ಗುಡೂರು : ಇಲಕಲ್ಲ ತಾಲೂಕಿನ ಭೀಮನಗಡ,ಗ್ರಾಮದ ಸುಕ್ಷೇತ್ರ ಶ್ರೀ ವೀರಭದ್ರೇಶ್ವರ ಲೀಲಾ ಮಠದಲ್ಲಿ ಇಂದು ಪ,ಪು,ಶಿವಶರಣ ಕಲ್ಲಿನಾಥ ಮಹಾಸ್ವಾಮಿಗಳು ಹಾಗೂ ಪ,ಪೂ, ಕಾಮೇಶ ಸ್ವಾಮಿಗಳ ಸಾನಿಧ್ಯದಲ್ಲಿ ಮಾಡಲಗೇರಿಯ ಶ್ರೀ ,ಹ, ನೇ, ಭೀಮನಗೌಡ್ರ ಅವರ ” ಜಾನಪದ ಸುರಿದರೆ.

ಎಂಬ ಜಾನಪದ ಹಾಡುಗಳ ಬಿಡುಗಡೆ ಸರಳ ಸಮಾರಂಭ ನಡೆಯಿತು,ಬೆಳಗಾವಿ ಜಿಲ್ಲೆಯ ನರಗುಂದದವರು, ಈ ಸಭೆ ಉದ್ದೇಶಿಸಿ ಮಾತನಾಡಿದ ಸಭೆಯ ಉದ್ಘಾಟಕರಾದ
ಶ್ರೀ ಶ್ರೀನಿವಾಸ ಕೆ,ಉಪ್ಪಾರ ಮಾತನಾಡಿ ಇಂತಹ ಸಾಹಿತ್ಯಗಾರರು ಅಲ್ಲಿಂದ ಇಲ್ಲಿ ಇಂತಹ ವೀರಭದ್ರೇಶ್ವರನ ಸಾನಿಧ್ಯದಲ್ಲಿ ಹಾಗೂ ಗುರುಗಳ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು, ಮುಖ್ಯ ಅಥಿತಿಗಳು ಹಾಗೂ ಪುಸ್ತಕ ಬಿಡುಗಡೆಯ ದಾನಿಗಳಾದ ಈಶ್ವರ,ಯ,ಮಣ್ಣೂರು ,ಮಾತನಾಡಿ ಸಾಹಿತ್ಯ ಮುಂದಿನ ಪೀಳಿಗೆಗೆ ಕೊಡುಗೆ ಆಗಬೇಕಾದ್ರ ಸಾಹಿತ್ಯ,
ಜೀವಂತ ಉಳಿಯ ಬೇಕಾದ್ರ ಬಡ ಸಾಹಿತ್ಯಗಾರಿಗೆ ನಾವು ಸಹಾಯ,ಸಹಕಾರ ಮಾಡುವುದು ನಮ್ಮ ಧರ್ಮ ಎಂದರು ,ಮುಂದಿನ ದಿನಮಾನದಲ್ಲಿ ಇನ್ನೂ ಉತ್ತಮ ಪುಸ್ತಕ ಬರೆಯಿಲ್ಲಿ ನಮ್ಮ ಸಹಾಯ,ಸಹಕಾರ ಯಾವತ್ತು ಇದೆ ಎಂದರು.ಸಭೆ ಮುಖ್ಯ ಅಥಿತಿಸ್ಥಾನ ವಹಿಸಿದ ಪತ್ರಕರ್ತರು ಹಾಗೂ ಸಮಾಜೀಕ ಹೋರಾಟಗಾರು ಶ್ರೀ ಆರ್,ಬಿ,ಜಿ,ಘಂಟಿ ಅವರು ಮಾತನಾಡಿ ಹಿಂದಿನ ೧೨ನೇ ಶತಮಾನದ ಮಹಾನ್ ೨೧೫ ಶಿವಶರಣರ ವಚನಸಾಹಿತ್ಯ ಒಂದೇ ಗ್ರಂಥದಲ್ಲಿ ಓದುವ ಭಾಗ್ಯವನ್ನು

ಶ್ರೀ ಹ,ನೇ,ಭೀಮನಗೌಡ್ರ ರಚಿಸುವ ಸಂಕಲ್ಪವನ್ನು ಮಾಡಿದ್ದು ನಿಜಕ್ಕೂ ಶ್ಲಾಘನೀಯ ಇಂತಹ ಸಾಹಿತ್ಯಗಾರರಿಂದ ಇತಿಹಾಸ ಅಜರಾಮರವಾಗಿ ಉಳಿಯಲಿದೆ ಎಂದರು. ಇನ್ನೋರ್ವ ಮುಖ್ಯ ಅಥಿತಿಗಳಾದ ಶ್ರೀ ಪಡಿಯಪ್ಪ ಬೊಮ್ಮನಾಳ ಹಾಗೂ ಶೇಖಪ್ಪ ಉಪ್ಪಾರ ಮಾಜಿ ಅಧ್ಯಕ್ಷರು SDMC ಮತ್ತು ಮತ್ತು ಸಂಪಾದಕರಾದ ಶ್ರೀ ಡಿ,ಬಿ,ವಿಜಯಶಂಕರ ,ಗ್ರಾಮದ ಪ್ರಮುಖರು ಉಪಸ್ಥಿತಿಯಲ್ಲಿ ಇದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News