Breaking News

Uncategorized

ಮಾಸ್ಕ್ ಧರಿಸು ಎಂದಿದ್ದಕ್ಕೆ ಆಕೆ ಮಾಡಿದ್ದೇನು ನೋಡಿ

ಸಂಪೂರ್ಣ ವಿಶ್ವ ಕರೊನಾಗೆ ತುತ್ತಾಗಿ 10 ತಿಂಗಳುಗಳೇ ಆಗ್ತಾ ಬಂದಿದೆ. ಇಷ್ಟರಲ್ಲಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ಕರೊನಾಗೆ ಬಲಿಯಾಗಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್​​ಗಳನ್ನ ಬಳಸಿ ಕರೊನಾದಿಂದ ದೂರಾಗಲು ಯತ್ನಿಸ್ತಾ ಇದ್ರೆ, ಇಲ್ಲೊಬ್ಬ ಮಹಿಳೆ ಮಾಸ್ಕ್​ ಧರಿಸಲು ನಿರಾಕರಿಸಿ ವಿಮಾನದಿಂದ ಹೊರನಡೆದಿದ್ದಾಳೆ. ಫೇಸ್​ ಮಾಸ್ಕ್​ ಧರಿಸಲು ನಿರಾಕರಿಸಿದ ಮಹಿಳೆ ಕೋಪದಿಂದ ವಿಮಾನದಿಂದ ಹೊರಬರ್ತಿರೊ ದೃಶ್ಯ ಸದ್ಯ ಟ್ವಿಟರ್​ನಲ್ಲಿ ಟಾಕ್​ ಆಫ್​ ದ ಟೌನ್​ ಆಗಿದೆ. ಅಕ್ಟೋಬರ್​ 18ರಂದು ನಡೆದ …

Read More »

ಕೊರೊನಾ ಕ್ಷಿಣಿಸುತ್ತಿರೋ ಹೊತ್ತಲ್ಲಿ ಬಿಗ್ ಶಾಕ್, ಕರುನಾಡಿನ 5 ಜಿಲ್ಲೆಗಳು ಹಾಟ್ ಸ್ಪಾಟ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸವಂತೂ ಕಡಿಮೆಯಾಗೋ ಯಾವ ಲಕ್ಷಣಗಳೂ ಕಾಣ್ತಿಲ್ಲ. ಬದಲಾಗಿ ಪರಿಸ್ಥಿತಿ ಕೈ ಮೀರಿ ಹೋಗೋ ಎಲ್ಲಾ ಲಕ್ಷಣಗಳೂ ಎದ್ದು ಕಾಣ್ತಿದೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ವೈರಸ್ ಎಲ್ಲೆ ಮೀರಿ ಅರ್ಭಟಿಸ್ತಿದೆ. ಅಟ್ಯಾಕ್.. ಡೆಡ್ಲಿ ಅಟ್ಯಾಕ್‌.. ಯಾರೂ ಊಹಿಸಿಕೊಳ್ಳಲಾಗದಂತಹ ಅಟ್ಯಾಕ್‌.. ಜಿಲ್ಲೆ ಜಿಲ್ಲೆಗಳಲ್ಲಿ.. ನಗರ ನಗರಗಳಲ್ಲಿ.. ಗಲ್ಲಿ ಗಲ್ಲಿಯಲ್ಲಿ ಹೆಮ್ಮಾರಿಯ ಡೆಡ್ಲಿ ದಾಳಿ. ಕರುನಾಡಲ್ಲಿ ಹೆಮ್ಮಾರಿ ವೈರಸ್​ನ ಅಟ್ಟಹಾಸ ಮಿತಿ ಮೀರ್ತಿದೆ. ಸೋಂಕಿನ ವಿಷ …

Read More »

ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಸಂಭ್ರಮ

ಉಡುಪಿ/ಮಂಗಳೂರು: ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ಶನಿವಾರ ನವರಾತ್ರಿ ಉತ್ಸವ ಆರಂಭ ಗೊಂಡಿತು. ಮಂದಾರ್ತಿ, ಕಡಿಯಾಳಿ, ಕನ್ನರ್ಪಾಡಿ, ಬೈಲೂರು, ನಂದಿಕೂರು, ನೀಲಾವರ, ಕೋಟ ಅಮೃತೇಶ್ವರಿ, ಪುತ್ತೂರು, ಇಂದ್ರಾಣಿ, ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ಮೊದಲಾದ ದೇವಸ್ಥಾನಗಳಲ್ಲಿ ಇನ್ನು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿವೆ. ಕೊರೊನಾ ಕಾರಣದಿಂದಾಗಿ ಜಿಲ್ಲಾ ಡಳಿತ ಸೂಚಿಸಿದ ಮೇರೆಗೆ ಮುಜರಾಯಿ …

Read More »

ಲಸಿಕೆ ವಿತರಣೆಗೆ ಚುನಾವಣೆಯಂತೆ ಸಿದ್ಧತೆ  : ಆರೋಗ್ಯ ಇಲಾಖೆಗೆ ಪ್ರಧಾನಿ ಮೋದಿ ಸೂಚನೆ

ಹೊಸದಿಲ್ಲಿ: ದೇಶದ ಪ್ರತಿಯೊಬ್ಬರಿಗೂ ಅತ್ಯಂತ ತ್ವರಿತಗತಿಯಲ್ಲಿ ಕೊರೊನಾ ಲಸಿಕೆ ಸಿಗಬೇಕು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದಂತೆ ಲಸಿಕೆಯನ್ನೂ ವಿತರಣೆ ಮಾಡಬೇಕು… ಇದು ಪ್ರಧಾನಿ ಮೋದಿ ಅವರ ಸಲಹೆ. ದೇಶದ ಕೋವಿಡ್‌-19ರ ಸ್ಥಿತಿಗತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಲಸಿಕೆ ಸಿದ್ಧವಾದ ಮೇಲೆ ದೇಶದ ಪ್ರತಿಯೊಬ್ಬರಿಗೆ ಅದು ಹೇಗೆ ತಲುಪಬೇಕು ಎಂಬುದರ ಕುರಿತಾದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಲಸಿಕೆ ಆಡಳಿತದ …

Read More »

ಮಾಡಲಗೇರಿಯ ಶ್ರೀ ಹ,ನೇ,ಭೀಮನಗೌಡ್ರ ಸ್ವರಚಿತ “ಜಾನಪದ ಸುರಿದರೆ,ಎಂಬ ಪುಸ್ತಕ ಬಿಡುಗಡೆ ಸರಳ ಸಮಾರಂಭ,

ಗುಡೂರು : ಇಲಕಲ್ಲ ತಾಲೂಕಿನ ಭೀಮನಗಡ,ಗ್ರಾಮದ ಸುಕ್ಷೇತ್ರ ಶ್ರೀ ವೀರಭದ್ರೇಶ್ವರ ಲೀಲಾ ಮಠದಲ್ಲಿ ಇಂದು ಪ,ಪು,ಶಿವಶರಣ ಕಲ್ಲಿನಾಥ ಮಹಾಸ್ವಾಮಿಗಳು ಹಾಗೂ ಪ,ಪೂ, ಕಾಮೇಶ ಸ್ವಾಮಿಗಳ ಸಾನಿಧ್ಯದಲ್ಲಿ ಮಾಡಲಗೇರಿಯ ಶ್ರೀ ,ಹ, ನೇ, ಭೀಮನಗೌಡ್ರ ಅವರ ” ಜಾನಪದ ಸುರಿದರೆ. ಎಂಬ ಜಾನಪದ ಹಾಡುಗಳ ಬಿಡುಗಡೆ ಸರಳ ಸಮಾರಂಭ ನಡೆಯಿತು,ಬೆಳಗಾವಿ ಜಿಲ್ಲೆಯ ನರಗುಂದದವರು, ಈ ಸಭೆ ಉದ್ದೇಶಿಸಿ ಮಾತನಾಡಿದ ಸಭೆಯ ಉದ್ಘಾಟಕರಾದ ಶ್ರೀ ಶ್ರೀನಿವಾಸ ಕೆ,ಉಪ್ಪಾರ ಮಾತನಾಡಿ ಇಂತಹ ಸಾಹಿತ್ಯಗಾರರು ಅಲ್ಲಿಂದ …

Read More »

ದಂಗಾಗಿಸುತ್ತೆ ಬಹು ಕಾಲದ ಬಳಿಕ ತೆರೆದ ಚಿತ್ರಮಂದಿರಕ್ಕೆ ಬಂದವರ ಸಂಖ್ಯೆ..!

ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್​ಗಳು ಇದೀಗ ಮತ್ತೆ ಓಪನ್​ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್​ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಗ್ರೇಟರ್​ ಕೈಲಾಶ್​ ಏರಿಯಾದಲ್ಲಿ 150 ಸೀಟ್​ಗಳನ್ನ ಹೊಂದಿದ್ದ ಸಿನಿಮಾ ಹಾಲ್​ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್​ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್​ಗಳು ಬುಕ್​ ಆಗಿವೆ. …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ : ಕರ್ನಾಟಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆಯು ಉದ್ಯೋಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಕರ್ನಾಟಕ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿದೆ. ಒಟ್ಟು 16 ಹುದ್ದೆಗಳ ಪೈಕಿ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವೀಧರರಿಗೆ 8, ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. …

Read More »

ನೀವು ‘ಕೊರೋನಾ’ ಬಂದು ‘ಗುಣಮುಖ’ ಆಗಿದ್ದೀರಾ? ಹಾಗಿದ್ದರೇ ತಪ್ಪದೇ ಈ ಸುದ್ದಿ ಓದಿ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕೊರೋನಾ ವಿಶ್ವಾಧ್ಯಂತ ಎಲ್ಲರನ್ನು ನಲುಗಿಸುತ್ತಿದೆ. ಕೊರೋನಾ ನಿಯಂತ್ರಣ ಕ್ರಮಗಳ ಹೊರತಾಗಿಯೂ ಇನ್ನೂ ಯಾವುದೇ ದೇಶ ಅಧಿಕೃತವಾಗಿ ಕೊರೋನಾಗೆ ಲಸಿಕೆ ಕಂಡು ಹಿಡಿದಿಲ್ಲ. ಇದರ ಮಧ್ಯೆ ಕೊರೋನಾ ಬಂದ ನಂತ್ರ, ಕೊರೋನಾದಿಂದ ಗುಣಮುಖರಾದ ನಂತ್ರ ಎಷ್ಟು ದಿನ ನಮ್ಮನ್ನು ರೋಗ ಭಾಧಿಸುತ್ತದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಇದಕ್ಕೆ ಅನೇಕ ಸಂಶೋಧಕರು, ಸಂಶೋಧನಗಳು ಒಂದೊಂದು ಬಗೆಯ ಉತ್ತರವನ್ನು ನೀಡಿವೆ. ಆ ಬಗ್ಗೆ ಮುಂದೆ ಓದಿ.. ಕೊರೋನಾ ಬಂದ …

Read More »

ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ

ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ನಡುವೆ ಸಾಲ ಪಡೆದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಸಾಲ ವಸೂಲಿ ಮಾಡುತ್ತಿರುವ ಮೈಕ್ರೊ ಫೈನಾನ್ಸ್‌ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರಿ ಆಗ್ರಹಿಸಿದರು. ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಕ್ರೊ ಫೈನಾನ್ಸ್‌ ಸಾಲಗಾರರ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೊ ಫೈನಾನ್ಸ್‌ …

Read More »

ರಾಜ್ಯದ ವಿವಿಧೆಡೆ ಉತ್ತಮ ಮಳೆ, 10 ಜಿಲ್ಲೆಗಳಲ್ಲಿ ರೆಡ್ ಅಲಟ್೯

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ದೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಳ್ಳಗಳು ಭರ್ತಿಯಾಗಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ 127 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಡಚಣ ತಾಲ್ಲೂಕಿನ ಹಾಲಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಬಲಿಯಾಗಿದೆ. ಡೋಣಿ ನದಿಯ ಪ್ರವಾಹದಿಂದ ತಾಳಿಕೋಟೆ-ಹಡಗಿನಾಳ ನೆಲಮಟ್ಟದ ಸೇತುವೆ ಹಾಗೂ ಸಾತಿಹಾಳದಲ್ಲಿ ದೇವರಹಿಪ್ಪರಗಿ- ಬಸವನ ಬಾಗೇವಾಡಿ ಮುಖ್ಯ ರಸ್ತೆಯಲ್ಲಿರುವ ಸಂಪರ್ಕ ಸೇತುವೆ ಜಲಾವೃತವಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ …

Read More »