಈ ದೇಶದ ಮುಂದಿನ ದೊಡ್ಡ ಆಸ್ತಿ ನಿಮ್ಮಲ್ಲಿ ನಾಳೆ ಯಾರೂ ಒಂದಿಷ್ಟು ಜನ ದೊಡ್ಡ ದೊಡ್ಡ IPS ,IAS ಹಾಗೂ

ಇತರೆ ದೊಡ್ಡ ದೊಡ್ಡ ಇಲಾಖೆ,ಅಧಿಕಾರ ವಹಿಸಬಹುದು ಹೀಗಾಗಿ ಈ ದೇಶಕ್ಕೆ ನಿಮ್ಮ ಸೇವೆ ಮುಡಿಪಾಗಿರಲಿ,ಈ ದಿನದ ಸ್ವತಂತ್ರಕ್ಕಾಗಿ ಲಕ್ಷಾಂತರ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಂಡು ನಾವೆಲ್ಲರೂ ಜಾತಿ,ಧರ್ಮ,ಮತ,ಪಂಗಡ,ಎನ್ನದೆ ಈ ದೇಶದ ಒಂದೆ ತಾಯಿಯ ಮಕ್ಕಳಂತೆ

ಸವ್ಹಾರ್ಧಯುತವಾಗಿ ಬಾಳಿ, ಕಲಿತ ಈ ವಸತಿ ಶಾಲೆಯ ಕೀರ್ತಿಯನ್ನು ಹಾಗೂ ಈ ದೇಶದ ಕೀರ್ತಿಗೆ ಹೆಮ್ಮೆ ತರುವಂತಹ ಮಕ್ಕಳಾಗಿ ತಾವು ಬೆಳೆಯಬೇಕು ಎಂದರು, ಈ ಸಂದರ್ಭದಲ್ಲಿ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ

ಶ್ರೀ ಮಹಾಂತೇಶ್ ಬಂಡಿ, ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಾಹಿದಾ ನದಾಫ್, ರಾಜು ಹಿಪ್ಪರಗಿ, ಪವನ್ ಕುಲಕರ್ಣಿ, ಪ್ರಸನ್, ಸೋಮಲು, ಶಿವಯ್ಯ ಗೊನ್ನಾ ಗರಮಠ, ಶಿಕ್ಷಕಿಯರಾದ ಕವಿತಾ ಚವ್ಹಾಣ, ಭವಾನಿ ಹಲಗಿ, ವಾರ್ಡನ್ ರಾದ ಶ್ರೀಮತಿ ಪೂರ್ಣಿಮಾ ಕಟ್ಟಿಮನಿ, ಹಾಗೂ ಶಾಲೆಯ ಪ್ರಥಮ ದರ್ಜೆ ಸಹಾಯಕರಾದ ಭಾಷಾಸಾಬ್ ಬನಾಶಿ,ಸೇರಿದಂತೆ ಎಲ್ಲಾ ಬೋಧಕ -ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ವರದಿ: ಎಂ ಕಿರಣರಾಜ್

Leave a Reply

Your email address will not be published. Required fields are marked *