Breaking News
ಕೆಲೂರಿನ PKPS ಸಂಘಕ್ಕೆ ನೂತನವಾಗಿ ಆಯ್ಕೆಯಾದ ಶ್ರೀ ವಿ,ಕೆ ಪೂಜಾರ ಅವರಿಗೆ ಗೌರವ ಸನ್ಮಾನ

ಕೆಲೂರಿನ PKPS ಸಂಘಕ್ಕೆ ನೂತನವಾಗಿ ಆಯ್ಕೆಯಾದ ಶ್ರೀ ವಿ,ಕೆ ಪೂಜಾರ ಅವರಿಗೆ ಗೌರವ ಸನ್ಮಾನ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕೆಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ವಜೀರಪ್ಪ ಕೆ ಪೂಜಾರ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀಬಾಯಿ ಆಸಂಗಿ ಅವರು ಕಾಂಗ್ರೆಸ್‌ ನ ಬೆಂಬಲಿತ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರು . ಇಂದು ಅಮೀನಗಡದ

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್, ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ತುಕಾರಾಮ ಪವಾರ್ ,ಉಧ್ಯಮಿ ಶ್ರೀ ಎನ್,ಎಸ್ ಕಂಚಿ, ಪತ್ರಕರ್ತರರಾದ ಶ್ರೀ ಕಿರಣ ಕಾಳಗಿ ಹಾಗೂ ರಮೇಶ ಚವ್ಹಾಣ, ಶ್ರೀ ಬಸವರಾಜ್ ಕಾಳಗಿ, ಶ್ರೀ ಶರಣಯ್ಯ ಹಿರೇಮಠ ಅವರು ಸೇರಿ ಗೌರವ ಸನ್ಮಾನ ಮಾಡಿ ಸಿಹಿ ಹಂಚಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರು ನನ್ನ ಗೆಲುವಿಗೆ ಕಾರಣಿ ಭೂತರಾದ ಸಂಘದ ಎಲ್ಲಾ ಸದಸ್ಯರಿಗೆ ಹಾಗೂ ಹಿರಿಯರಿಗೆ ನನ್ನ ಕೃತಜ್ಞತೆಗಳು ಈ ಸಂಘದ ಏಳಿಗೆಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೊಡಿಸುತ್ತಾರೆ, ಜಿಲ್ಲೆಯಲ್ಲಿ ಇದೊಂದು ಉತ್ತಮ ಸಂಘವಾಗಿ ಬೆಳೆಯಲಿದೆ, ಎಂದರು.

About vijay_shankar

Check Also

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ  ಶಾಂತಿ ಸಭೆ

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಮುಖಂಡರೊಂದಿಗೆ ಶಾಂತಿಸಭೆ ಚರ್ಚೆ ನಡೆಸುತ್ತಿರುವ CPI ಸುನೀಲ ಸವದಿ, ಹುನಗುಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಹಾಗೂ ಅಂಜುಮನ್ ಕಮಿಟಿ ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.