Breaking News

Recent Posts

ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಖೇಲ್ ರತ್ನ ಗೌರವಕ್ಕೆ ಶಿಫಾರಸು

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕ್ರಿಕೆಟಿಗ ರೋಹಿತ್ ಶರ್ಮಾರಿಗೆ ಖೇಲ್​ ರತ್ನ ನೀಡಿ ಗೌರವಿಸುವಂತೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗೌರವ ಇದಾಗಿದೆ. ಟೀಂ ಇಂಡಿಯಾದ ಉಪನಾಯಕರಾಗಿರುವ ಶರ್ಮಾ ಸೇರಿ ನಾಲ್ವರು ಕ್ರೀಡಾಪಟುಗಳಿಗೆ ಖೇಲ್​ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. ಏಷ್ಯನ್ ಗೇಮ್ ಗೋಲ್ಡ್​ ಮೆಡಲಿಸ್ಟ್​ ವಿನೇಶ್ ಪೊಗಾಟ್, ಟೇಬಲ್ ಟೆನಿಸ್ ಚಾಂಪಿಯನ್ ಮನಿಕಾ ಬಾತ್ರಾ, ಪ್ಯಾರಾಒಲಂಪಿಕ್ ವಿಜೇತ ​ಮರಿಪ್ಪನ್ ಥಂಗವೇಲು ಅವರಿಗೆ ಖೇಲ್​​ ರತ್ನ …

Read More »

ಕೋವಿಡ್‌ ಹರಡುವಿಕೆ, ನಿರ್ವಹಣೆ ಕುರಿತ ಸಂಶೋಧನೆಗೆ ಭಾರತ-ಅಮೆರಿಕದ 8 ತಂಡಗಳ ಆಯ್ಕೆ

ನವದೆಹಲಿ: ಕೋವಿಡ್‌ 19 ರೋಗ ಹರಡುವ ಮತ್ತು ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ಸಂಶೋಧನೆ ನಡೆಸುವುದಕ್ಕಾಗಿ ಭಾರತ ಮತ್ತು ಅಮೆರಿಕ ರಾಷ್ಟಗಳ ಸಂಶೋಧಕರನ್ನೊಳಗೊಂಡ ಎಂಟು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಸಂಶೋಧನಾ ತಂಡಗಳ ಸದಸ್ಯರು, ಸೋಂಕು ನಿಗ್ರಹ, ರೋಗ ನಿರೋಧಕಶಕ್ತಿಯ ವ್ಯತ್ಯಾಸ, ತ್ಯಾಜ್ಯ ನೀರಿನಲ್ಲಿ ಸಾರ್ಸ್‌ ಕೋವ್‌ -2 ವೈರಸ್‌ಗಳನ್ನು ಗುರುತಿಸುವುದು, ರೋಗ ಪತ್ತೆಯ ಕಾರ್ಯವಿಧಾನಗಳು, ರಿವರ್ಸ್ ಜೆನಿಟಿಕ್ಸ್‌ ಕಾರ್ಯತಂತ್ರಗಳು ಮತ್ತು ಔಷಧ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ …

Read More »

ಕುಲ್ಗಾಂನಲ್ಲಿ ಸೇನೆಯ ಬಂಕರ್ ಮೇಲೆ ಉಗ್ರರ ದಾಳಿ : ಓರ್ವ ಅಧಿಕಾರಿಗೆ ಗಾಯ

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಅರೆಸೇನಾ ಪಡೆಯ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಅಧಿಕಾರಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 8-45ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ನಿಹಮಾದಲ್ಲಿನ ಕ್ಯಾಂಪ್ ಹೊರಗಡೆ ಸಿಆರ್ ಪಿಎಫ್ 18ನೇ ಬೆಟಾಲಿಯನ್ ನ ಬಂಕರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿ ವೇಳೆ ಸಿಆರ್ ಪಿಎಫ್ ನ …

Read More »