ಹನುಮನಾಳ: ಮಹೇಶ್ ಜಕ್ಕಲಿ ಅವರು ೧೯೮೧ ರಿಂದ ಒಬ್ಬ ಸಾಮಾನ್ಯ ವಸೂಲಿ ಕ್ಲಾಕ್೯ ಆಗಿ ಸಂಘವನ್ನು ಪ್ರವೇಶ ಮಾಡಿದರು,ಬುದ್ದಿವಂತರು,
ಚಾಣಕ್ಯರು ಆದ ಮಹೇಶ್ ಅವರ ಕಾರ್ಯ ಚಟುವಟಿಕೆಗಳು ಇಡಿ ಆಡಳಿತ
ಮಂಡಳಿ ಗಮನ ಸೆಳೆಯಿತು, ಸಂಘದ ಬಗ್ಗೆ,ಕೆಲಸದ ಬಗ್ಗೆ ಇವರಿಗಿರುವ ಉತ್ಸಾಹ,ಆಸಕ್ತಿ, ನೋಡಿ ೧೯೮೫ ರಲ್ಲಿ ಕಾರ್ಯದರ್ಶಿಯಾಗಿ ಚಾಜ್೯ ತೆಗೆದುಕೊಂಡು ಇಂದಿಗೆ ಸುಮಾರು ೩೨ ವರ್ಷ ಕಳೆದಿವೆ ಜೀವನದ ತಮ್ಮ ಆಯುಷ್ಯವನ್ನು ಸಂಘದ ಏಳಿಗೆಗಾಗಿ ಶ್ರಮಿಸಲು ನೊಂದ ಜೀವ ಇದು ಇಂತಹ ಸರಳ ವ್ಯಕ್ತಿತ್ವದ ಮಹೇಶ್ ಅವರ ಕಾರ್ಯ ದಕ್ಷತೆ ಹೇಗೆಂದರೆ ಇಲ್ಲಿ ನಂಬಿಕೆ ಮತ್ತು ವಿಶ್ವಾಸದ ಮೇಲೆ ಯಾವುದೇ ಸಂಘ ಸಂಸ್ಥೆಗಳು ನಿತ್ಯ ಗ್ರಾಹಕರ ಹಾಗೂ ಸಂಸ್ಥೆಯ ಸದಸ್ಯರೊಂದಿಗೆ ಉತ್ತಮ ಸಂಭಂದಗಳ ಜೀವಾಳವೇ ನಂಬಿಕೆ,
ಹಾಗೆ ಸಕಾಲಕ್ಕೆ ನೇರವಾಗುವ ಸಂಸ್ಥೆಯ ಆಡಳಿತ ಮಂಡಳಿ ವಿಶ್ವಾಸವೆ ಇಂದು ಹತ್ತರಿಂದ, ಹನ್ನೊಂದು ಕೋಟಿ ರೂಪಾಯಿ ಹಣಕಾಸಿನ ವ್ಯವಹಾರಕ್ಕೆ ಸಾಕ್ಷಿಯಾಗಿದೆ ಕೋಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಮಹೇಶ,ರುದ್ರಪ್ಪ ಜಕ್ಕಲಿ ಯವರ ಪ್ರಾಮಾಣಿಕ ಪರಿಶ್ರಮದಿಂದ ಇಂದು ಸಂಘದ ಬೆಳವಣಿಗೆ ಹಾಗೂ ಆರ್ಥಿಕ ಸ್ಥತಿ ದಿನೆ ದಿನವೇ ಲಾಭದತ್ತ ಸಂಘವು ಮುನ್ನಡೆ ಸಾಧಿಸುತ್ತಿದೆ.
ಇದಕ್ಕೆ ಕಾರಣ ಸಂಘದ ಮುಖ್ಯಕಾರ್ಯ ನಿರ್ವಾಹಕರಾಗಿ ಕಳೇದ ೧೯೮೧ ರಿಂದ ಈ ಸಂಘದ ಅಧಿಕಾರ ವಹಿಸಿಕೊಂಡ ಶ್ರೀ ಮಹೇಶ ರವರು ಇದೇ ಸಂಸ್ಥೆಯುಲ್ಲಿ ಒಬ್ಬ ಸಾಮಾನ್ಯ ಕ್ಲಾಕ್೯ ಆಗಿ ಸೇವೆಮಾಡಿ ಅಪಾರ ಅನುಭವ, ಹಾಗೂ ರೈತರ ಪೂರ್ಣ ವಿಶ್ವಾಸ ಬೆಳೆಸಿಕೊಂಡ ಪರಿಣಾಮವಾಗಿ ಕನಿಷ್ಟ ಒಂದುವರೆ ಕೋಟಿ ರೂ,
ಸದಸ್ಯರ ಠೇವಣಿ ಹಣ ಪಿಗ್ಮಿ ಹಾಗೂ ಇತರೆ ಆದಾಯ ತರುವ ರೇಶನ್ ,ಗೊಬ್ಬರ,ಬಾಡಿಗೆ ಮಳಿಗೆ,ಶುದ್ದ ಕುಡಿಯುವ ನೀರಿನ ಘಟಕ, ಹೀಗೆ ಅನೇಕ ವ್ಯವಹಾರದ ಮೂಲಕ ದಿನೆ ದಿನೆ ಸಂಘದ ಸರ್ವತೋಮುಖ ಏಳಿಗರಗಾಗಿ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿತ್ಯ ರೈತರ ಅನೇಕ ಸಮಸ್ಯೆಗಳ ಮಧ್ಯ ಸಾಲ ವಸೂಲಿ ಮಾಡಿ, ಸಂಘದ ಕಾರ್ಯದರ್ಶಿ/ ಸಿಬ್ಬಂದಿ ಸೈ ಎನ್ನಿಸಿಕೊಂಡವರು.

ಎಲ್ಲಾ ರೈತರ ವಿಶ್ವಾಸ ಬೆಳೆಸಿಕೊಂಡ ಪರಿಣಾಮವಾಗಿ ಕನಿಷ್ಟ ೧೧,ಕೋಟಿ ರೂಪಾಯಿ ಹಾಗೂ ಬಿನ್ ಬಂಡವಾಳ ಸೇರಿದಂತೆ ಕೋಟಿ ಗಟ್ಟಲೇ ವ್ಯವಹಾರ ಹೊಂದಿರುವ ಸಂಸ್ಥೆ ಇದಾಗಿದೆ ,
ಇಂತಹ ಸಣ್ಣ ಗ್ರಾಮವಾದರೂ ಇದು ವಾಣಿಜ್ಯ ಪುಟ್ಟ ನಗರಿ ಎಂದರೆ ತಪ್ಪಾಗಲಾರದು ಸುತ್ತ ಹತ್ತಾರು ಹಳ್ಳಿ ರೈತರ ವ್ಯಾಪಾರ ಕೇಂದ್ರ ಈ ಗ್ರಾಮದಲ್ಲಿ ಹಲವು ರೀತಿಯ ವ್ಯಾಪಾರ ವಹಿವಾಟು ನಿತ್ಯ ನಡೆಯುತ್ತಿದೆ , ಇಂತಹ ಅವಕಾಶ ಉಪಯೋಗ ಮಾಡಿಕೊಂಡು ಇಲ್ಲಿ ಎರಡು ಬಾಡಿಗೆ ಮಳಿಗೆ ಕಟ್ಟಲಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕಾರ್ಯದರ್ಶಿ ಮಹೇಶ ಅವರ ಸರಳ ಪ್ರಾಮಾಣಿಕ ಸೇವೆ ಜೊತೆಗೆ ಉತ್ತಮ ಆಡಳಿತ ಮಂಡಳಿಯ ಪೂರ್ಣ ಸಹಕಾರ ಕಾರಣ ಎಂದು ಜಕ್ಕಲಿ ಅವರ ಅಭಿಪ್ರಾಯ,
ಒಟ್ಟು ನಾಲ್ಕು ಹಳ್ಳಿಗಳನ್ನು ಒಳಗೊಂಡ ಈ ಸಂಘ ಹನುಮನಾಳ, ನೀರಲಕೊಪ್ಪ, ತುಗ್ಗಲದೋಣಿ, ಶಾಡ್ಲಿಗೇರಿ, ಮಿಟ್ಟಲಕೊಡ ಒಟ್ಟು ೦೯ ಜನ ಸದಸ್ಯರನ್ನು ಒಳಗೊಂಡಿದೆ, ಹಾಗೂ ೧೧೭೨ ಸಂಘದ ಶೇರುಗಳನ್ನು ಒಳಗೊಂಡಿದೆ, ಚಿಕ್ಕ ಗ್ರಾಮದಲ್ಲಿ ಚೊಕ್ಕ ಸಂಘ ಇದಾಗಿದ್ದು ಗ್ರಾಮೀಣ ಭಾಗದಲ್ಲಿ ರೈತರ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ,ಎಂದರೆ ಅದಕ್ಕೆ ಮುಖ್ಯ ಕಾರಣ ನಮ್ಮಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಮಹೇಶ ಜಕ್ಕಲಿ ರವರ ಸಮಯ ಪಾಲನೆ ಹಾಗೂ ಅವರೊಂದಿಗೆ ಸದಾ ಕೈ ಜೊಡಿಸಿ ಸಕಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ,
ಸಂಘದ ಸಿಬ್ಬಂದಿಗಳಾದ ಮಲ್ಲಣ್ಣ,ಯ,ಹುಲ್ಲೂರು.
ನಿಂಗಪ್ಪ,ಹೊ,ಹಂಡಿ.ಮಾಂತೇಶ,ಸಂ,ಕುದರಿ.ತೇವರಪ್ಪ,ಲ,
ಚಿಕನಾಳ.ಮಂಜುನಾಥ,ಜಕ್ಕಲಿ. ಹೀಗೆ ಐದು ಜನ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನವನ್ನು ಇಂದು ನಾವೆಲ್ಲರೂ ಪ್ರಶೌಂಶನೆ ಮಾಡಲೇಬೇಕು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಡಿವೆಪ್ಪ, ಅ,ಗೌಡ್ರ. ಅವರು ರೈತರ ಬಗ್ಗೆ ಅಪಾರ ಪ್ರೀತಿ, ಹೊಂದಿರುವ ಮುತ್ಸದ್ದಿ ನಾಯಕರು ಇವರು ಸದಾ ಸಂಘದ ವ್ಯವಹಾರವನ್ನು ಪರಿಸಿಲಿಸಿ ನಿತ್ಯ ರೈತರಿಗೆ ತೊಂದರೆ ಆಗದಂತೆ ಸಿಬ್ಬಂದಿಗಳಿಗೆ ತಿಳಿ ಹೇಳಿ ಒಂದು ಸಂಘದ ಬಗ್ಗೆ ಜನತೆಯಲ್ಲಿ ಉತ್ತಮ ವಿಶ್ವಾಸ ಸಂಪಾದಿಸಲು ಬಹು ಕಷ್ಟ ಆ ನಂಬಿಗೆ ಯಿಂದಲೆ ಇಂದು ಈ ಸಂಘಕ್ಕೆ ಒಂದುವರೆ ಕೋಟಿ ಎಫ್,ಡಿ ಹಣ ಬಂದಿದೆ ಇದು ಸಂಘದ ಬಗ್ಗೆ ಇರುವ ನಂಬಿಕೆಯೇ ಕಾರಣ ಎಂದರು.
ಮುಂದಿನ ದಿನದಲ್ಲಿ ಇನ್ನೂ ಕೇವಲ ೩ ವರ್ಷದಲ್ಲಿ ಹತ್ತರಿಂದ ಹಣ್ಣೆರಡು ಕೋಟಿ ರೂಪಾಯಿ ವ್ಯವಹಾರ ಮಾಡಲು ನಾವು ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ಸಂಘದ ಇತರೆ ಆದಾಯ ಹೆಚ್ಚಿಸಲು ,ರೈತರಿಗೆ ಬಿಜ,ಗೊಬ್ಬರ, ಸಿಮ್ಮೆ ಎಣ್ಣಿ, ರೇಶನ್,ಹಾಗೂ ಶುದ್ದ ಕುಡಿಯುವ ನೀರಿನ ಘಟಕ, ಬಾಡಿಗೆ ಮಳಿಗೆ ಇತರೆ ವ್ಯವಹಾರದ ಸಲುವಾಗಿ ಸತತ ಪ್ರಯತ್ನ ಮಾಡಿ ಇಂದು ಯಶಸ್ಸು ಖಂಡಿದ್ದೇವೆ. ಈಗಾಗಲೇ ನಮ್ಮ ಸಂಘದಿಂದ ಗೊಬ್ಬರ, ರೇಶನ್, ಸಿಮ್ಮೆ ಎಣ್ಣಿ ಹಂಚಿಕೆ ಮಾಡುತ್ತಿದ್ದು,ಸಂಘದ ಕಾರ್ಯಾಲಯ ಬಹಳ ಚಿಕ್ಕದು ಗೊಬ್ಬರ ಸಂಗ್ರಹ ಮಾಡಲು ದೊಡ್ಡ ಗೂಡಾಮ್ ಬೇಕು ಅದಕ್ಕಾಗಿ ಒಂದು ಅಳತೆಯ ಸೈಟ್ ನೋಡಿದ್ದೇವೆ ಅಲ್ಲಿ ಹೊಸ ಕಟ್ಟಡ ಮಾಡಲು ವಿಚಾರ ಮಾಡಿದ್ದು ಅಲ್ಲಿಯೇ ಆಫೀಸ್, ಹಾಗೂ ಕಾರ್ಯದರ್ಶಿ ಅವರ ವಸತಿ ಗೃಹ, ಮಾಡಿ ದಿನದ ಯಾವುದೇ ಸಮಯದಲ್ಲಿ ನಾವು ರೈತರಿಗೆ ಸಿಗಬೇಕು ಎಂಬುದೇ ಮಹೇಶ ಅವರ ಅಭಿಪ್ರಾಯ ಇದು ಜನ ಸೇವಕರ ನಿಜವಾದ ಮಾತು.
ಇಂತಹ ಸತತ ಪ್ರಯತ್ನ ಬಲ ದಿಂದಾಗಿ ಯಾವುದೇ ಸಂಘ,ಸಂಸ್ಥೆಗಳು ಮುಂದೆ ಬಂದಲ್ಲಿ ಯಶಸ್ಸು ಖಂಡಿತ ದೊರೆಯುತ್ತದೆ, ಸಂಘದ ಅಧ್ಯಕ್ಷರು,ಹಾಗೂ ಕಾರ್ಯದರ್ಶಿ ಮಹೇಶ ಅವರ ಪ್ರಾಮಾಣಿಕ ಸೇವೆ ,ಹೀಗೆ ಮುಂದು ವರೆದಿದ್ದಲ್ಲಿ ಇದು ಮುಂದಿನ ದಿನಮಾನದಲ್ಲಿ ಸಾವಿರಾರು ರೈತರ ಜೀವನಾಡಿ ಆಗಲಿದೆ,ಈಗಾಗಲೇ ೧೧೭೨ ಶೇರುದಾರರನ್ನು ಒಳಗೊಂಡಿದೆ.
ಒಟ್ಟು ೦೯ ಜನ ಸದಸ್ಯರು ಇಲ್ಲಿ ಅಡಳಿತ ಮಾಡುತ್ತಿದ್ದಾರೆ ಮಹೇಶ ಜಕ್ಕಲಿ ಅವರ ಸರಳ ಗುಣ,ನಿಷ್ಟುರತೆ ಜೊತೆಗೆ ಶಾಂತ ಸ್ವಭಾವ, ಅವರ ನೇರ ನುಡಿ , ಅಷ್ಟೇ ಬೇಗ ಎಂತವನ್ನು ಸಹ ಆತ್ಮಿಯ ರನ್ನಾಗಿ , ಮಾಡುವ ಶಕ್ತಿ ಅವರಲಿದೆ , ಇಂದು ಅವರ ಈ ಸರಳ ವ್ಯಕ್ತಿತ್ವವನ್ನು ನೋಡಿ ನಮ್ಮ ಪತ್ರಿಕಾ ಬಳಗ ಅವರ ಪ್ರಾಮಾಣಿಕ ಸೇವೆ ಜೊತೆಗೆ ಸಂಘದ ಬಗ್ಗೆ ಅವರಿಗಿರುವ ಗೌರವ ಕಂಡು ಈ ಸಣ್ಣ ಪತ್ರಿಕೆ ಮೂಲಕ ಅವರನ್ನು ಜಿಲ್ಲೆಯ ಜನತೆಗೆ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ.
ಈ ಪ್ರಾಮಾಣಿಕ ಸೇವೆ ಮೆಚ್ಚಿ ನಮ್ಮ ಕರ್ನಾಟಕ ಪತ್ರಕರ್ತರ ಸಂಘ, ರೀ ,ಬಾಗಲಕೋಟೆ ಹಾಗೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ ಹಾಗೂ ನಮ್ಮ ಬಯಲು ಬಿರುಗಾಳಿ ಪತ್ರಿಕಾ ಬಳಗದಿಂದ ಮಹೇಶ್ ಜಕ್ಕಲಿ ಅವರಿಗ ಪ್ರಸಕ್ತ ೨೦೨೦ನೇ ಸಾಲಿನ “ಅತ್ಯುತ್ತಮ ಕರ್ತವ್ಯಪಾಲನೆ. ಪ್ರಶಸ್ತಿಯನ್ನು ನೀಡಲು ತಿರ್ಮಾಣಿಸಲಾಗಿದೆ.
ಇದೇ ತಿಂಗಳ ೨೮/೦೯/೨೦೨೦,ರಂದು ವಿತರಿಸಲಾಗುವು.
ಮಹೇಶ್ ಜಕ್ಕಲಿ ಹಾಗೂ ಸಿಬ್ಬಂದಿಯ ಅಭೂತಪೂರ್ವ ಶ್ರಮದ ಫಲವಾಗಿ ಇಂದು ಸಂಘ ಸಾವಿರ ರೈತರ ಜೀವನಾಡಿ ಆಗಲು ಅವರ ಪರಿಶ್ರಮ ಬಹಳ ಮುಖ್ಯ ಇಂದು ಅವರನ್ನು ಬೆನ್ನು ತಟ್ಟಿ ಅವರ ಕರ್ತವ್ಯ ಮೆಚ್ಚಿ ಸದಾ ಕಾಲ ಹೀಗೆ ಈ ಸಂಘದ ಬೆಳಣಿಗೆ ಬೆಳೆಯಲ್ಲಿ ಎಂದು ಶುಭ ಕೋರುತ್ತೇವೆ.