
ಹನಮಸಾಗರ :
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ತಿರುಪತಿ ವೆಂಕಟರಮಣ ಸ್ವಾಮಿ ಕರ್ನಾಟಕದ ಎರಡನೇ ತಿರುಪತಿ ದೇವಸ್ಥಾನ ಎಂದು ಪ್ರಸಿದ್ದಿ ಪಡೆದಿದೆ ಇಲ್ಲಿನ ಆಡಳಿತ ಮಂಡಳಿ ಈ ದೇವಸ್ಥಾನದ ಜೀರ್ನೋದ್ದಾರ ಮಾಡಿದ್ದು ಶ್ಲಾಘನೀಯ ,ಆದರೆ ಈ ಕಾರ್ತಿಕ ಮಾಸದಲ್ಲಿ ಪೂಜೆ ಬ್ರಾಹ್ಮೀ ಸಮಯದಲ್ಲಿ ನಡೆಯಬೇಕೆಂದು ಹುನಗುಂದ ನಗರದ ಉಧ್ಯಮಿ ಶ್ರೀ ಮಹಾಂತೇಶ ,ಚಿತ್ತರಗಿ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳು ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಹಾಗೂ ರಾಜ್ಯದ ದೂರದ ಊರಿನಿಂದ ಬರುವ ಭಕ್ತರಿಗೆ ವಿಶೇಷ ಮಾಸ & ದಿನಗಳಲ್ಲಿ ಬೇಗ ಪೂಜಾ ಕೈಂ ಕಾರ್ಯಗಳು ನಡೆದರೆ ಭಕ್ತರಿಗೆ ಅನುಕೂಲ ಅಗುತ್ತದೆ. ಇಂತಹ ಕಾರ್ತಿಕ ಮಾಸದಲ್ಲಿ ಕೂಡ ಅರ್ಚಕರು ಎಂದಿನಂತೆ 9:30 ಕ್ಕೆ ಪೂಜೆ ಮಾಡುವುದು ನಮ್ಮ ಹಿಂದೂ ಧರ್ಮದ ಸಂಸ್ಕೃತಿ ಅಲ್ಲ ಆಡಳಿತ ಮಂಡಳಿಯವರು ಇತ್ತ ಗಮನ ಹರಿಸಿ ವಿಶೇಷ ದಿನಗಳಲ್ಲಿ ,ಪೂಜಾ ಸಮಯವನ್ನು ಬದಲಿಸಿ ಸೂರ್ಯೋದಯ ಸಮಯಕ್ಕೆ ಪೂಜೆ ಮುಗಿಸಲು ವಿನಂತಿಸಿದರು.