
ಪುರಾತನ ತಿಹಾಸಿಕ ಶೂಲೇಶ್ವರ ಶಿವ
ದೇವಾಲಯದಲ್ಲಿ ನಾಳೆ ಕಾರ್ತಿಕೋತ್ಸವ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ 8 ನೇ ಶತಮಾನದಲ್ಲಿ ನಿರ್ಮಾಣಗೊಂಡ ಪುರಾತನ ಶ್ರೀ ಶೂಲೇಶ್ವರ ಶಿವಾಲಯದಲ್ಲಿ ನಾಳೆ
ಅದ್ದೂರಿ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಅದ್ದರಿಂದ ಜರುಗಲಿವೆ ಬೆಳಗ್ಗೆ ೮ ಗಂಟೆಗೆ ಶಿವನಿಗೆ ರುದ್ರಾಭಿಶೇಖ ಹಾಗೂ ಸಾಯಂಕಾಲ ೪ ಗಂಟೆಗೆ ಕ್ಚೀರಾಭಿಶೇಖ ಹಾಗೂ ಪುಷ್ಕರಣಿಯಲ್ಲಿ ಗಂಗೆಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆದು ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿ ಕಾರ್ತಿಕ ಇಳಿಸಲಾಗುತ್ತದೆ, ಸಹತ್ರ ದೀಪಾಲಂಕಾರ ಈ ಶಿವಾಲಯದಲ್ಲಿ ಕಂಗೋಳಿಸಲಿದೆ,ಭಕ್ತರು ಶಿವಾಲಯಕ್ಕೆ ಬಂದಾಗ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದು ಈ ಸಮಿತಿಯ ಅಧ್ಯಕ್ಷ ದೇವರಾಜ್ ಕಮತಗಿ ಹಾಗೂ ಉಪಾಧ್ಯಕ್ಷ ನಾಗೇಶ ಗಂಜಿಹಾಳ ಮಾನು ಹೊಸಮನಿ,ಅರ್ಚಕರಾದಮಹಾಂತಯ್ಯ ಹಿರೇಮಠ, ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವ ಬ್ರೀಗೆಡ್ ತಂಡದಿಂದ ಸ್ವಚ್ಚತಾ ಕಾರ್ಯ ಹಾಗೂ ದೀಪಾಲಂಕಾರ ನಡೆಯಲಿದೆ. ಎಲ್ಲಾ ಪ್ರಮುಖ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಬೇಕೆಂದು ಸಮಿತಿ ಕಾರ್ಯದರ್ಶಿ ಶ್ರೀ ಎಸ್,ಡಿ,ಭಜಂತ್ರಿ ಅವರು ತಿಳಿಸಿದರು.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಶ್ರೀ ಶೂಲೇಶ್ವರ ಶಿವಾಲಯ
