Breaking News

ಇಲಕಲ್ಲ ನಗರದಲ್ಲಿ ಹೋಟೆಲ್ ನವಲೇರಿ ಪ್ಯಾಲೇಸ್ ಲೋಕಾರ್ಪಣೆ ಮಾಡಿದ ಡಾ: ವಿಜಾಯನಂದ ಕಾಶಪ್ಪನವರ

ಇಲಕಲ್ಲ : ಇಲಕಲ್ಲ : ನನ್ನ ಬಹುದಿನಗಳ ಕನಸು ಇಂದು ನನಸಾಗಿದೆ,ನಾನು ಕೂಡ ಇಂತಹ ಒಂದು ಪ್ಯಾಲೇಸ್ ಕಟ್ಟಬೇಕು ಅಂತ ಕಾಲಂ ಕೂಡ ಹಾಕಿದ್ದೆ ಆದರೆ ನನ್ನ ರಾಜಕೀಯ ಒತ್ತಡದಲ್ಲಿ ಅದನ್ನು ಕೈ ಬಿಟ್ಟೆ ಈಗ ನಮ್ಮ ಹನಮಂತಪ್ಪ ರಾಠೋಡ ಅವರು ಬಹಳ ಶ್ರಮ ಪಟ್ಟು ಈ ಭವ್ಯವಾದ ಪ್ಯಾಲೇಸ್ ಕಟ್ಟಿದ್ದಾರೆ,ಅವರನ್ನು ನಾನು ಬಹಳ ಹತ್ತಿರದಿಂದ ಅವರನ್ನು ಕಂಡಿದ್ದೇನೆ. ನಾವೆಲ್ಲ ಅವರ ಮುಂದೆ ಬೆಳೆದವರು,ಇಂದು ಇಲಕಲ್ಲ ನಗರಕ್ಕೆ ಕಳಶ ಇಟ್ಟಂತೆ ಇಂತಹ ಒಂದು ಸುಂದರ ನವಲೇರಿ ಪ್ಯಾಲೇಸ್ ಕಟ್ಟಿದ್ದು ನಗರಕ್ಕೆ ದೊಡ್ಡ ಹೆಸರು ತಂದಿದೆ,ದೇಶ ವಿದೇಶಿಗಳಿಂದ ಇಲ್ಲಿಗೆ ಬರುವ ಗ್ರ್ಯಾನೈಟ್ ಉದ್ಯಮಿಗಳಿಗೆ ಇಂತಹ ಸುಸಜ್ಜಿತ ಹಾಗೂ ಹೈಟೆಕ್ ಹೋಟಿಲಿನ ಅವಶ್ಯಕತೆಯನ್ನು ಹನಮಂತಪ್ಪ ಅಣ್ಣನವರು ನಿಗಿಸಿದ್ದಾರೆ. ಇದನ್ನು ಅವರ ಮಕ್ಕಳು ಅವರ ತಂದೆಯಂತೆ ಸಾರ್ವಜನಿಕ ರಂಗದಲ್ಲಿ ಹೆಸರು ಮಾಡಿ,ಈ ಪ್ಯಾಲೇಸ್ ಬೆಳೆಸಬೇಕು ಎಂದು ಈ ಹೋಟೆಲ್ ನವಲೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾಜಿ ಶಾಸಜಕ ಡಾ; ವಿಜಯಾನಂದ ಎಸ್ ಕಾಶಪ್ಪನವರು ಮಾತನಾಡಿದರು.

ಇಲಕಲ್ಲ ನಗರದ ಹೋರ ಹೋಲಯದಲ್ಲಿ ಲೋಕಾರ್ಪಣೆ ಗೊಂಡ ನೂತನ ಹೋಟೆಲ್ ನವಲೇರಿ, ಮಾಜಿ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರ,ಹಾಗೂ ಕುಷ್ಶಗಿ ಮತಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಉದ್ಘಾಟನೆ ಮಾಡಿದರು.
ಪ,ಪೂ, ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಮಾಜಿ ಶಾಸಕ ಡಾ: ವಿಜಾಯನಂದ ಕಾಶಪ್ಪನವರ, ಗಣಿ ಉಧ್ಯಮಿ ರಾಜು ಭೋರಾ,ಹನಮಂತಪ್ಪ ರಾಠೋಡ, ಮಲ್ಲಿಕಾರ್ಜುನ ಚರಂತಿಮಠ ಸುಭಾಸ್ ತಾಳಿಕೋಟಿ ಮತ್ತಿತರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಹೈಟೇಕ್ ಪ್ಯಾಲೇಸ್‌ ನವಲೇರಿ ಒಳಾಂಗನಾ

ಇಲಕಲ್ಲ ನಗರದ ಹೋರ ಹೋಲಯದಲ್ಲಿ ಲೋಕಾರ್ಪಣೆ ಗೊಂಡ ನೂತನ ಹೋಟೆಲ್ ನವಲೇರಿ, ಮಾಜಿ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರ,ಹಾಗೂ ಕುಷ್ಶಗಿ ಮತಕ್ಷೇತ್ರದ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಠಾಕೂರರ ಮಾಡಿದರು.

ಪ,ಪೂ,ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆರ್ಶಿವಚನ
ಹೋಟೆಲ್ ನವಲೇರಿ ಪ್ಯಾಲೇಸ್ Reception ಹಾಲ್
ಹೋಟೆಲ್ ನವಲೇರಿ ( ಕ್ಯಾರಿಯಾಡ್ ) ಪೂಜಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು ,ಮಾಜಿ ಶಾಸಕರು,ಹಾಲಿ ಶಾಸಕರು ಗಣಿ ಉಧ್ಯಮಿಗಳು ,ನಗರದ ಪ್ರಮುಖರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.

ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಪ,ಪೂಜ್ಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರ ವಹಿಸಿದ್ದರು, ನವಲೇರಿ ಪ್ಯಾಲೇಸ್ ಉಧ್ಘಾಟಕರಾಗಿ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದು ಶ್ರೀ ಹನಮಂತಪ್ಪ ಆರ್ ರಾಠೋಡ ಮುಖ್ಯ ಅಥಿತಿಗಳಾಗಿ ಶ್ರೀ ಮಲ್ಲಿಕಾರ್ಜುನ ಚರಂತಿಮಠ, ಗಣಿ ಉದ್ಯಮಿ ಶ್ರೀ ರಾಜು ಬೋರಾ, ಶ್ರೀ ಸುಭಾಸ್ ತಾಳಿಕೋಟಿ,ಶ್ರೀ ಶಾಂತಕುಮಾರ ಸುರಪೂರ,ಶ್ರೀ ಬಸವರಾಜ್ ಗದ್ದಿ,ಶ್ರೀ ಮಾಂಗೀಲಾಲ್ ಬೋರಾ ಶ್ರೀ ಅಶೋಕ ಮೂಗಾಪೂರ,ಶ್ರೀ ಡಾ: ಅಶೋಕ ಬಂಗಾರಶಟ್ಟಿ ಶ್ರೀ ಮಹಾಂತೇಶ ಅಂಗಡಿ,ಶ್ರೀ ಸಂಗಣ್ಣ ಹೋಲೇಕಾರ ,ಶ್ರೀ ಸಿದ್ದಣ್ಣ ನರಗುಂದ ಶ್ರೀ ಮಲ್ಲಿಕಾರ್ಜುನ ಅಗ್ನಿ,ಶ್ರೀ ಗೌತಮ್ ಬೋರಾ, ಶ್ರೀ ಅಜೀತ್ ಬೋರಾ, ಶ್ರೀ ಲಕ್ಷ್ಮಣ್ಣ ಗುರಂ ,ದೀಪಕ್ ರಾಠೋಡ, ಶ್ದೀ ದೀಪಕ್ ರಾಠೋಡ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.