Breaking News

ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಸಂಪನ್ನ

ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ ಜಾವ ಗದ್ದುಗೆಗೆ ಮಹಾ ರುದ್ರಾಭಿಶೇಖ ಧಾರ್ಮಿಕ ಪೂಜೆಯನ್ನು ಅರ್ಚಕರಾದ ಶ್ರೀ  ಹುಚ್ಚೇಶ  ಹುಚ್ಚಪ್ಪಯ್ಯನಮಠ ಸ್ವಾಮಿಗಳು ಪೂಜೆ ಮಾಡಿದ ನಂತರ ೮ ಗಂಟೆಗೆ  ಮುತ್ತೈದೆಯರಿಂದ ಕುಂಭ ,ಅಗೂ ಸುಮಂಗಲಿಯರಿಂದ ಆರತಿ ತಟ್ಟೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಮಠದಿಂದ ಪ್ರಾರಂಭವಾಗಿ ಸ್ವಾಮಿ ಭಿಮಾಂಬಿಕಾ ದೇವಿಗೆ ಪೊಜೆ ಸಲ್ಲಿಸಿ ಕುಂಭಕ್ಕೆ ನೀರು ತೆಗೆದುಕೊಂಡು  ಗ್ರಾಮದ  ಪ್ರಮುಖ ಬಿದಿಗಳಲ್ಲಿ  ಪಲ್ಲಕ್ಕಿ ಮೆರವಣಿಗೆ ವಾಧ್ಯ ಮೇಳದೊಂದಿಗೆ ಸಾಗಿತು.
ಈ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕೂಡ ಹಮ್ಮಿಕೊಂಡಿದ್ದರು. ೧೦ ಜೊಡಿ ವಧು ವರರಿಂದ ೧೨:೩೦ ಕ್ಕೆ ಮಾಂಗಲ್ಯ ಧಾರಣೆ ನಡೆಯಿತು. ನಂತರ ೨ ಗಂಟೆಗೆ ಮಹಾ ಪ್ರಸಾದ ನಂತರ ಅದ್ದೂರಿಯಾಗಿ ಸಾಯಂಕಾಲ ೫:೩೦ ಕ್ಕೆ ಮಹಾ ರಥೋತ್ಸವ ಪ,ಪೂಜ್ಯ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳಿಂದ ಚಾಲನೆ ನೀಡಲಾಯಿತು. ಈ ಮಹಾ ರಥೋತ್ಸವಕ್ಕೆ ಹೂವಿನ ಸೇವೆ ಗ್ರಾಮದ ಆಟೋ ಚಾಲಕರಿಂದ ನಡೆಯಿತು.

ಹಗ್ಗದ ಸೇವೆಯನ್ನು ತಿಮ್ಮಸಾಗರ ಗ್ರಾಮದ ಹಿರಿಯಿಂದ ನಡೆಯಿತು. ಕಳಸ ಸೇವೆಯನ್ನು ಚಿಕ್ಕ ಮುಚ್ಚಳಗುಡ್ಡ ಗ್ರಾಮದ ಸಮಸ್ತ ಗುರು ಹಿರಿಯರಿಂದ ನಡೆಯಿತು, ಸುತ್ತ ಹಳ್ಳಿಯ ಸಾವಿರಾರು ಜನ ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು, ಇನ್ನೊಂದು ವಿಶೇಷವೆಂದರೆ ಈ ರಥೋತ್ಸವಕ್ಕೆ ಉತ್ತತ್ತಿ,ಬಾಳಿ ಹಣ್ಣು, ಎಸೆಯದೇ ಕೇವಲ ಹೂವುಗಳನ್ನು ಮಾತ್ರ ಇಡಿ ಜನ ರಥಕ್ಕೆ ಎಸೆದು ಅರ್ಪಣೆ ಮಾಡಿ ಅದ್ದೂರಿಯಾಗಿ ಜಾತ್ರೆಯನ್ನು ಶಾಂತಿಯುತವಾಗಿ ನೇರೆವೇರಿದರು. ಈ ಸಂದರ್ಭದಲ್ಲಿ ಬದಾಮಿ ಪೊಲೀಸ್ ಠಾಣೆಯ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿದ್ದರು.

ಈ ರಥೋತ್ಸವದ ಅಂಗವಾಗಿ ರಂಗಭೂಮಿ ಶ್ರೀ ಹೊಳೆ ಹುಚ್ಚೇಶ್ವರ ನಾಟ್ಯದಿಂದ ಸುಂದರ ಸಾಮಾಜಿಕ ನಾಟಕ ನೇಗಿಲು ಬಂಗಾರ," ರೈತನಿಗೆ ಸಿಂಗಾರ , ಎಂಬ ನಾಟಕ ನಡೆಯಿತು, ಮಾರನೆ ದಿನ ಟಗರಿನ ಕಾಳಕ ನಡೆತು. ಈ ರಥೋತ್ಸವದಲ್ಲಿ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಗಂಗಾವತಿ. ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು ಕಮತಗಿ. ಹಾಗೂ ಕಾಶೀನಾಥ್ ಮಹಾಸ್ವಾಮಿಗಳು ಗುಳೇದಗುಡ್ಡ ಮತ್ತು ನೀಲಕಂಠ ಸ್ವಾಮಿಗಳು ಅಮರೇಶ್ವರ ಮಠ ಕೋಟೆಕಲ್ ಮತ್ತು ಸಮಸ್ತ ಕುಟಕನಕೇರಿ ಗ್ರಾಮದ ಗುರು ಹಿರಿಯರು, ಯುವಕರು ಅಪಾರ ಜನಸ್ತೋಮ ಸೇರಿ ವಿಜೃಂಭಣೆಯಿಂದ ಈ ರಥೋತ್ಸವ ನೇರೆವೇರಿಸಿದರು.

ವರದಿ : ಸಿದ್ದು ನೀಲಗುಂದ .

About vijay_shankar

Check Also

ಕಮತಗಿ  PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಕಮತಗಿ PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.