
ಸುರಪುರ : ತಾಲೂಕಿನಲ್ಲಿ ಎಮ್ ಎಸ್ ಡೌಲಪರ್ಸ್ ಕಂಪನಿ MD ಮಹಾಲಿಂಗರಾಯ ಅವರು ರಾಜ್ಯದಲ್ಲಿ ತಾಂಡವ ಆಡುತ್ತಿರುವ ನಿರುದ್ಯೋಗ ಯುವಕರಿಗೆ, ಆಸಕ್ತಿ ಉಳ್ಳ ಮಹಿಳೆ ಸೇರಿದಂತೆ ಸುಮಾರು 15,000 ಸಾವಿರ ಜನರಿಗೆ ಕೆಲಸ ಕೊಟ್ಟ ಭೂಪ ಮಹಾಲಿಂಗರಾಯ,

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದವರಾದ ಮಾಳಪ್ಪ ತಂದೆ/ ಭೀಮಣ್ಣ ಉರ್ಫ್ ಮಹಾಲಿಂಗರಾಯ ಎಂದು ಹೇಳಿಕೊಂಡಿರುವ ಈ ಮಹಾಶಯ ಕಳೆದ ಸಂಚಿಕೆಯಲ್ಲಿ ಈ ಕಂಪನಿಯ ಬಗ್ಗೆ ವರದಿ ಪ್ರಕಟಿಸಿದಾಗ ಸುಮಾರು ಜನ ಕರೆ ಮಾಡಿ ಈ ಕಂಪನಿಯ ಕರ್ಮಕಾಂಡವನ್ನು ಎಳೆ ಎಳೆಯಾಗಿ ಬಿಚ್ವಿ ಇಟ್ಟಿದ್ದಾರೆ.
ನಮ್ಮ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜನ ಹೇಗೆ ಅಂದರೆ ಬಹಳ ಮುಗ್ದಜನ ಅವರು ಇನ್ನೊಬ್ಬರ ಮಾತಿನ ಭರವಸೆಯ ಮೇಲೆ ಸಂಪೂರ್ಣವಾಗಿ ನಂಬುತ್ತಾರೆ,ಏನೇ ಹೇಳಿದರು ನಂಬುತ್ತಾರೆ, ಅವರಿಗೆ ಕೈ ಎತ್ತಿ ಕೊಡೊದು ಗೊತ್ತಿದೆ ಹೊರತು ಕಿತ್ತುಕೊಂಡು ತಿನ್ನುವುದು ಗೊತ್ತಿಲ್ಲ, ಇಂತಹ ಜನರನ್ನೆ ಟಾರ್ಗೆಟ್ ಮಾಡುವ ಕಲೆ ಈ ಕಂಪನಿಯ ಕೆಲವು ಟಿಮ್ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಮಾಳಪ್ಪ ಅವರೆ ನೀವು ಕಂಪನಿಯಿಂದ FD ಮಾಡಿದ ಸಾರ್ವಜನಿಕರಿಗೆ ಪ್ರತಿ ತಿಂಗಳು 5000, ಸಾವಿರ ಹಾಕತಿನಿ ಅಂತ ಹೇಳತಿರಿ, ಅದು ಲಾಭದ ಹಣ ಅಂತ ಬೇರೆ ನೀವೆ ಹೇಳಿದ್ದು ಹಾಗಾದ್ರೆ ಆದಾಯ ತೆರಿಗೆ ಇಲಾಖೆಗೆ ಪ್ರತಿ ವರ್ಷ ಎಷ್ಟು ತೆರಿಗೆ ಕಟ್ಟತಿರಿ ? ತಾವು ಈ 5000, ಸಾವಿರ ಹಣ ನಿಮ್ಮ ಕಂಪನಿಯ ಯಾವ ಕೆಲಸಕ್ಕೆ ಬಳಸಿಕೊಂಡು ಲಾಭ ತಗೆದು ಹಣ ಹಾಕತಿರಿ ? ಈ ವಿಚಾರ ಸಾರ್ವಜನಿಕರಿಗೂ ಗೊತ್ತಾಗಲಿ ,ಬಹಿರಂಗ ಹೇಳಿಕೆ ನೀಡಿ ತಾವು ಈಗಾಗಲೇ 15 ಸಾವಿರ ಜನರಿಗೆ ಎಲ್ಲೆಲ್ಲಿ ಕೆಲಸ ಕೊಟ್ಟಿರಿ ಇದು ಸಂಪೂರ್ಣ ಹಣಕಾಸಿನ ವ್ಯಹಾರ ಇರುವುದರಿಂದ 15ಸಾವಿರ ಅಂದ್ರೆ ಸುಮಾರು 15 ರಿಂದ 20 ಕೋಟಿ ರೂಪಾಯಿ ನಿಮ್ಮ ಕಂಪನಿ ಆ್ಯಾಫ್ ನಲ್ಲಿ ತಾವು ತೋರಿಸಬೇಕು ಸರ್ ಮೈಕ್ ಸಿಕ್ಕಾಗ ಜನರ ಮುಂದೆ ಏನೆನೊ ಮಾತಾಡಿ ಜನರ ದಿಕ್ಕು ತಪ್ಪಿಸಬೇಡಿ ,

ಈ ಪ್ಯಾನ್ ಸ್ವಲ್ಪ ಸಾರ್ವಜನಿಕರ ಅಸಲಿ ಕಾರ್ಡ ಚಕ್ ಮಾಡಿ ನೋಡಬೇಕು MS ಡೌಲಪರ್ಸ್ ಗೆ ಯಾವುದೇ ಹಣಕಾಸಿನ ವ್ಯವಹಾರಗಳಿ ಅನುಮತಿ ಸಿಕ್ಕಿಲ್ಲ, ಅದು RBI ಮಾನದಂಡದ ಯಾವ ನಿಯಮಗಳನ್ನು ಒಳಗೊಂಡಿಲ್ಲ ಈ ಕಾರಣಕ್ಕೆ ಈ ಪೈನಾನ್ಸ ಅನುಮತಿ ರದ್ದಾಗಿದೆ. ಹಾಗಾದ್ರೆ ಹೊಸದಾಗಿ ಸದ್ದು ಮಾಡುತ್ಗಿರುವ ಈ ಲಟರಿ ಮೂಲಕ ಇದಕ್ಕೆ ಯಾರು ಅನುಮತಿ ಕೊಟ್ರು ಇದು ಈ ಕಂಪನಿಯಿಂದ ದೊಡ್ಡ ಮೊತ್ತದಲ್ಲಿ ಡ್ರಾ ನಡೆಯತ್ತದೆ. ಈ ಸಣ್ಣ ವಿಡಿಯೋ ತಾವು ನೋಡಬಹುದು. ಇದು MS ಲಕ್ಕಿ ಡ್ರಾ ಐದನೇ ಸಿಜನ್
ನೋಡಿ ಈ ತರಹದ ಉದ್ಯೋಗ ಈ ಕಂಪನಿ ಬಹಳ ಕೊಟ್ಟಿದೆ, ಅದನ್ನ ಕಂಪನಿ MD ಬಹಿರಂಗ ಪಡಿಸಲಿ

ಇವು ಕಂಪನಿಯ ಡಾಕ್ಯುಮೆಂಟ್ ಇದರಲ್ಲಿ ಪಡೆದಿರು ಬೈಲಾ ಏನು ಕಂಪನಿದು? ತಾವು ಮಾಡುತ್ತಿರುವ ಘನಂದಾರಿ ಕೆಲಸದ ಬಗ್ಗೆ ಸ್ವಲ್ಪ ಜನರಿಗೂ ಅರ್ಥವಾಗಲಿ ಸ್ನೇಹಿತರೆ , ಕಂಪನಿಯ ಗುರಿ ,ಉದ್ದೇಶ,ಹಣಕಾಸಿನ ವ್ಯವಹಾರದ ಗುರಿಗಳು ಒಂದಕೊಂದು ಸಂಭಂದ ಇಲ್ಲ ನಾಳೆ ಲಕ್ಷಾಂತರ ಹಣ ಹೂಡಿಕೆ ಮಾಡಿ ತಾವು ಈಗ ಪೈನಾನ್ಸ್ ಮುಚ್ಚಿದ ಹಾಗೆ ಕಂಪನಿ ಲಾಕ್ ಮಾಡಿ ಪಾರೀನ್ ಹಾರಿದರೆ ಕಾನೂನು ಪ್ರಕಾರ ತಮ್ಮ ಮೇಲೆ ಕಾನೂನು ಹೋರಾಟ ಅಸಾಧ್ಯ, ಜನರ ದಿಕ್ಕು ತಪ್ಪಿಸಿ ಗೋವ ಕರೆದುಕೊಂಡು ಹೋಗಿ ಹನಿ ಟ್ರ್ಯಾಫ್ ಮಾಡುವ ಸಂಭವ ಹೆಚ್ಚು ಎಂದು ನಿಮ್ಮ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಕಂಪನಿಯ MD ಮಾಳಪ್ಪ ಅವರೇ ನೀವು ಜನರ ಆರ್ಥಿಕ ಸುಧಾರಣೆ ತರತಾ ಇಲ್ಲ ಮೊಸದಿಂದ ಅತೀ ಬುದ್ಧಿವಂತಿಕೆ ಇಂದ ಹಣ ಹೂಡಿಕೆ ಮಾಡಿ ” ಶಾಮ ಸುಂದರ ಭಜಂತ್ರಿ ,ತರ ಡಬ್ಬಿಂಗ್ ರೂಪದಲ್ಲಿ ನೂರಾರು ಕೋಟಿ ಹಣ ಲಪಟಾಯಿಸಿ ಅಪಘಾತ ಆಯಿತು ಅಂತ ವಿಧೇಶಕ್ಕೆ ಹಾರಿದ, ಆ ತನಿಖೆ ಇನ್ನೂ ನಿಗೂಢವಾಗಿದೆ. ತಾವು ಸಾರ್ವಜನಿಕ ರಂಗದಲ್ಲಿ ಜನರ ಕಲ್ಯಾಣ ತಮ್ಮ ಉದ್ದೇಶವಾಗಿದೆ ಬೇರೆ ಒಳ್ಳೆಯ ಕೆಲಸ ಮಾಡಿ ಜನರಿಗೆ ಉದ್ಯೋಗ ಕೋಡಿ ,

ಕಂಪನಿ MD ಶ್ರೀ ಮಾಳಪ್ಪ / ತಂ ಭೀಮಪ್ಪ
ಮುಂದಿನ ಭಾಗದಲ್ಲಿ ,,,,,,,ಮಾಳಪ್ಪ ಅವರೇ ಸ್ವತ: ಸಂದರ್ಶನದಲ್ಲಿ ಕಂಪನಿಯ ಪೂರ್ಣ ಮಾಹಿತಿ ಹೇಗೆ ಹೇಳಿದ್ದಾರೆ ಕಾದು ನೋಡಿ .
ವರದಿ ; ಅನಾಮಿಕ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News