Breaking News

ಅಮೀನಗಡ ಕುರಿ ಸಂತೆ ಸ್ಥಳಾಂತರವೇ ನನ್ನ ಮೊದಲ ಆದ್ಯತೆ ಕಾಂಗ್ರೇಸ್ ಪಕ್ಷದ ದಲಿತ ಯುವ ನಾಯಕ ಶ್ರೀ ರಮೇಶ ಮುರಾಳ ಕರೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಶ್ರೀ ರಮೇಶ ಈರಪ್ಪ ಮುರಾಳ ಕಾಂಗ್ರೆಸ್ ಪಕ್ಷದ ಯುವ ನಾಯಕ ನಾಗಿ, ಕಾರ್ಯಕರ್ತನಾಗಿ ಪಕ್ಷದಲ್ಲಿ ೨೫ ವರ್ಷಗಳಿಂದ ಪಕ್ಷಕ್ಕಾಗಿ ಸಮಾಜಕ್ಕಾಗಿ ,ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿ ಗಾಗಿ, ನಾನು ದುಡಿದಿದ್ದೇನೆ ಈಗ ನಗರದ ಪಟ್ಟಣ ಪಂಚಾಯತ ಚುನಾವಣಾ ಅಭ್ಯರ್ಥಿ ಯಾಗಿ ಕಣದಲ್ಲಿ ವಾರ್ಡ ನಂಬರ್ ೦೮ ರಲ್ಲಿ ಪರಿಶಿಷ್ಟ ಜಾತಿಯ ಕಟಗೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದೇನೆ.

ಸುಮಾರು ವರ್ಷಗ ಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತಾಗಿ ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಈ ಸಮಾಜದ ಜನಸೇವೆ ಮಾಡುತ್ತಾ ತಮ್ಮನ್ನು ತಾವು ಜೀವನದಲ್ಲಿ ತೋಡಗಿಸಿಕೊಂಡು ವರು, ಇಂದು ಸಾಮಾಜಿಕ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುರುತಿಸಿ ಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ರಮೇಶ ಈರಪ್ಪ ಮುರಾಳ ಅವರು ಇಂದು ವಾರ್ಡ ನಂಬರ್ ೦೮ ರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಅಭ್ಯರ್ಥಿಯಾದ ನನ್ನನ್ನು ಎಲ್ಲಾ ಅಲ್ಪಸಂಖ್ಯಾತ ಬಾಂಧವರು,ಕೊರಮ ಜನಾಂಗದ ಹಿರಿಯರು ತಾವೇ ನನ್ನ ಸೇವೆ ಹಾಗೂ ನಾನು ಈ ಹಿಂದೆ ಮಾಡಿದ ನನ್ನ ಅಧಿಕಾರ ಅವಧಿಯಲ್ಲಿನ ಕೆಲಸ ನೋಡಿ ತಾವು ಮತ ಹಾಕಿ ಈ ಹೊಸ ವರ್ಷಕ್ಕೆ ನನಗೆ ಅಧಿಕಾರ ನೀಡಬೇಕು.

ಅಧಿಕಾರ ನೀಡಿದ್ದೆ ಆದರೆ ಮೊದಲು ಅಮೀನಗಡ ನಗರದ ಕುರಿ ಸಂತೆಯನ್ನು ಸ್ಥಳಾಂತರ ಮಾಡಿ ಎಲ್ಲಾ ರೀತಿಯ ಅಲ್ಲಿ ವ್ಯಾಪಾರಸ್ಥರಿಗೆ ಮೂಲ ಸೌಕರ್ಯ ಮಾಡುವುದಾಗಿ ಹೇಳಿದರು,ಮಾನ್ಯ ಮತ ಬಾಂಧವರು ನನ್ನ ಈ ಪ್ರಣಾಳಿಕೆ ನೋಡಿ ಗುರುತಿಸಿ ಮತ ನೀಡಬೇಕೆಂದು ವಿನಂತಿಸುತ್ತೇನೆ ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಈಗಾಗಲೇ ಜನರಿಗೆ ಸರಕಾರ ಬದಲಿಸುವ ಸಲುವಾಗಿ ರಾಜ್ಯವ್ಯಾ ಪ್ತಿ ಹೋರಾಟ ನಡೆಯುತ್ತಿದೆ, ಜನಸಾ ಮಾನ್ಯರ ದಿನಸಿ ಬೆಲೆಗಳು ಗಗನಕ್ಕೆ ಏರಿವೆ, ಡಿಸೇಲ್ – ಪೆಟ್ರೊಲಿಯಮ್ ಬೆಲೆ ಮಾತಾಡೊ ಹಾಗಿಲ್ಲ ಹೀಗಾಗಿ ಸ್ಥಳಿಯ ಈ ಚುನಾವಣೆ ಮೂಲಕ ಬಿಜೆಪಿ ಸರಕಾರಕ್ಕೆ ಜನರ ನೋವು ಕಷ್ಟ ಏನೂ ಎಂಬುದನ್ನು ತಿಳಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ನಿಮ್ಮ ಮತ ನೀಡಿ ಆರ್ಶಿವಾದ ಮಾಡಬೇಕು ಎಂದರು .

ಈಗ ನಮ್ಮ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವ ದಿಸಬೇಕೆಂದು ತಿಳಿದರು.೦೮ ನೇ ವಾರ್ಡ ಅಭಿವೃದ್ಧಿಯಿಂದ ಮರಿಚಿಕೆಯಾಗಿದೆ, ಉತ್ತಮ ರಸ್ತೆ, ಹಾಗೂ ಒಳಚರಂಡಿ ವ್ಯೆವಸ್ತೆ,ಬಡವರಿಗೆ ವಿವಿಧ ವಸತಿ ಯೋಜನೆ ಅಡಿ ಮನೆಗಳನ್ನು ಹಾಕಿ ಅವರ ಮನೆ ಮಗನಾಗಿ ನಾನು ಹಗಲು ರಾತ್ರಿ ಕೆಲಸ ಮಾಡುತ್ತೇನೆ.

ವೈಜ್ಞಾನಿಕವಾಗಿ ಹೈಟೆಕ್ ಕಾಮಗಾರಿ ಮಾಡಲು ಪಣ ತೋಟ್ಟಿದ್ದೇನೆ , ಮಾನ್ಯರು ನನಗೆ ಆರ್ಶಿವಾದ ಮಾಡಬೇ ಕೆಂದು, ವಿನಂತಿಸಿದರು.ಅಲ್ಲದೆ ದಿನದ 24X 7ಎಲ್ಲಾ ಕುಡಿಯುವ ನೀರು ಎಲ್ಲಾ ರೀತಿಯ ಮೂಲ ಭೂತ ಸೌಲಭ್ಯಗಳನ್ನು ಮಾಡುತ್ತೇನೆ ಎಂದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಮೈಬೂಬ ಬೇಪಾರಿ,ಶ್ರೀ ಹಸೇನಸಾಬ ಬೇಪಾರಿ,ಶ್ರೀ ಮುತ್ತು ಕಂಬಳಿ,ಶ್ರೀ ಅಬುಬಕರ್ ಬೇಪಾರಿ,ಮುಂತಾವರು ಉಪಸ್ಥಿತಿ ಇದ್ದರು. ಈ ಸಂದರ್ಭದಲ್ಲಿ ಎಲ್ಲಾ ಮತದಾರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.

ಕಾಂಗ್ರೆಸ್ ಪಕ್ಷದ ಚಿನ್ನೆ ಗುರುತಿಸಿ ನಿಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಎಲ್ಲಾ ಪಕ್ಷದ ಮುಖಂಡರಲ್ಲಿ ಮತದಾರರಲ್ಲಿ ವಿನಂತಿಸುತ್ತೇನೆ.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.