Breaking News

vijay_shankar

ಮಡಗಾಸ್ಕರ್‌ನಲ್ಲಿ ಸಿಲುಕಿದ್ದ 17 ಮಂದಿ ಭಾರತಕ್ಕೆ ವಾಪಸ್

ದಾವಣಗೆರೆ: ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ಗ್ರಾಮದ 17 ಮಂದಿ ಗಿಡಮೂಲಿಕೆ ವ್ಯಾಪಾರಿಗಳು ಐದು ತಿಂಗಳ ಬಳಿಕ ವಿಶೇಷ ವಿಮಾನದ ಮೂಲಕ ಗುರುವಾರ ಭಾರತಕ್ಕೆ ಮರಳಿ ಬಂದರು. ಬುಧವಾರ ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30) ‘ಏರ್ ಮಡಗಾಸ್ಕರ್‌’ ವಿಮಾನದಲ್ಲಿ ಹೊರಟ ವ್ಯಾಪಾರಿಗಳು, ಗುರುವಾರ ಮುಂಜಾನೆ 3.30ಕ್ಕೆ ಮುಂಬೈ ವಿಮಾನನಿಲ್ದಾಣಕ್ಕೆ ಬಂದು ಇಳಿದರು. ಬಳಿಕ ಅವರೆಲ್ಲರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಕ್ವಾರಂಟೈನ್‌ …

Read More »

ದಂಗಾದ ಬಾಲಿವುಡ್: ಸೂಪರ್ ಸ್ಟಾರ್ ಹತ್ಯೆಗೆ ನಡೆದಿತ್ತು ಸಂಚು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್ ಬಿಶ್ನಾಯ್ ಗ್ಯಾಂಗ್‌ನ ಶಾರ್ಪ್‌ ಶೂಟರ್ ನನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಅಲಿಯಾಸ್ ಸಾಂಗಾ ಅಲಿಯಾಸ್ ಬಾಬಾ ಅಲಿಯಾಸ್ ಸುನ್ನಿ ಎಂಬಾತನೇ ಬಂಧನಕ್ಕೆ ಒಳಗಾದ ಶಾರ್ಪ್‌ ಶೂಟರ್‌. ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿದ್ದ ಶಾರ್ಪ ಶೂಟರ್ ನನ್ನು ಬಂಧನ ಮಾಡಲಾಗಿದೆ.ಫರಿದಾಬಾದ್ ಪೊಲೀಸರು ಶಾರ್ಪ್ ಶೂಟರ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಾಲಿವುಡ್ …

Read More »

ಸಿರಿಯಾದಲ್ಲಿ ಚಿಕ್ಕ ಮೆಡಿಸಿನ್ ಸುಳಿವು; ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು ಒಂದು ರೋಚಕ ಕಥೆ

ಬೆಂಗಳೂರು: ಎಂ.ಎಸ್​​ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕೆಲಸ ಮಾಡ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್​​ನನ್ನು ಎನ್​ಐಎ ಮೊನ್ನೆ ಬಂಧಿಸಿದೆ. ಈತನನ್ನು ಅರೆಸ್ಟ್​ ಮಾಡಿದ್ದು ಹೇಗೆ ಅನ್ನೋದೇ ರೋಚಕ ಕಥೆ. ಈ ಕುರಿತಾದ ಇಂಟರೆಸ್ಟಿಂಗ್ ಹಾಗೂ ಸ್ಫೋಟಕ ಮಾಹಿತಿಗಳು ಆರೋಪಿಯ ವಿಚಾರಣೆಯಿಂದ ಬಹಿರಂಗವಾಗಿದೆ. ಸಿರಿಯಾ ಮೇಲಿನ ದಾಳಿ ವೇಳೆ, ಮೆಡಿಸಿನ್ಸ್ ಕೊಟ್ಟ ಸುಳಿವುಅಬ್ದುಲ್ ರೆಹಮಾನ್ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು ಸಿರಿಯಾದಿಂದ. 2018ರಲ್ಲಿ ಅಮೆರಿಕಾ ಸಿರಿಯಾ ಮೇಲೆ ದಾಳಿ ನಡೆಸಿದ …

Read More »

ಸಚಿನ್‌ಗೆ ಮೊದಲ ಕಾರಿನ ಮೋಹ : ಮಾರುತಿ-800 ಹುಡುಕಿಕೊಡಬೇಕಂತೆ!

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರಿಗೆ ಕಾರುಗಳ ಕ್ರೇಜ್‌ ವಿಪರೀತ. ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್‌ ಜಿಟಿ-ಆರ್‌ನಂತಹ ಬೃಹತ್‌ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ. ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು. ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು …

Read More »

ಗಣೇಶ ಹಾಗೂ ಮೊಹರಂ ಹಬ್ಬದ ನಿಮಿತ್ಯವಾಗಿ ಅಮೀನಗಡದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯವಾಗಿ ಇಂದು ಠಾಣೆಯ ಪಿ ಎಸ್ ಐ ಬಸವರಾಜ ತಿಪ್ಪಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯ, ಸಾರ್ವಜನಿಕವಾಗಿ ಬಹಿರಂಗ ಶಾಂತಿ ಸಭೆಯನ್ನು ಮಾಡಲಾಯಿತು. ಈ ವರ್ಷ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರಕಾರ ಸಂಪೂರ್ಣವಾಗಿ ಸಾರ್ವಜನಿಕ ಇಂತಹ ಹಬ್ಬ, ಮದುವೆ,ಜಾತ್ರೆ, ಬಹಿರಂಗ ಎಲ್ಲಾ ಕಾರ್ಯಕ್ರಮ ನಿಷೇಧ …

Read More »

ನೆರೆ ಸಂತ್ರಸ್ತರಿಗೆ ತಹಶಿಲ್ದಾರ ಬಸವರಾಜ ನಾಗರಾಳ ನೆರವಿನ ಹಸ್ತ,

ಕೂಡಲಸಂಗಮ : ಹುನಗುಂದ ತಾಲೂಕಿನ ಖಜಗಲ್ಲ ಗ್ರಾಮಕ್ಕೆ ಇಂದು ತಹಶಿಲ್ದಾರ ಬಸವರಾಜ ನಾಗರಾಳ ಬೇಟಿ ನೀಡಿ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಕರೆ ನೀಡಿದರು, ಹೊಸ ೨೮ ಶಡ್ಡ್ ನಿರ್ಮಾಣ ಮಾಡಿ ಅಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ನೀಡುವುದಾಗಿ ತಿಳಿಸಿದರು ಇದಕ್ಕೆ ಪ್ರತಿ ಕ್ರಿಯಿಸಿದ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರ ಬಾಲಪ್ಪ ಕಾಳಗಿಯವರು ಪ್ರಸಕ್ತ ೨೦೦೭/ ೦೮ನೇ ಸಾಲಿನಲ್ಲಿ ಖಜಗಲ್ಲ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು ಆಗ …

Read More »

ಪ್ರವಾಹದ ಮಧ್ಯೆ ಸಿಲುಕಿದ ಲಾರಿಯಿಂದ ಹಾರಿ ಮರಹತ್ತಿದ ಚಾಲಕ

ಸಿದ್ದಿಪೇಟ್​: ಈ ಲಾರಿ ಚಾಲಕ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ…ಆತನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೂ ಆತ ಜೀವ ಸಹಿತ ಬರಲೇ ಇಲ್ಲ… ಇದೊಂದು ದುರ್ಘಟನೆ ನಡೆದಿದ್ದು ತೆಲಂಗಾಣದ ಅಡಿಲಾಬಾದ್ ಜಿಲ್ಲೆಯಲ್ಲಿ. ಮೃತ ವ್ಯಕ್ತಿಯನ್ನು ಮುಡಿಗೊಂಡ ಶಂಕರ್ (35) ಎಂದು ಗುರುತಿಸಲಾಗಿದೆ. ಕಾಶಿರೆಡ್ಡಿ ಗ್ರಾಮದ ನಿವಾಸಿ. ಈತ ಮೃತಪಟ್ಟಿದ್ದು ಕೊಹೆಡಾ ಮಂಡಲ್ನಲ್ಲಿರುವ ಬಸ್ವಾಪುರ ಗ್ರಾಮದಲ್ಲಿ. ಈತ ತನ್ನ ಲಾರಿಯಲ್ಲಿ ಸಿದ್ದಿಪೇಟ್ನಿಂದ ಹಂಸಾಬಾದ್ಗೆ ತೆರಳುತ್ತಿದ್ದ. ಮುಂಜಾನೆ 4ಗಂಟೆ …

Read More »

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 10.3ರಿಂದ ಶೇಕಡಾ 7.72ಕ್ಕೆ ಇಳಿಕೆ

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಆದರೂ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಈ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪ್ರತಿದಿನ 7ರಿಂದ 8 ಲಕ್ಷ ಕೊರೋನಾ ವೈರಸ್ ಪರೀಕ್ಷೆ ಮಾಡುತ್ತಿದ್ದರೂ ಕೂಡ ಪಾಸಿಟಿವ್ ರೋಗಿಗಳ ಸಂಖ್ಯೆ ಕಳೆದ ನಾಲ್ಕೈದು ದಿನಗಳಲ್ಲಿ ಶೇಕಡಾ 10.3ರಿಂದ ಶೇಕಡಾ …

Read More »

ಟ್ರಂಪ್‌ ಅಮೆರಿಕಕ್ಕೆ ಸೂಕ್ತ ಅಧ್ಯಕ್ಷ ಅಲ್ಲ: ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಷಲ್‌ ಟೀಕೆ

ನ್ಯೂಯಾರ್ಕ್‌: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿರುವುದು ತಪ್ಪು ಆಯ್ಕೆ ಎಂದು ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಪತ್ನಿ ಮಿಷಲ್‌ ಒಬಾಮ ಟೀಕಿಸಿದ್ದಾರೆ. ಮಂಗಳವಾರ ಶುರು ವಾದ ಡೆಮಾಕ್ರಟಿಕ್‌ ಪಕ್ಷದ ನಾಲ್ಕು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಪರಿಸ್ಥಿತಿ ಉತ್ತವಾಗಿ ಇರಬೇಕು ಎಂದು ಬಯಸುವುದಿದ್ದರೆ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ಗೆ ಮತ ಹಾಕಿ ಅವರನ್ನೇ ಗೆಲ್ಲಿಸಬೇಕು ಎಂದು ಮಾಜಿ ಅಧ್ಯಕ್ಷರ ಪತ್ನಿ ಹೇಳಿದ್ದಾರೆ. “ಡೊನಾಲ್ಡ್‌ ಟ್ರಂಪ್‌ …

Read More »

ಕ್ಯಾನ್ಸರ್ ನಿಂದ ಬಳಲುತ್ತಿರುವ ನಟ ಸಂಜಯ್ ದತ್ ಮತ್ತೆ ಆಸ್ಪತ್ರೆಗೆ ದಾಖಲು

ಮುಂಬೈ: ಶ್ವಾಸಕೋಶದ ಕ್ಯಾನ್ಸರ್​​ನಿಂದ ಬಳಲುತ್ತಿರುವ ಬಾಲಿವುಡ್​​ ನಟ ಸಂಜಯ್ ದತ್​​​ ಸದ್ಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜಯ್ ದತ್ ಪತ್ನಿ ಮಾನ್ಯತಾ ದತ್, ಸಹೋದರಿ ಪ್ರಿಯಾ ದತ್ ಮತ್ತು ಇತರ ಕುಟುಂಬ ಸದಸ್ಯರು ಅವರ​​ ಜೊತೆ ಆಸ್ಪತ್ರೆಗೆ ತೆರಳುತ್ತಿರುವ ಫೋಟೋಗಳು ಕಾಣಿಸಿಕೊಂಡಿವೆ. ಈ ಕುರಿತು ಟ್ವೀಟ್​​ ಮಾಡಿರುವ ದತ್​, ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದೇನೆ. ನನಗಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಸಂಜಯ್ ದತ್ ಉಸಿರಾಟ ತೊಂದರೆಯಿಂದ …

Read More »