ಅಮೀನಗಡ : ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಏಳು ವರ್ಷಗಳು ತುಂಬಿರುವುದರಿಂದ ಪಕ್ಷದ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಡ್ಡಿದ್ದಾರೆ. ದೇಶದಲ್ಲಿ ಉತ್ತಮ ಆಡಳಿತದ ಮೂಲಕ ತಳ ಮಡ್ಟದ ಪಕ್ಷದ ಕಾರ್ಯಕರ್ತರಿಗೆ, ನಿಷ್ಟಾಂವತ ಕಾರ್ಯಕರ್ತರಿಗೆ ಪ್ರಾಮಾಣಿಕ ಸ್ಥಾನಮಾನ ಹಾಗೂ ರಾಜ್ಯದಲ್ಲಿ ಸರಕಾರ ಜನರ ಕಲ್ಯಾಣಕ್ಕಾಗಿ ಹತ್ತು ಹಲವಾರು ಪ್ಯಾಕೇಜ್ ಘೋಷಣೆ ಮಾಡಿದೆ,ದೇಶದಲ್ಲಿ ಮೋದಿ ಸರಕಾರದಿಂದ ದೇಶ ಸುಭದ್ರ ಮತ್ತು ಭಲಾಢ್ಯವಾಗಿದೆ,

ಉತ್ತಮ ಆಡಳಿತದಿಂದ ಈಡಿ ರಾಷ್ಟ್ರ ಹಾಗೂ ವಿಶ್ವದಲ್ಲಿ ಭಾರತ ಪ್ರಕಾಶಿಸುತ್ತಿದೆ, ೭೦ ವರ್ಷದಲ್ಲಿ ಮಾಡಲಾಗದ ದೇಶದ ಅಭಿವೃದ್ಧಿ ಯನ್ನು ೦೭ ವರ್ಷದಲ್ಲಿ ಮೋದಿ ಸರ್ಕಾರ ಮಾಡಿದೆ ಎಂದರು ಈ ಸಂಧರ್ಭವನ್ನು ನಾವು ಎಂದು ಮರಿಯಲು ಸಾಧ್ಯವಿಲ್ಲ ಹೀಗಾಗಿ ಈ ಸಂರ್ಭಮ ಆಚರಣೆಯನ್ನು ಸರಳವಾಗಿ ಮಾಡಲು ಕಾರಣ ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿರುವುದ ರಿಂದ ಸಂಭ್ರಮಾಚರಣೆ ಮಾಡಬಾರದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೂಚನೆ ನೀಡಿದ್ದಾರೆ.

ಸಂಭ್ರಮಾಚರಣೆ ಬದಲು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಕರೋನಾ ವಾರಿಯರ್ ಗಳಿಗೆ ಉಪಹಾರದ ವ್ಯವಸ್ಥೆ, ಮಾಸ್ಕ ಸ್ಯಾನಿಟ್ಯೇಜರ್ ವಿತರಣೆ, ಜನರಿಗೆ ಕರೋನಾ ಜಾಗೃತಿ ಮಾಡುವ ಮೂಲಕ ಸರಳವಾಗಿ ಆಚರಿಸುತ್ತಿದ್ದಾರೆ.

ಹುನಗುಂದ ತಾಲೂಕಿನ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗದ ಅಧ್ಯಕ್ಷ ನಾಗೇಶ್ ಗಂಜಿಹಾಳ ಅವರು ತಮ್ಮ ಸೂಳೇಭಾವಿ ಗ್ರಾಮದಲ್ಲಿ ಹಲವು ಪ್ರಮುಖ ಸ್ಥಳಗಳಲ್ಲಿ (ಸಸಿ) ಗಿಡಗಳನ ಹಚ್ಚವ ಕಾರ್ಯ ಕೈ ಗೊಡಿದ್ದಾರೆ, ಈ ಸಂದರ್ಭದಲ್ಲಿ ಸೂಳೇಭಾವಿ ಗ್ರಾಮದ ಬಿಜೆಪಿಯ ಯುವ ಮುಖಂಡರುಗಳಾದ ಗ್ಯಾನಪ್ಪ ಗೋನಾಳ, ಹನಮಂತ, ಮಿಣಜಗಿ, ಯಮನೂರ, ಹುಲ್ಯಾಳ, ಸುರೇಶ್, ಜಗದೇಶ ಪಾಟೀಲ, ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News