
ಕಮತಗಿ: ನಗರದ ಕುರುಹಿನಶಟ್ಟಿ ಸಮಾಜ ಭವನದಲ್ಲಿ ಮೊಹರಮ್ ಹಬ್ಬದ ನಿಮಿತ್ತವಾಗಿ ಹಿಂದೂ – ಮುಸ್ಲಿಂ ಸಮಾಜ ಬಾಂಧವರನ್ನು ಕೂಡಿಸಿ ಶಾಂತಿ ಪಾಲನೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅನೇಕ ಮುಖಂಡರು ಭಾವಹಿಸಿ ಈ ಮೊಹರಮ್ ಹಬ್ಬವನ್ನು ಭಾವೈಕ್ಯತೆಯಿಂದ ಹಾಗೂ ಯಾವುದೇ ರೀತಿ ಶಾಂತಿ ಕದಡದಂತೆ ಸೌಹಾರ್ದವಾಗಿ ಹಬ್ಬ ಆಚರಿಸಲು ಕರೆ ನೀಡಿದರು.
ಈ ಶಾಂತಿ ಪಾಲನೆ ಸಭೆ ಉದ್ದೇಶಿಸಿ ಮಾತನಾಡಿದ PSI ಶಿವಾನಂದ ಅವರು ಈ ಕಮತಗಿ ಗ್ರಾಮ ಯಾವತ್ತು ಶಾಂತಿ ಹಾಗೂ ಭಾವೈಕ್ಯಗೆ ಹೆಸರಾಗಿದೆ ಈ ಮೊಹರಮ್ ಹಬ್ಬದಲ್ಲಿ ಯಾವತ್ತು ಕೆಟ್ಟ ಘಟನೆಗಳು ನಡೆದಿಲ್ಲ ,ಇನ್ಮುಂದೆ ಎಂದಿಗೂ ನಡೆಯಬಾರದು,ಸಮಾಜದ ಎಲ್ಲಾ ಮುಖಂಡರು ಸಮಾಜದಲ್ಲಿ ಶಾಂತಿ ಕದಡದಂತೆ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು, ಯಾರಾದರೂ ಶಾಂತಿ ಕದಡಲು ಪ್ರಯತ್ನ ಮಾಡಿದರೆ, ಉಹಾ,ಪೂಹಕ,ಸುದ್ದಿ ಹರಡಿದರೆ,ಅಂತವರ ವಿರುದ್ದ ಕಠಿಣವಾದ ಕ್ರಮ ಜರುಗಿಸುತ್ತೇನೆಂದು ಕಡಖ್ ವಾರ್ನ ಮಾಡಿದರು.
ಈ ಸಭೆ ಉಧದೇಶಿಸಿ ಪತ್ರಕರ್ತ ರಮೇಶ ಲಮಾನಿ ಅವರು ನಾವು ಈ ಗ್ರಾಮದಲ್ಲಿ ಯಾವತ್ತಿಗೂ ಎಲ್ಲಾ ಹಬ್ಬಗಳನ್ನು ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಅಲ್ಲಿ ಸೌಹಾರ್ದೆತೆಯಿಂದ ಆಚರಿಸುತ್ತೆವೆ, ನಮ್ಮಲ್ಲಿ ಹಿಂದೂ- ಮುಸ್ಲಿಂ ಸಹೋದರರಂತೆ ಭಾವೈಕ್ಯ ಇಂದ ಇದ್ದೇವೆ ಎಲ್ಲರೂ ಶಾಂತಿಯಿಂದ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರದ ಪ್ರಮುಖರಾದ ನಬಿಸಾಬ್ ತಸಿಲ್ದಾರ್ ರಾಜಸಾಬ್ ಕೋಲಾರ್ ದೇವಿ ಪ್ರಸಾದ್ ನಿಮ್ಮಲಗುಂದಿ ಸಂತೋಷ್ ಜಾಲಿಹಾಳ್ ಹಾಗೂ ರಮೇಶ್ ಲಂಬಾಣಿ ಹಾಗೂ ಅನೇಕ ಹಿರಿಯರು ಉಪಸ್ಥಿತಿ ಇದ್ದರು. ಪೋಲಿಸ್ ಸಿಬ್ಬಂದಿಗಳಾದ ಮಹಾಂತೇಶ ಬೊಳತಲೆರೆಡ್ಡಿ ಇದ್ದರು.
ವರದಿ; ರಮೇಶ ಲಮಾಣಿ