
ಬಾಗಲಕೋಟೆ : ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕವನ್ನು ಸಂಘಟನಾ ಸಭೆಯು ಇಂದು ಬಾಗಲಕೋಟೆ ನಗರದ ಶ್ರೀ ಭರಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಭಾವತಿ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿದ್ದಮ್ಮ ಪಾಟೀಲ್, ಕಲಾವತಿ ಆರ್ ಕಾಮತ್, ಕಸ್ತೂರಿ ಲಯದಗುಂದಿ , ಕಮಲಾಕ್ಷಮ್ಮ ಎಚ್ ಗೌಡರ , ಸವಿತ ಪರಶುರಾಮ್ ಅಮರಗೊಂಡ, ಲಕ್ಷ್ಮಿಭಾಯಿ ಪಾಟೀಲ್, ಕಸ್ತೂರಿ ಹೆರಕಲ್ ರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಪ್ರಮುಖವಾಗಿ ಶ್ರೀಮತಿ ಮಲ್ಲಿಕಾ ಘಂಟಿ ಯವರು ವಿಶ್ರಾಂತ ಕುಲಪತಿ , ಶ್ರೀಮತಿ ಬಾಯಕ್ಕ ಮೇಟಿ (ಗಂಗೂಬಾಯಿ)ಕಾರ್ಯಧ್ಯಕ್ಷರು. ಕ. ಪ್ರ. ಕು. ಸಂಘ ಮಹಿಳಾ ಘಟಕ, ಶ್ರೀಮತಿ ರಾಧ ಅವಿನಾಶ್ ಜಿ. ಎಸ್.ಸಹ ಸಂಘಟನಾ ಕಾರ್ಯದರ್ಶಿ. ಕ.ಪ್ರ. ಕು.ಸಂ.ಮಹಿಳಾ ಘಟಕ. ಶ್ರೀಮತಿ ಮಹಾದೇವಿ ಕೆ ಕಂಬಳಿ, ಜಂಟಿ ಕಾರ್ಯದರ್ಶಿ ಕ. ಪ್ರ. ಕು. ಸಂ. ಮ. ಘಟಕ.ಕುಮಾರಿ ಮಮತಾ ಭಂಗಿ. ಪ್ರೊಫೆಸರ್ ಮತ್ತು ಸಂಚಾಲಕರು, ಕ. ಪ್ರ. ಕು. ಸಂ. ಮಹಿಳಾ ಘಟಕ ಹಾಗೂ ಬಾಗಲಕೋಟೆ ಜಿಲ್ಲಾ ಕುರುಬ ಸಂಘದ ನಿರ್ದೇಶಕರು, ಸಮುದಾಯದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.
