Breaking News

ಸರಳವಾಗಿ ನಡೆದ ಮೊಹರಂ ಹಬ್ಬ

ಅಮೀನಗಡ : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಮೊಹರಂ ಹಬ್ಬವು ಒಂದು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ ಹಾಸನ್ ಮತ್ತು ಹುಸೇನ್‍ರ ಪುಣ್ಯ ಸ್ಮರಣೆ ನಿಮಿತ್ಯ ಆಚರಿಸುವ ಹಬ್ಬವೇ ಈ ಮೊಹರಂ.

ಈ ಹಬ್ಬವನ್ನು ಪ್ರತಿ ವರ್ಷ ಬಹು ಸಡಗರದಿಂದ ಹಿಂದೂ-ಮುಸ್ಲಿಂ ಭಾಂಧವರು ಕೂಡಿಕೊಂಡು ಆಚರಿಸುತ್ತಿದ್ದು, ಹಳ್ಳಿಗಾಡಿನಲ್ಲಿ ಈ ಹಬ್ಬದ ಸಂಭ್ರಮ ಸೊಗುಡು ನೋಡುಗರ ಕಣ್ಣ-ಮನಗಳನ್ನು ತಣಿಸುತ್ತಿತ್ತು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಭ್ರಮಕ್ಕೆ ಕಡಿವಾಣ ಬಿದ್ದಿದೆ.

ಈ ಸಂಧರ್ಭದಲ್ಲಿ ಜನ್ರು ವಿವಿಧ ವೇಷ ಭೂಷಣಗಳಿಂದ ಕಂಗೊಳಿಸುತ್ತಿದ್ರು. ಸಂಗೀತ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ, ಕುಣಿತ, ಮಟಕಿ ಕುಣಿತ, ಮರಗಾಲು ಕುಣಿತ, ಹೀಗೆ ಅನೇಕ ಕುಣಿತದಿಂದ ನೋಡುಗರನ್ನು ತುದಿ ಗಾಲಿನ ಮೇಲೆ ನಿಲ್ಲಿಸುತ್ತಿತ್ತು. ಆದ್ರೆ, ಕೊರೊನಾ ಹಾವಳಿಯಿಂದಾಗಿ ಈ ಕುಣಿತುಗಳು ಈ ವರ್ಷ ನಡೆಯದೇ ಇರುವುದು ಭಕ್ತ ವೃಂದದಲ್ಲಿ ನಿರಾಸೆ ಮೂಡಿಸಿದೆ.

ಅದರಂತೆ ಅಮೀನಗಡಲ್ಲಿಯೂ ಕೊರೊನಾ ಹಿನ್ನೆಯಲ್ಲಿ ಈ ಬಾರಿಯ ಮೊಹರಂ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ್ದಾರೆ. ಪಟ್ಟಣದಲ್ಲಿ ಇಂದು ಸರಳವಾಗಿ ಇಂದು ಕೆಲವೇ ಜನರು ಭಾಗವಹಿಸಿ ಸರಳ ರೀತಿಯಲ್ಲಿ ಆಚರಿಸಿದ್ದಾರೆ. ವರದಿ : ಎಮ್.ಡಿ.ಮುಸ್ತಾಪ್

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.