ಹುನಗುಂದ : ಇಂದು ನಗರದ ನ್ಯಾಯಾಲಯದ ಕೋರ್ಟ್ ಮುಂಭಾಗದಲ್ಲಿ ವಕೀಲರ ಸಂಘ ಹುನಗುಂದ ಹಾಗೂ ಇಲಕಲ್ಲ ಹಾಗೂ ನ್ಯಾಯಾಂಗ ಇಲಾಖೆ ಸಯೋಗದಲ್ಲಿ ಶ್ರೀ ಶೈಲ ಪಾದ ಯಾತ್ರಿಗಳಿಗೆ ಮೆಡಿಕಲ್ ಸಂಬಂದಿಸಿದ ನೋವು ನಿವಾರಕ ಮಲಾಮ್,ಕೆಲವು ಪ್ರಾಥಮಿಕ ಚಿಕಿತ್ಸೆಗೆ ಸಂಭಂದಿಸಿದ ಉಚಿತ ಮಾತ್ರೆಗಳು ,

ಹಾಗೂ ತಂಪು ಪಾನಿಯಗಳಾದ ಬರ್ಪಿ,ಕೋನ್, ಐಸ್ಕ್ರಿಮ್ , ಗಳನ್ನು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀ ಹನಮಂತರಾವ್ಹ್ ಕುಲಕರ್ಣಿ ಹಾಗೂ ಪ್ರಧಾಣ ದಿವಾಣಿ ನ್ಯಾಯಾಧೀಶರಾದ ಶ್ರೀ ಬಸವರಾಜ್ ನೇಸರಗಿ, ಮತ್ತು ಅಪರ ದಿವಾಣಿ ನ್ಯಾಯಾಧೀಶರಾದ ಶ್ರೀ ಮಹಾಂತೇಶ ಮಠದ ಅವರು ಪಾದ ಯಾತ್ರಿಗಳಿಗೆ ಅವರ ಯೋಗಕ್ಷೇಮ ವಿಚಾರಿಸಿ ಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀ ಹನಮಂತರಾವ್ಹ್ ಕುಲಕರ್ಣಿ
ಅವರು ಯಾತ್ರಿಕರು ಬಹಳ ಎಚ್ಚರಿಕೆಯಿಂದ ಅಷ್ಟೇ ಜಾಗೃತರಾಗಿ ಪಾದಯಾತ್ರೆ ಮಾಡಿ, ಇವಾಗ ತುಂಬಾ ಬಿಸಿಲಿನ ತಾಪ ಇರುವುದರಿಂದ ಬೆಳಗ್ಗೆ ಬೆಗನೆ ಯಾತ್ರೆ ಆರಂಭಿಸಿ ಮಧ್ಯಾಹ್ನ ರೆಸ್ಟ್ ಮಾಡಿ ಮತ್ತೆ ಸಾಯಂಕಾಲ ಯಾತ್ರೆ ಆರಂಬಿಸಿ ದಿನಕ್ಕೆ ೪೦ ಕೀ,ಮಿಟರ್ ಮಾತ್ರ ಪಾದಯಾತ್ರೆ ಮಾಡಿ ಹಾಗೆ ದಾರಿ ಉದ್ದಕ್ಕೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಹೆಚ್ಚಿನ ಪ್ರಮಾಣದಲ್ಲಿ ನೀರು,ಹಣ್ಣು,ಮಜ್ಜಿಗೆ,ತಂಪುಗೆ ಸಂಬಂದಿಸಿದ ಆಹಾರ, ಅಲ್ಪ ಪ್ರಮಾಣದಲ್ಲಿ ಸೇವೆಸಿ ಪ್ರಯಾಣ ಮಾಡುವುದರಿಂದ ಯಾವುದೆ ತೊಂದರೆ ಆಗುವುದಿಲ್ಲ,
ಎಲ್ಲಾ ಯಾತ್ರಿಕರಿಗೂ ಶುಭವಾಗಲಿ, ರಸ್ತೆ ಮೇಲೆ ಯಾರೂ ರೆಸ್ಟ್ ಮಾಡಮಾರದು ಸುರಕ್ಷಿತ ಜಾಗ ನೋಡಿ ಮಲಗಬೇಕು ಎಂದು ಸಲಹೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಹುನಗುಂದ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮಾಧವ ದೇಶಪಾಂಡೆ, ಹಾಗೂ ಮಾಜಿ ಈ ಸಂಘದ ಅಧ್ಯಕ್ಷರಾದ ಶ್ರೀ ಪಿ,ಎಸ್,,ಕಠಾಣಿ

, ಶ್ರೀ ಎನ್,ಜೆ ರಾಮವಾಡಗಿ,ಶ್ರೀ ಬಿ,ಎ,ಔಟಿ,ಶ್ರೀ ರಾಜಕುಮಾರ ಬಾದವಾಡಗಿ, ಶ್ರೀ ಆರ್,ಎಚ್,ಕೋಕಾಟೆ,ಶ್ರೀ ವಿಜಯಕುಮಾರ ಗೌಡರ, ಶ್ರೀ ಎಮ್,ಎಮ್,ಆವಾರ, ಶ್ರೀ ಶಾಂತಕುಮಾರ ಮೂಕಿ, ಶ್ರೀ ಮಂಜುನಾಥ ಅಣ್ಣನವರ, ಶ್ರೀ ಬಿ,ಎಚ್ ಗೌಡರ್ , ಶ್ರೀ ಎಸ್,ಎಸ್,ಸಾರಂಗಮಠ ಸೇರಿದಂತೆ ಅನೇಕ ನ್ಯಾಯವಾದಿಗಳು ಉಪಸ್ಥಿತಿ ಇದ್ದರು




ವರದಿ: ಕಿರಣರಾಜ್ ಎಂ, ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News