Breaking News

ನಮ್ಮೂರ ಸುದ್ದಿ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ  ಆಯ್ಕೆ

ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ, ನಿನ್ನೆ ತುಳಸಿಗೇರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಲ್ಲಕಂಬದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಆಗಿದ್ದಾನೆ. ಅಲ್ಲದೆ ಕರ್ನಾಟಕದ ರಾಜ್ಯೋತ್ಸವದ ಅಂಗವಾಗಿ ನಡೆದ ಇಲಕಲ್ಲ ತಾಲೂಕಾ ಮಟ್ಟದ ಕನ್ನಡ ನಾಡು ನುಡಿ ಜಲಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಸಮ್ಮ …

Read More »

ಅಮೀನಗಡ ಪೋಲಿಸ್ ಠಾಣೆಯಿಂದ ರನ್ ಆಫ್ ಯುನೀಟಿ ಕಾರ್ಯಕ್ರಮ

ಅಮೀನಗಡ ಪೋಲಿಸ್ ಠಾಣೆಯಿಂದ ರನ್ ಆಫ್ ಯುನೀಟಿ ಕಾರ್ಯಕ್ರಮ

ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೋಲಿಸ್ ಠಾಣೆಯಿಂದ ರನ್ ಫಾರ್ ಯುನಿಟ್‌ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮನ ಗೆದ್ದರು. ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಮಾರ್ಗದರ್ಶನದಲ್ಲಿ ಈ ವಿನೂತನ ಕಾರ್ಯಕ್ರಮ ಅಮೀನಗಡದಿಂದ ಸೂಳೇಭಾವಿಯ ವರೆಗೆ ರನ್ ಮಾಡುವ ಮೂಲಕ ಸಾರ್ವಜನಿಕರ ಗಮನ ಸೇಳೆದರು , ನಂತರ ಮಾತನಾಡಿದ ಠಾಣಾ ಅಧಿಕಾರಿ ಪಿಎಸ್ ಐ ಜ್ಯೋತಿ ವಾಲಿಕಾರ ಅವರು ಇದರ ಉದ್ದೇಶ ನಶ ಮುಕ್ತ ಭಾರತ ಹಾಗೂ …

Read More »

ಅಮೀನಗಡ ಪೊಲೀಸ್ ಇಲಾಖೆಯಿಂದ ಸೂಳೇಭಾವಿ ಗ್ರಾಮದಲ್ಲಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ

ಅಮೀನಗಡ ಪೊಲೀಸ್ ಇಲಾಖೆಯಿಂದ ಸೂಳೇಭಾವಿ ಗ್ರಾಮದಲ್ಲಿ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ

ಅಮೀನಗಡ: ಇಂದು ಸೂಳೇಭಾವಿ ಗ್ರಾಮದಲ್ಲಿ ಅಮೀನಗಡ ಪೊಲೀಸ್ ಇಲಾಖೆಯಿಂದ ಸಾರ್ವಜನಿಕವಾಗಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಿಡ್ಡಪ್ಪ ಕುರಿ ಕ್ರೈಂ ಪಿ,ಎಸ್,ಐ ಶ್ರೀ ವಾಯ್,ಎಚ್ ಪಠಾಣ್ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಠಾಣೆಯ ಹವಾಲ್ದಾರ್ ಶಿವಾನಂದ ಕಟ್ಟಿಮನಿ ಮಾತನಾಡಿ ಸಾರ್ವಜನಿಕರು ಈ ಮನೆ ಮನೆ ಪೊಲೀಸ್ ಕಾರ್ಯಕ್ರಮದ ಉದ್ದೇಶ ಜನತೆ ಇವತ್ತಿನ ವಾಸ್ತವಿಕ ದಿನಮಾನದಲ್ಲಿ ತುಂಬಾ …

Read More »

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ನೀಡುವ ೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ ನೀಡಲಾಗಿದೆ. ಉತ್ತಮ ಸಾಹಿತ್ಯ ಹಾಗೂ ,ಕೃತಿಗಳು ಹಾಗೂ ಅದ್ಬುತ ಲೇಖಕರಿಗೆ ಈ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ …

Read More »

ನಾಳೆ ಹುನಗುಂದ ನಗರದಲ್ಲಿ ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಅದ್ದೂರಿ ಜಯಂತೋತ್ಸವ

ನಾಳೆ ಹುನಗುಂದ ನಗರದಲ್ಲಿ ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಅದ್ದೂರಿ ಜಯಂತೋತ್ಸವ

ನಾಳೆ ಹುನಗುಂದ ನಗರದಲ್ಲಿ ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಅದ್ದೂರಿ ಜಯಂತೋತ್ಸವವನ್ನು ಮಾಡುವುದಾಗಿ ಸಮಾಜ ಅಧ್ಯಕ್ಷ ಎಸ್ ಎಸ್ ಸಂಗಮದ ಅವರು ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು ಬೆಳಗ್ಗೆ ೯ ಗಂಟೆಗೆ ನಮ್ಮ ಸಮಾಜದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಿಂದ ಶಿವಶರಣ ನೂಲಿ ಚಂದಯ್ಯನವರ ಭಾವ ಚಿತ್ರದ ಮೆರವಣಿಗೆಯನ್ನು ಮುತ್ತೈದೆಯರಿಂದ ಕುಂಭ ಮೆರವಣಿಗೆ ಮೂಲಕ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ವಿಜಯ ಮಹಾಂತೇಶ ಕಲ್ಯಾಣ ಮಂಟಪಕ್ಕೆ ಬಂದು ತಲುಪಲಿದೆ. ನಂತರ …

Read More »

ಮುದ್ದೇಬಿಹಾಳದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಕಲಾವಿದರಿಗೆ ಸನ್ಮಾನ ಸಮಾರಂಭ

ಮುದ್ದೇಬಿಹಾಳದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಕಲಾವಿದರಿಗೆ  ಸನ್ಮಾನ ಸಮಾರಂಭ

ಮುದ್ದೇಬಿಹಾಳ:ವಿಶ್ವದ ಜನಪದ ಸಂಸ್ಕೃತಿ, ಕಲೆ ಮತ್ತು ಕಲಾವಿದರ ಸೇವೆಯನ್ನು ಸ್ಮರಿಸಲು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ವಿಜಯಪುರ ಜಿಲ್ಲಾ ಘಟಕ ಹಾಗೂ ಕನ್ನಡ ಜಾನಪದ ಪರಿಷತ್, ಬೆಂಗಳೂರಿನ ಸಂಯುಕ್ತಾಶ್ರಯದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಇಂದು (30 ಆಗಸ್ಟ್ 2025, ಶನಿವಾರ) ಮುದ್ದೇಬಿಹಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭವ್ಯವಾಗಿ ಜರುಗಿತು. ಸಮಾಜ ಸೇವಕ ನೇತಾಜಿ ನಲವಡೆಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿಆಧುನಿಕ …

Read More »

ಬೆಂಗಳೂರಿನ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ‘ಗಂಗೆ ಗೌರಿ’ ಕನ್ನಡ ಚಲನಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ

ಬೆಂಗಳೂರಿನ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ‘ಗಂಗೆ ಗೌರಿ’ ಕನ್ನಡ ಚಲನಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು: ಗೌರಿಗಣೇಶ ಹಬ್ಬದ ಪ್ರಯುಕ್ತ ‘ಗಂಗೆ ಗೌರಿ’ ಕನ್ನಡ ಚಲನಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಆಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಡೇರಿಂಗ್ ಸ್ಟಾರ್ ಪ್ರಿಯಾಹಾಸನ್ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನರ‍್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಹಿರಿಯ ನಟ ಗಣೇಶ್‌ರಾವ್ …

Read More »

ಅಮೀನಗಡ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ & ಈದ್ ಮಿಲಾದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಅಮೀನಗಡ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ & ಈದ್ ಮಿಲಾದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಅಮೀನಗಡ : . ಈ ಸ ಅಮೀನಗಡ : ಸರಕಾರ ಕಡ್ಡಾಯವಾಗಿ DJ ಬ್ಯಾನ್ ಮಾಡಿದೆ,ಗಜಾನನ ಸಂಘದ ಸರ್ವ ಸದಸ್ಯರು ಎಚ್ಚೆತುಕೊಂಡು ಪರಿಸರ ಸ್ನೇಹಿ ಗಣಪತಿ ಇರಿಸಿ ಸರಳತೆಯಿಂದ ಮತ್ತು ಇತರರಿಗೆ ಮಾದರಿಯಾಗಿ ವಾಧ್ಯಗೊಷ್ಟೀಯೊಂದಿಗೆ ಗಣಪತಿ ವಿಸರ್ಜನೆ ಮಾಡಬೇಕೆಂದುಇಂದು ಸಾಯಂಕಾಲ ೪;೩೦ ರ ಸುಮಾರಿಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಇದ್ ಮಿಲಾದ್ ಹಬ್ಬದ ಆಚರಣೆ ಕುರಿತು ಶಾಂತಿ ಪಾಲನೆ ಸಭೆ ಉದ್ದೇಶಿಸಿ ಠಾಣಾ ಅಧಿಕಾರಿ ಶ್ರೀಮತಿ …

Read More »

ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿ ಸಿದ್ದಪ್ಪ ರಾಮಪ್ಪ ಕೊಕಾಟಿ ಆಯ್ಕೆ

ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿ ಸಿದ್ದಪ್ಪ ರಾಮಪ್ಪ ಕೊಕಾಟಿ ಆಯ್ಕೆ

ಅಮೀನಗಡ : ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ LPS ಹಿರೇಮಾಗಿ ಕಬ್ಬಿನ ಕಣಿವೆ ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿ ಶ್ರೀ ಸಿದ್ದಪ್ಪ ರಾಮಪ್ಪ ಕೊಕಾಟಿ ಉಪಾಧ್ಯಕ್ಷರಾಗಿ ವಾರೇಶ್ ಶಂಕ್ರಪ್ಪ ರಾಥೋಡ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹಿರೇಮಾಗಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀಯುತ ಮೈಲಾರಪ್ಪ ವಾಲಿಕಾರ್ ಮತ್ತು ನಾಗಣ್ಣ ಮಾಮಲ್ಲಪ್ಪ ಶೆಟ್ಟರ್ ಬಸವರಾಜ ಅಂಗಡಿ PKPS ಮಾಜಿ ಅಧ್ಯಕ್ಷರಾದ ಶಿವಪ್ಪ …

Read More »

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ ಆಯ್ಕೆ

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ  ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ  ಆಯ್ಕೆ

ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಂ,ಸಿ,ಕಮಿಟಿಯ ಆಡಳಿಡ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಚಂದಪ್ಪ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ದಲಿತ ಸಮೂದಾಯದ ಮುಖಂಡರಾದ ಶ್ರೀ ಶಿವಾನಂದ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮನಗೌಡ ಬಾಳನಗೌಡ ಪಾಟೀಲ, ಶ್ರೀ ಶಂಕ್ರಪ್ಪ ಮೇಟಿ, ಶ್ರೀ ರಮೇಶ ಚಿತ್ತರಗಿ, ಶ್ರೀ ಆನಂದ ಜೀ …

Read More »