Breaking News

ಶ್ರೀ ಗಾಯತ್ರಿ ಪತ್ತಿನ ಸ,ಸಂಘದಿಂದ ೧ ಲಕ್ಷ ರೂಪಾಯಿ ಮೌಲ್ಯದ ಸಿಸಿ ಕ್ಯಾಮರ ಕೊಡುಗೆ

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇತ್ತಿಚ್ಚಿಗೆ ಉದ್ಘಾಟನೆಗೊಂಡ ಪ್ರತಿಷ್ಟಿತ ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಸಾವಿರಾರು ಜನ ಸಂಘದ ಶೇರುದಾರರು ಹಾಗೂ ಹತ್ತಾರು ಶಾಖೆಯ ನಿರ್ದೇಶಕರು ರಾಜಕಾರಣಿಗಳು, ಗ್ರಾಮಸ್ಥರು, ಸೇರಿದ ಸಂದರ್ಭದಲ್ಲಿ ಅಮೀನಗಡ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗ ಉತ್ತಮ ಕಾನೂನು ಸೇವೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಿ ಕಾರ್ಯಕ್ರಮದ ಯಶಸ್ವಿಗೆ ಕಾರಣವಾದ ಪೊಲೀಸ್ ಇಲಾಖೆಗೆ ತಮ್ಮ ಸಂಸ್ಥೆಯಿಂದ ಏನಾದರೂ ಸಹಕಾರ ಬೇಕಾದರೆ ಕೇಳಿ ಎಂದು ಸಂಘದ ಸಂಸ್ಥಾಪಕರಾದ ಆರ್,ಪಿ,ಕಲರ್ಬುಗಿ ಅವರು ಹೇಳಿದ್ದರಂತೆ , ಆ ಪ್ರಕಾರ ಠಾಣಾ ಅಧಿಕಾರಿ PSI ಕುಲಕರ್ಣಿ ಅವರು ಸಾರ್ವ ಜನಿಕಾ ಹಿತಾಸಕತ್ತಿಯಿಂದ ತಮ್ಮ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಸಿಸಿ ಕ್ಯಾಮರ ಅಳವಡಿಸಿ ಕೊಡಲು ವಿನಂತಿಸಿದ್ದರು. ಆ ಪ್ರಕಾರ ಇಂದು ಸಂಸ್ಥೆಯ ವತಿಯಿಂದ ಸೂಳೇಭಾವಿ ಗ್ರಾಮದ ಭಾವೈಕ್ಯತಾ ಮಹಾದ್ವಾರದಲ್ಲಿ 3 ಸಿಸಿ ಕ್ಯಾಮರಾ ಹಾಗೂ ಸರಕಾರಿ ಆಸ್ಪತ್ರೆಯ ಬಸ್ ನಿಲ್ದಾಣದ ತಳ್ಳಿಕೇರಿ ಕ್ರಾಸ್ ನಲ್ಲಿ 3 ಸಿಸಿ ಕ್ಯಾಮರ ಒಟ್ಟು _6 ಕ್ಯಾಮರಗಳು ಇಂದಿನಿಂದ ಸಾರ್ವಜನಿಕರ ಅಕ್ರಮ ಹಾಗೂ ಅವರ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಡಲಿವೆ ಇದರಿಂದ ರಾತ್ರಿ ಸಮಯದಲ್ಲಿ ಅಕ್ರಮ ದಂದೆಕೊರರಿಗೆ ಹಾಗೂ ಕಳ್ಳ ಕಾಕರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಗೆ ಸಹಾಯ ಆಗಲಿದೆ ಎಂದು ಸಂಘದ ಸಂಸ್ಥಾಪಕರಾದ ಆರ್,ಪಿ,ಕಲಬುರಗಿ ಅವರು ಮಾತನಾಡಿದರು. ಹಾಗೂ ಠಾಣಾ ಅಧಿಕಾರಿ ಮಲ್ಲಿಕಾರ್ಜುನ ಕುಲಕರ್ಣಿ ಅವರು ಹಾಗೂ ಆರ್, ಪಿ, ಕಲಬುರಗಿ ಜಂಟಿಯಾಗಿ ಸೇರಿ ಸಿಸಿ ಕ್ಯಾಮರ ಉದ್ಘಾಟಸಿ ಮಾತನಾಡಿದರು.
ಗ್ರಾಮದ ಶಿವಾಣಿ ಮೊಬೈಲ್ ಸೆಂಟರ್ ನಲ್ಲಿ ಸಿಸಿ ಕ್ಯಾಮರಾಗಳ ನಿಯಂತ್ರಣಕ್ಕೆ ಇಂದು ಚಾಲನೆ ನೀಡಿದರು. ಇದನ್ನು ಹನಮಂತ ಹಡಪದ ಅವರ ಮೊಬೈಲ್ ಶಾಫ್ ನಲ್ಲಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ನಂತರ ಮಾತನಾಡಿದ PSI ಕುಲಕರ್ಣಿ ಅವರು ಇದು ಬಹಳ ದಿನಗಳ ಕೋರಿಕೆ ಇತ್ತು ನಮ್ಮ ಪ್ರಾಮಾಣಿಕ ಸೇವೆಗೆ ಅವರು ಸ್ಪಂದಿಸಿ ಇಂದು ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಟಿಯಿಂದ ತಮ್ಮ ಸಂಸ್ಥೆಯ ವತಿಯಿಂದ ಗ್ರಾಮದ ಪ್ರಮುಖ ರಸ್ತೆಯ ಮೇಲೆ 6 HD ಸಿಸಿ ಕ್ಯಾಮರ ಅಳವಡಿಸಿ ಕೊಟ್ಟಿದ್ದಾರೆ, ಅವರಿಗೆ ನನ್ನ ವಯಕ್ತಿಕವಾಗಿ ಹಾಗೂ ಸಾರ್ವಜನಿಕರ ಪರವಾಗಿ ಮತ್ತು ನಮ್ಮ ಇಲಾಖೆ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ನಿತ್ಯ ಸಂಚರಿಸುತ್ತಾರೆ, ಅವರ ಚಲನ ವಲನಗಳ ಮೇಲೆ ಹಾಗೂ ರಾತ್ರಿ ಅನಾವಶ್ಯಕವಾಗಿ ತಿರುಗಾಡುವ ಕುಡಿದು ಇಲ್ಲಿ ಜಗಳ ಮಾಡುವ ಸುಖಾ ಸುಮ್ಮನೆ ತೊಂದರೆ ಕೊಡುವ ,ಅಕ್ರಮ ಚಟುವಟಿಕೆಗಳನ್ನು ಮಾಡುವವರ ಮೇಲೆ ಹೆಚ್ಚಿನ ನಿಗಾ ಇಡಲು ಒಂದು ಲಕ್ಷಕ್ಕೂ ಮೀರಿದ ಅಧಿಕ ಮೊತ್ತದ ಸಿಸಿ ಕ್ಯಾಮರ ಕೊಟ್ಟಿದ್ದಾರೆ, ಇಂದು ಇದರ ಅವಶ್ಯಕತೆ ಇತ್ತು ಇಂದು ಆ ಕೆಲಸವನ್ನು ಮಾಡಿ ಕೊಟ್ಟ ಸಂಘದ ಎಲ್ಲಾ ಸದಸ್ಯರಿಗೆ ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಗಪ್ಪ ಕರಡಿ ,ಶಂಕ್ರಪ್ಪ ಜನಿವಾರದ,ರಾಜು ರಾಮದುರ್ಗ ರೋಮಣ್ಣ ಭಜಂತ್ರಿ, ಕಾರ್ಯದರ್ಶಿ ಹೇಮಂತ ಧುತ್ತರಗಿ, ಗ್ರಾಮ ಪ,ಸದಸ್ಯರಾದ ಹನಮಂತ ಮಿಣಜಗಿ,ಮುಸ್ತಫಾ ಮುಲ್ಲಾ,ಅಮರೇಶ ಘಂಟಿ, ದುರಗಪ್ಪ ಭಜಂತ್ರಿ, ದುರಗಪ್ಪ ಮಾದರ, ಅನೇಕರು ಉಪಸ್ಥಿತಿ ಇದ್ದರು.
ಅಮೀನಗಡ ಹಾಗೂ ಗುಡೂರು ರಸ್ತೆಯ ಮೇಲೆ ಹದ್ದಿನ ಕಣ್ಣು

About vijay_shankar

Check Also

ಬದಾಮಿ ಹಂಪಿ ವಿಶ್ವವಿದ್ಯಾಲಯ ೨೦೦೫ರ ಎಟಿಸಿ ವಿಧ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ

ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.