ವಿಜಯಪುರ : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೨೧೮೪ ಗುಣಮುಖರೋಗಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿ ಸದ್ಯ ೯೧೨ ಕೋವಿಡ್ -೧೯ ಪಾಸಿಟಿವ್ ಸಕ್ರಿಯ ರೋಗಿಗಳಿದ್ದು, ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಒಟ್ಟು ೩೬ ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಅವರು ತಿಳಿಸಿದ್ದಾರೆ. ಅದರಂತೆ ಜಿಲ್ಲೆಯ ವಿಜಯಪುರ ನಗರದಲ್ಲಿ ೨೦೨೨, ಬ.ಬಾಗೇವಾಡಿಯಲ್ಲಿ ೧೮೭, ಬಬಲೇಶ್ವರದಲ್ಲಿ ೫೨, ಚಡಚಣದಲ್ಲಿ ೩೦, ದೇ.ಹಿಪ್ಪರಗಿಯಲ್ಲಿ ೫೬, ಇಂಡಿಯಲ್ಲಿ ೧೫೯, ಕೋಲ್ಹಾರದಲ್ಲಿ ೩೮, ಮುದ್ದೇಬಿಹಾಳದಲ್ಲಿ ೧೪೮, ನಿಡಗುಂದಿಯಲ್ಲಿ ೩೫, ಸಿಂದಗಿಯಲ್ಲಿ ೧೬೫, ತಾಳಿಕೋಟಿಯಲ್ಲಿ ೧೭೮, ತಿಕೋಟಾದಲ್ಲಿ ೬೨ ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.