ಗುಡೂರುsc : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸುಕ್ಷೇತ್ರ ಭೀಮನಗಡದ ಶ್ರೀ ವೀರಭದ್ರೇಶ್ವರ ಲೀಲಾಮಠದಲ್ಲಿ ಇದೆ ಅಕ್ಟೋಬರ್ ೩೧ರಂದು ರಥೋತ್ಸವ ಹಾಗೂ ನವೆಂಬರ್ ೧ರಂದು ಅದ್ದೂರಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ,ಈಗಾಗಲೇ ಸುಮಾರು ೧೦ ಜೋಡಿ ನವ ದಂಪತಿಗಳು ಹೆಸರು ನೋಂದಣಿ ಮಾಡಿದ್ದಾರೆ. ಗ್ರಾಮದ ಹಾಗೂ ಈ ಮಠದ ಎಲ್ಲಾ ಭಕ್ತರು ಈ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಮದುವೆಗೆ ಬಂದು ವಧು ವರರಿಗೆ ಆರ್ಶಿವಾದ ಮಾಡಬೇಕು, ಎಂದರು. ಈ ಸಮಾರಂಭಕ್ಕೆ ಅನೇಕ ಗಣ್ಯರು,ಶರಣರು,ಪ್ರಮುಖರು ಆಗಮಿಸುತ್ತಿದ್ದು,ಈ ಧಾರ್ಮಿಕ ಜಾತ್ರಾ ಮಹೋತ್ಸವಕ್ಕೆ ತಾವೇ ಸ್ವತಹ ದೇಣಿಗೆ ನೀಡಬಹುದು,ನಾವಾಗಲಿ ಯಾರಿಂದಲೂ ಕೇಳಿ ಪ್ರಸಾದಕ್ಕೆ ದೇಣಿಗೆ ಕೇಳುವುದಿಲ್ಲ ಎಂದರು.ನಿರಂತರ ೨೨ ನೇ ವರ್ಷದ ಈ ಜಾತ್ರಾ ಮಹೋತ್ಸ ಹಾಗೂ ಸಾಮೂಹಿಕ ವಿವಾಹ ಸಮಾರಂಭಕ್ಕೆ ನಾಡಿನ ಎಲ್ಲಾ ಸದ್ಬಕ್ತರು ಹಾಗೂ ಗಣ್ಯರು ,ಮಠಾದೀಶರು,ಆಗಮಿಸಲಿದ್ದು ಎಲ್ಲರೂ ಇದೆ ಅಕ್ಟೋಬರ್ ೩೧ ರಂದು ಅದ್ದೂರಿ ರಥೋತ್ಸವದಲ್ಲಿ ಪಾಲ್ಹೊಳ್ಳಲು ಇದೇ ಪ್ರೀತಿಯ ಆಮಂತ್ರಣ