Breaking News

ಕೋರ್ಟ್ ತೀರ್ಪು ಕೊಡುವ
ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು- ದಿಂಗಾಲೇಶ್ವರ
ಸ್ವಾಮೀಜಿ

ಹುಬ್ಬಳ್ಳಿ- ಮೂರುಸಾವಿರ ಮಠ ಮರಳಿ ಪಡೆಯಲು ನಮ್ಮ ಹೋರಾಟ ನಿರಂತರವಾಗಿರಲಿದೆ. ಇದರಿಂದ ಹಿಂದೆ ಸರಿಯುವ ಮಾತು ಇಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ವಿಷಯ ಕುರಿತಂತೆ ಮಠಗಳ ಆಸ್ತಿ ಉಳಿಸುವ ಉದ್ದೇಶದಿಂದ ಅಖಿಲ ಭಾರತ ವೀರಶೈವ ಮಹಾಸಭೆ ಶಂಕರ್ ಬಿದರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ಮೂರುಸಾವಿರ ಮಠದ ಆಸ್ತಿ ಮರಳಿ ಕೊಡಿಸುವ ಕೆಲಸ, ಮಾಡಬೇಕು ಎಂದು ಒತ್ತಾಯಿಸಿದರು. ಕೆ ಎಲ್ ಇ ಸಂಸ್ಥೆ ಹಠಮಾರಿ ಧೋರಣೆ ತೋರುತ್ತಿರುವುದು ವಿಷಾದನಿಯವಾಗಿದೆ.

ಕೋರ್ಟ್ ತೀರ್ಪು ಕೊಡುವ ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು. ಹಾವೇರಿ ಗದಗ, ಹುಬ್ಬಳ್ಳಿಯಲ್ಲಿ ಮಠದ ಅಭಿಮಾನಿಗಳು ಹಾಗೂ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪರೇಷ ಸಿದ್ದಪಡಿಸಲಾಗುವದು. ಶಂಕರಣ್ಣ ಮುನವಳ್ಳಿಯವರು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಹೀಗಾಗಿ ಕೆಲ ದಿನಗಳ ಕಾಲ ಹೋರಾಟ ಸ್ಥಗಿತಗೊಳಿಸಿದ್ದೇವು. ಆದ್ರೆ ಈಗ ನಮ್ಮ ಹೋರಾಟವನ್ನು ಮತ್ತೊಂದು ದಿಕ್ಕಿನಲ್ಲಿ ತಿರುಗಯವ ಸೂಚನೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಹೋರಾಟ ನಡೆಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದರು.

About vijay_shankar

Check Also

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.