ಬೆಂಗಳೂರುರು, ಆ.18- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ಅಮಾಯಕ ಮುಸ್ಲಿಮರಿಗೆ ರಕ್ಷಣೆ ನೀಡುವಂತೆ ಅಖಿಲ ಕರ್ನಾಟಕ ಮಹಮದಿಯರ ಕನ್ನಡ ವೇದಿಕೆ ಮನವಿ ಮಾಡಿದೆ. ಪ್ರವಾದಿ ಮಹಮ್ಮದ್ ಅವರಿಗೆ ಅಪಮಾನ ಮಾಡುವ ಪೋಸ್ಟ್ ಹಾಕಿದ ನವೀನ್ ವರ್ತನೆ ಹಾಗೂ ಶಾಸಕರ ಮನೆಗೆ ಬೆಂಕಿ ಇಟ್ಟ ಎರಡೂ ಘಟನೆ ಹಿಂದೂ- ಮುಸ್ಲಿಮರು ತಲೆ ತಗ್ಗಿಸುವಂತಹುದು.
ಆದರೆ ಈ ಘಟನೆ ಸಂಬಂಧ ಅಮಾಯಕ ಮುಸ್ಲಿಮರನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ಯುತ್ತಿರುವುದು ಆತಂಕ ಮೂಡಿಸಿದೆ. ಗಲಭೆಕೋರರು ಹಾಗೂ ಕಾನೂನು ಕೈಗೆತ್ತಿಕೊಂಡವರ ಮೇಲೆ ಮುಲ್ಲಾಜಿಲ್ಲದೆ ಕ್ರಮ ವಹಿಸಲು ನಮ್ಮ ಅಡ್ಡಿಯಿಲ್ಲ. ಆದರೆ ಮುಗ್ಧರಿಗೆ ಅನ್ಯಾಯವಾಗದಂತೆ ರಕ್ಷಣೆ ನೀಡಬೇಕೆಂದು ವೇದಿಕೆಯ ಅಧ್ಯಕ್ಷ ಸಮಿಉಲ್ಲಾ ಖಾನ್, ಗೌರವ ಸಲಹೆಗಾರ ಎನ್. ನಜೀರ್ ಮತ್ತಿತರರು ಮನವಿ ಮಾಡಿದ್ದಾರೆ.