Breaking News
ಕರ್ನಾಟಕ ರಕ್ಷಣಾ ವೇದಿಕೆ ನೂತನ ಜಿಲ್ಲಾಧ್ಯಕ್ಷರಾಗಿ ರಮ್ಮಜಾನ್ ನದಾಫ್ ಆಯ್ಕೆ !

ಕರ್ನಾಟಕ ರಕ್ಷಣಾ ವೇದಿಕೆ ನೂತನ ಜಿಲ್ಲಾಧ್ಯಕ್ಷರಾಗಿ ರಮ್ಮಜಾನ್ ನದಾಫ್ ಆಯ್ಕೆ !

ಬಾಗಲಕೋಟೆ : ಕಳೆದ ೧೫ ವರ್ಷಗಳಿಂದ ಹುನಗುಂದ ತಾಲೂಕಿನ ಕರವೆ ಅಧ್ಯಕ್ಷರಾಗಿ ತಾಲೂಕಿನಾಧ್ಯಾಂತ ಉತ್ತಮ ಸಂಘಟನೆ ಮಾಡಿ ಹತ್ತು ಹಲವಾರು ಹೋರಾಟಗಳನ್ನು ಮಾಡುತ್ತ ಸಾರ್ವಜನಿಕ ರಂಗದಲ್ಲಿ ಉತ್ತಮ ಕೆಲಸ ಮಾಡಿದ ರಮ್ಮಜಾನ್ ನದಾಫ್ ಅವರು ಇಂದು ಬಾಗಲಕೋಟೆಯ ಕರವೆ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘಟನೆ ಚತುರ,ಚಾಣಕ್ಯ ವಾಗ್ಮಿ ರಮ್ಮಜಾನ್ ಅವರು ವೃತ್ತಿಯಲ್ಲಿ ಹುನಗುಂದ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಸೇವೆ ಮಾಡುತ್ತಿದ್ದಾರೆ. ಯಾವತ್ತಿಗೂ ನೊಂದವರ ಧ್ವನಿಯಾಗಿ ಬಡವರ ,ಅಸಹಾಯಕರ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ಸನಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು.

ಇವರ ಸಂಘಟನೆ ಚಾತುರ್ಯವನ್ನು ನೋಡಿ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡ್ರು ನೂತನ ಬಾಗಲಕೋಟೆ ಕರವೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಇಂದು ಹಣಬಲ,ಜನಬಲ,ಜಾತಿಬಲ,ಅಧಿಕಾರ ಬಲದಿಂದ ಜನ ಸಾಮಾನ್ಯರು ನಿತ್ಯ ಅನ್ಯಾವನ್ನು ಎದುರಿಸುತ್ತಿದ್ದಾರೆ. ಇಂತಹ ಸಂಘಟೆಗಳ ಮೂಲಕ ಜನರ ಆಶಾ ಕಿರಣವಾಗಿ ರಮ್ಮಜಾನ್ ಅವರು ನಿಲ್ಲಲಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ,ಬಿ,ವಿಜಯಶಂಕರ್ ಹಾಗೂ ಹುನಗುಂದ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮಾಧವ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

About vijay_shankar

Check Also

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ  ನಡೆಗೆ ಬೇಸರ ವ್ಯಕ್ತ ಪಡಿಸಿದ                 ನಿಂಗಪ್ಪ ಪಿರೋಜಿ !

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡೆಗೆ ಬೇಸರ ವ್ಯಕ್ತ ಪಡಿಸಿದ ನಿಂಗಪ್ಪ ಪಿರೋಜಿ !

ಮೂಡಲಗಿ: ಇದೆ ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.