Breaking News

ಕರ್ನಾಟಕ ರತ್ನ ಡಾ: ಪುನಿತರಾಜಕುಮಾರ ಅವರ ೪೭ನೇ ಹುಟ್ಟುದ ನಿಮಿತ್ಯ ರಸಮಂಜರಿ ಕಾರ್ಯಕ್ರಮ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಭಾರತೀಯ ಜನತಾ ಪಕ್ಷದ ತಾಲೂಕಿನ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಅವರ ಸಾರಥ್ಯದಲ್ಲಿ ಅಪ್ಪು ಅವರ ಎಲ್ಲಾ ಅಭಿಮಾನಿಗಳಿಂದ ಕರ್ನಾಟಕದ ಯುವರತ್ನ ದಿ: ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಇಂದು ಶೂಲೇಭಾವಿ ಗ್ರಾಮದ ಭಾವೈಕ್ಯತಾ ಮಹಾದ್ವಾರದ ಮುಂದೆ ಅದ್ದೂರಿಯಾಗಿ ಕೆಕ್ ಮಾಡಿ ಅವರ ಭಾವಚಿತ್ರಕ್ಕೆ ಪುಸ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಕಾಯಿತು.

ಈ ಸರಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗೇಶ ಅವರು ಶೂಲೇಭಾವಿ ಗ್ರಾಮವೆಂದರೆ ಕಲಾವಿದರನ್ನು ಗೌರವಿಸು ತವರೂರು ಹೀಗಾಗಿ ಅವರ ಹುಟ್ಟು ಹಬ್ಬ ಹಾಗೂ ಅವರ ಸಾಮಾಜಿಕ ಸೇವೆ ನೋಡಿ ಇಡೀ ಕರ್ನಾಟಕ ಅಪ್ಪು ಅವರನ್ನು ಮನೆ ಮಗನಂತೆ ಅಂದು ಶೋಕಾಚರಣೆ ಮಾಡಿತ್ತು ಅಂತಹ ಮಹಾನ್ ಕಲಾವಿದನ ನೆನಪಿಗಾಗಿ ಇಂದು ಈ ಸರಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಇದಕ್ಕೆ ಮೂಲ ಕಾರಣ ನಮ್ಮ ನೀಲಪ್ಪ ಪೂಜಾರಿ ಅವರು ಎಲ್ಲಾರಿಗೂ ಕರೆ ಮಾಡಿ ಒಗ್ಗೂಡಿಸಿ ಈ ಕಾರ್ಯಕ್ರಮ ಮಾಡಲಾಗಿದೆ.

ವೀಣಾ ಮೆಲೋಡಿಸ್ ಗುಳೇದಗುಡ್ಡ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ.

ಇದಕ್ಕೆ ಎಲ್ಲಾ ನಮ್ಮ ಸ್ನೇಹಿತರು ಸಹಕಾರ ನೀಡಿದ್ದಾರೆ,ಈ ವೇದಿಕೆ ಮೂಲಕ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಈರಯ್ಯ ಲೂತಿಮಠ ಶ್ರೀ ಈರಪ್ಪ ಫರಾಳದ,ಶ್ರೀ ಆನಂದ ಮೊಕಾಶಿ,ಶ್ರೀ ಮಹಾಂತೇಶ ಕರಡಿ,ಶ್ರೀ ರಾಘವೇಂದ್ರ ಪೂಜಾರಿ,ಶ್ರೀ ಶ್ರೀಧರ ನೀರಂಜನ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಡಿ,ಬಿ ವಿಜಯಶಂಕರ,ಉಪಸ್ಥಿತಿ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನವಿಲುಕವಿ ಶ್ರೀಹರಿ ಧೂಪದ ಅವರು ನೇರವೇರಿಸಿದರು.

About vijay_shankar

Check Also

ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಮೇಶ ವಾಯ್ ಭಜಂತ್ರಿ.

ಶ್ರೀ ರಮೇಶ ಯಲ್ಲಪ್ಪ ಭಜಂತ್ರಿ ಜಿಲ್ಲಾ ಸಮಿತಿ ಸದಸ್ಯರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಅಧ್ಯಕ್ಷರು/ ಸಂಸ್ಥಾಪಕರು, ಪ್ರೀತಮ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.