Breaking News
ಜಿಲ್ಲಾ ಎಸ್ ಪಿ ಅಮರನಾಥ  ರೆಡ್ಡಿ ಅವರ ತಂಡಕ್ಕೆ  ಸಾರ್ವಜನಿಕ ಪರವಾಗಿ ಚಂದ್ರಶೇಖರ ರಾಠೋಡ ಅವರಿಂದ ಸನ್ಮಾನ

ಜಿಲ್ಲಾ ಎಸ್ ಪಿ ಅಮರನಾಥ ರೆಡ್ಡಿ ಅವರ ತಂಡಕ್ಕೆ ಸಾರ್ವಜನಿಕ ಪರವಾಗಿ ಚಂದ್ರಶೇಖರ ರಾಠೋಡ ಅವರಿಂದ ಸನ್ಮಾನ

ಇಂದು ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಗಳಾದ ಶ್ರೀ ಅಮರನಾಥ ರೆಡ್ಡಿರವರ ನೇತೃತ್ವದ ತಂಡ ಸುಮಾರು ರೂ ೪.೫ ಕೋಟಿ ವೆಚ್ಚದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರರಿಗೆ ಕನಿಷ್ಠ ದರದಲ್ಲಿ ಕಲ್ಯಾಣ ಮಂಟಪ ಹಾಗೂ ಅತಿಥಿ ಗೃಹ ನಿರ್ಮಾಣ ಮಾಡಿದ್ದು, ದಿನಾಂಕ ೨೩, ರಂದು ಮಾನ್ಯ ಗೃಹ ಸಚಿವರು ಉದ್ಘಾಟಿಸಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳ ಕಾರ್ಯವನ್ನು ಅತ್ಯಂತ ಹೃದಯ ತುಂಬಿ ಶ್ಲಾಘಿಸಿದರು.


ಈ ರೀತಿಯಾಗಿ ಮಾದರಿಯ ಕಾರ್ಯ ನೆರವೇರಿಸಿದ ಅಧಿಕಾರಿಗಳನ್ನು ಬಾಗಲಕೋಟೆ ನಾಗರಿಕರಾಗಿ ಅಭಿನಂದಿಸಬೇಕಾದದ್ದು ನಮ್ಮ ಕರ್ತವ್ಯ.
ಇಂದು ಬಾಗಲಕೋಟೆ ನಾಗರಿಕರ ಪರವಾಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಗಳಾದ ಶ್ರೀ ಅಮರನಾಥ ರೆಡ್ಡಿ ಅವರನ್ನು, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ 1 ಶ್ರೀ ಪ್ರಸನ್ನ ದೇಸಾಯರನ್ನು ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ 2 ಶ್ರೀ ಮಹಾಂತೇಶ ಜಿದ್ದಿಯವರನ್ನು, ಉಪ ಪೋಲಿಸ್ ಅಧಿಕ್ಷಕರಾದ ಸುತಾರ, ಪ್ರಭುಗೌಡ ಪಾಟೀಲ್,ಸಿಪಿಐ ರಾಮಣ್ಣ ಬಿರಾದಾರವರನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಚಂದ್ರಶೇಖರ ರಾಠೋಡ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗರಾಜ್ ಹದ್ಲಿ, ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲು ಕಟ್ಟಿಮನಿ, ನ್ಯಾಯವಾದಿ ಸುನೀಲ್ ಕೀರಸೂರ , ಜಯತೀರ್ಥ ಕುಲ್ಕರ್ಣಿ, ಮೊಹಮದ್ ಕೈಮ್ ಉದ್ಯಮಿ ಬಸವರಾಜ್ ಬಿರಾದಾರ, ವೆಂಕಟೇಶ್ ಪಾಟೀಲ್ ಉಪಸ್ಥಿತರಿದ್ದರು.

About vijay_shankar

Check Also

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.