Breaking News

ನಿಮ್ಮೆಲ್ಲರ ಸಹಕಾರದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸವದತ್ತಿ ಶಾಸಕ, ವಿಶ್ವಾಸ ವಸಂತ ವೈಧ್ಯ

ಸವದತ್ತಿ : ನನ್ನ ಈ ರಾಜಕೀಯ ರಂಗದಲ್ಲಿ ಈ ಸ್ಥಾನಕ್ಕೆ ,ಈ ಪದವಿಗೆ ನಿಮ್ಮ ಸಹಕಾರ ಮತ್ತು ನೀವೆ ಕಾರಣ ನಿಮ್ಮ ಸಂಪೂರ್ಣ ಸಹಕಾರದಿಂದ ನಾನು ಈಗ ಈ ಪದವಿಯಲ್ಲಿ ಇದ್ದೇನೆ. ನಾನು ಯಾವಾಗಲೂ ನಿ ಮ್ಮೊಂದಿಗೆ ಸದಾ ಇದ್ದೇನೆ. ನಿಮ್ಮ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ

ಈ ಚಳಿಗಾಲ ಅಧಿವೇಶನದಲ್ಲಿ ನಾನು ಖುದ್ದಾಗಿ ಮಾತನಾಡುತ್ತೇನೆ, ಎಂದು ಸವದತ್ತಿ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ ಅವರು ನಗರದ ವ್ಹಿ,ಆರ್ ಕಾದರಗಿ ಸಭಾ ಭವನದಲ್ಲಿ ನಡೆದ ಕರ್ನಾಟಕ ಪತ್ರಕರ್ತರ / ಬೆಂಗಳೂರು, ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಸವದತ್ತಿ ತಾಲೂಕ ಘಟಕದ ಸಹಯೋಗದಲ್ಲಿ ನಡೆದ ಕರ್ನಾಟಕ ಜರ್ನಲಿಸ್ಟ ಯುನಿಯನ್ ಟ್ರಸ್ಟಿಗಳ ಸಭೆ ಉದ್ಘಾಟಸಿ ಅವರು ಮಾತನಾಡಿದರು.


ಪ್ರಾಸ್ತಾವಿಕವಾಗಿ ರಾಜ್ಯ ಉಪಾಧ್ಯಕ್ಷ ಶ್ರೀ ಸುದೇಶಕುಮಾರ್ ಅವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸಂಘದ ವಿಸ್ತೀರ್ಣ, ಸಂಘದಿಂದ ವಿಮಾ ಸೌಲಭ್ಯ, ಇತರೆ ಮಾಹಿತಿಯನ್ನು ಪ್ರಸ್ತಾಪವನ್ನು ಮಂಡಿಸಿದರು. ರಾಜ್ಯ ಅಧ್ಯಕ್ಷರಾದ ಶ್ರೀ ಮುರಗೇಶ ಶಿವಪೂಜೆ ಅವರು ಮಾತನಾಡಿ ಈ ಭಾರತದ ೨೨ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ ಭಾರತದ ಹರಿಯಾಣ ರಾಜ್ಯ ನಂಬರ್ ೧ ಸಂಘಟನೆ ಮಾಡಿ ಅಲ್ಲಿನ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದಿದೆ,

ವಾರ ಪತ್ರಿಕೆ,ಮಾಸ ಪತ್ರಿಕೆ,ಮಾಧ್ಯಮ ಪಟ್ಟಿಯಿಂದ ಹೊರ ಇರುವ ಅನೇಕ ಹಿರಿಯ ಪತ್ರಿಕೆ ಸಂಪಾದಕರು ೬೦,ವರ್ಷ ಮೇಲ್ಪಟ್ಟ ಹಿರಿಯ ಸಂಪಾದಕರು ಪ್ರತಿ ತಿಂಗಳು ೧೦,೦೦೦, ಸಾವಿರ ಮಾಶಾಸನ ಪಡೆಯುತ್ತಿದ್ದಾರೆ. ಅಲ್ಲಿನ ಕಾನೂನು ಸಹ ರಾಜ್ಯದಲ್ಲಿ ಜಾರಿ ಬಂದು ಇದರ ಅನೂಕುಲ ಎಲ್ಲರಿಗೂ ಲಭಿಸಲಿ ಎಂದು ಶಾಸಕರಿಗೆ ಸಲಹೆ ನೀಡಿದರು.

ಈ ಸರಳ ಸಮಾರಂಭದಲ್ಲಿ ಜನಪ್ರಿಯ ಶಾಸಕ ಶ್ರೀ ವಿಶ್ವಾಸ ವಸಂತ ವೈಧ್ಯ ,ರಾಜ್ಯ ಅಧ್ಯಕ್ಷ ಶ್ರೀ ಮುರಗೇಶ ಶಿವಪೂಜೆ, ರಾಜ್ಯ ಉಪಾಧ್ಯಕ್ಷ ಶ್ರೀ ಸುಧೇಶಕುಮಾರ್, ಹಾಗೂ

ಶಾಸಕ ಸನ್ಮಾನ್ಯ ಶ್ರೀ ವಿಶ್ವಾಸ ವಸಂತ ವೈಧ್ಯ

ಅಥಿತಿಗಳಾಗಿ ಶ್ರೀ ರಾಜಶೇಖರ ವಿ ಕಾರದಗಿ,ಶ್ರೀ ಸುಧೀರ ದೊಡಮನಿ, ಶ್ರೀ ಬಸವರಾಜ ಪುಟ್ಟಿ, ಹಾಗೂ ಶ್ರೀ ಬಸವರಾಜ್ ಕಪ್ಪನವರ ಶ್ರೀ ಆರ್,ಎಂ, ನೀಡವಾಣಿ, ಹಾಗೂ ಸುಮಾರು ೧೪ ಜಿಲ್ಲಾ ಅಧ್ಯಕ್ಷರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ನಡೆದ ಟ್ರಸ್ಟಿಗಳ ಸಭೆಯಲ್ಲಿ ರಾಷ್ಟ್ರೀಯ ಅಧ್ಯಯನ ಪ್ರವಾಸ ಶಿಬಿರ ಹಾಗೂ ರಾಷ್ಟ್ರೀಯ ಕಾರ್ಯಕಾರಿನಿ ಸಭೆಯನ್ನು ಗೋವಾ ರಾಜ್ಯದಲ್ಲಿ ಮುಂದಿನ ತಿಂಗಳು ಜನೆವರಿ ೨೦ ರಿಂದ ೨೮ರ ಒಳಗೆ ಕಾರ್ಯಕ್ರಮ ನಡೆಸುವ ನಿರ್ಮಾಣ ಕೈಗೊಳ್ಳುವ ಮೂಲಕ ಅಲ್ಲಿನ ಅಜೆಂಡಾ ಹಾಗೂ ಪೂರ್ವ ಸಿದ್ದತೆ ಬಗ್ಗೆ ಚರ್ಚಿಸಲಾಯಿತು.

ಮತ್ತು ಇಂತಹ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಕಾರಿನಿ ಸಮಾರಂಭದಲ್ಲಿ ಸ್ಮರಣೆ ಸಂಚಿಕೆ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಾಧಕರಿಗೆ ನಗದು ಸಹಿತ ರಾಜ್ಗ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಹತ್ತು ಜನ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಲಾಯಿತು. ಈ ಟ್ರಸ್ಟಿಗೆ ನೂತನವಾಗಿ ಗದಗ ಜಿಲ್ಲೆಯ ಪತ್ರಿಕೆ ವಿತರಕರ ಸಂಘದ ರಾಜ್ಯ ಅಧ್ಯಕ್ಷ ಶಂಕರ ಕುದರಿ ಅವರನ್ನು ಸೆರ್ಪಡೆ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯಶಸ್ವಿಯಾಗಿ ಸಭೆ ಮುಗಿದ ನಂತರ ಊಟ ಮಾಡಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಕೊಳ್ಳಕ್ಕೆ ಬೇಟಿ ನೀಡಿ ತಾಯಿ ಆರ್ಶಿವಾದ ಪಡೆದು ಸಭೆ ವಿಸರ್ಜನೆ ಮಾಡಲಾಯಿತು.

ಸನ್ಮಾನ್ಯ ಶಾಸಕರಿಂದ ರಾಜ್ಯ ಅಧ್ಯಕ್ಷ ಶ್ರೀ ಮುರಗೇಶ ಶಿವಪೂಜಿ ಅವರಿಗೆ ಸನ್ಮಾನ ,

About vijay_shankar

Check Also

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.