

ಬಾಗಲಕೋಟೆ : ನಗರದ ಝನ್ ಶಿಟೋರಿಯೋ ಕರಾಟೆ ಶಾಲೆಯಿಂದ ಕುಮಾರಿ ತೇಜಸ್ವಿನಿ ಎಸ್ ಹೊಟ್ಟಿ, ಕುಮಾರ ಸದ್ದಾಂ ,ಡಿ, ಯಾಳವಾರ, ಕುಮಾರ, ಆಶೀಫ್ ಕೆ ನದಾಫ್ ಕುಮಾರ, ಅನಸ್ ಕೆ ಮನೀಯಾರ, ಕುಮಾರ, ಭೀಮರಾವ್ ಎಸ್, ಮಾದರ ಈ ಆರು ವಿಧ್ಯಾರ್ಥಿಗಳು ನಾಳೆ ನಡೆಯುವ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಯಲ್ಲಿ ಭಾಗವಹಿಸಲಿದ್ದಾರೆ, ಇಲ್ಲಿ ವಿಜಯಶಾಲಿಯಾದರೆ ಇಂಡೋನೇಷ್ಯಾದ ಕಚ್ಚ್ ನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಕಿದ್ದಾರೆ.




ಇವರು ಅಲ್ಲಿಯೂ ಉತ್ತಮ ಸ್ಪರ್ಧ ನೀಡಿ ಈ ರಾಜ್ಯದ ,ದೇಶದ ಕೀರ್ತಿ ಬೆಳಗಲೆಂದು ಬಾಗಲಕೋಟೆ ಮತ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಎಚ್,ವಾಯ್ ಮೇಟಿ , ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಎಸ್,ಜಿ, ನಂಜಯ್ಯನಮಠ ಅವರು ಹಾಗೂ ಸಮಾಜ ಸೇವಕರಾದ ಶ್ರೀ ಸಂತೋಷ ಹೊಕ್ರಾಣಿ , ಶ್ರೀ ಮಲ್ಲಿಕಾರ್ಜುನ ಚರಂತಿಮಠ , ಸಮಾಜ ಸೇವಕಿ ಶ್ರೀಮತಿ ಕವಿತಾ ದೇವರೆಡ್ಡಿ, ಅನೇಕ ರಾಜಕೀಯ ಯುವ ನಾಯಕರು ಶುಭ ಕೋರಿದರು. ಈ ವಿಧ್ಯಾರ್ಥಿಗಳಿಗೆ ಕರಾಟೆ ಮಾಸ್ಟರ್ ಆದ ಶ್ರೀ ಹಸನ್ ಯಾಳವಾಡ ಮಾರ್ಗದರ್ಶನ ಮಾಡಿದ್ದರು.