Breaking News

ಧಾರವಾಡದಲ್ಲಿ ಆರೋಗ್ಯ ಇಲಾಖೆ ಎಡವಟ್ಟು

ಧಾರವಾಡದಲ್ಲಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಕೋವಿಡ್ ನಿಂದ ಸತ್ತ ವ್ಯಕ್ತಿಯ ಆರೋಗ್ಯ ವಿಚಾರಣೆಗೆ ವ್ಯಕ್ತಿಯ ಕುಟುಂಬಸ್ಥರಿಗೆ ಕಾಲ್ ಮಾಡಿ ಆರೋಗ್ಯ ವಿಚಾರಣೆಯನ್ನು‌ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಮಾತು ಕೇಳಿ ಮನೆಯವರಿಗೆ ಶಾಕ್ ಯಾಗಿದೆ. ಕೋವಿಡ್‌ ಸೋಂಕಿನಿಂದ ಜುಲೈ 24 ರಂದು ನಿಧನವಾಗಿದ್ದ ವ್ಯಕ್ತಿ, ಅಂದೇ ಅಂತ್ಯಸಂಸ್ಕಾರ ಸಹ ನೆರವೇರಿಸಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಂತ್ಯಸಂಸ್ಕಾರ ಮಾಡಿದ ಎರಡು ದಿನದ ಬಳಿಕ ಕಾಲ್ ಮಾಡಿದ ಕಿಮ್ಸ್ ಸಿಬ್ಬಂದಿ,

The Health Department in Dharwad is awkward

ಆರೋಗ್ಯವಾಗಿದ್ದಾರೆಯೇ ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಇಲ್ಲ ಅವರು ಮೊನ್ನೆಯೇ ನಿಧನವಾಗಿದ್ದಾರೆ ಎಂದು ಹೇಳಿದ ಮನೆ ಸದಸ್ಯರು ಆ ಬಳಿಕವೂ ಕಾಲ್ ಮಾಡಿ ಮತ್ತೆ ಆರೋಗ್ಯದ ಬಗ್ಗೆ ವುಚಾರಣೆಯನ್ನ ಮಾಡಲಾಗಿದೆ.
ಅವರು ನಿಧನವಾಗಿದ್ದಾರೆಂದು ಸ್ಪಷ್ಟಪಡಿಸಿದ ಬಳಿಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ವ್ಯಕ್ತಿ ನಿಧನರಾದ 9 ದಿನದ ಬಳಿಕ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಎಲ್ಲ ಮುಗಿದು 9 ದಿನವಾದ ಬಳಿಕ ಸೀಲ್‌ಡೌನ್ ಮಾಡಿದ ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾರೆ.‌

About vijay_shankar

Check Also

ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ

ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.