Breaking News

ಸಂಘದ ಮನೆ ಮಗನಂತೆ ರೈತರ ಸೇವೆ ಮಾಡಲು ನಾನು ಸದಾ ಸಿದ್ದ ಹುಸೇನಪಾಷಾ ಬೇಪಾರಿ!

ಅಮೀನಗಡ
ನಗರದ ವಿವಿದ್ದೋದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಹುಸೇನಪಾಷಾ ಉಮರಸಾಬ ಬೇಪಾರಿ ಅವರು ಅಧ್ಯಕ್ಷರಾದ ನಂತರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಗಿ ಪಾಲ್ಗೊಂಡಿದ್ದಾರೆ. ಮೂಲತಹ ಕೃಷಿ ಮತ್ತು ಆಡು ಮೇಕೆಗಳ ಸಾಗಾಣಿಕೆ ಉದ್ದೆಮೆದಾರರಾಗಿ ಸಮಾಜ ಸೇವೆ ಮಾಡುತ್ತಾ ಮುಸ್ಲಿಂ ಸಮಾಜದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡವರು.

ಹುನಗುಂದ ತಾಲೂಕಿನ ಅಮೀನಗಡದ ಮುಸ್ಲಿಂ ಸಮಾಜದ ಯುವ ನಾಯಕ ಹುಸೇನಪಾಷಾ ಅವರು ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂಬ ಹಂಬಲದಿಂದ ಸ್ಥಳೀಯ ಈ ಸಂಘದ ಸದಸ್ಯರಾಗಿ, ಅಧ್ಯಕ್ಷರಾಗಿ ಇಂದು ಹುಸೇನಪಾಷಾ ಅವರು ಜನ ಸೇವೆ ಮಾಡುತ್ತಿದ್ದಾರೆ. ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಏನೆ ಸಮಾದಲ್ಲಿ ಕಾರ್ಯಕ್ರಮ ,ಸಮಾಜದ ಹಿರಿತನದಲ್ಲಿ ಸಮಾಜದ ಎಲ್ಲಾ ಮುಖಂಡರೊಂದಿಗೆ ವಿಶ್ವಾಸಕ್ಕೆ ಪಡೆದು ಹಿರಿಯ ಮಾರ್ಗದಲ್ಲಿ, ಸನಾಜದ ಎಲ್ಲಾ ಯುವಕರೊಂದಿವೆ ಉತ್ತಮ ಸ್ನೇಹವನ್ನು ಹೊಂದಿ ಅವರ ಉಧ್ಯಮಕ್ಕೆ ಆರ್ಥಿಕ ಸಹಾಯ ಮಾಡಿ ಸಮಾಜದ ಬಲವರ್ಧನೆಗೆ ಟೊಂಕ ಕಟ್ಟಿನಿಂತ ಹುಸೇನಪಾಷಾ ಅವರ ಈ ಯುವ ನಾಯಕತ್ವ ಈ ಸಮಾಜಕ್ಕೆ ಮುಂದಿನ ದಿನಮಾದಲ್ಲಿ ದೊಡ್ಡ ಆಸ್ತಿ ಆಗಲಿದೆ. ಇಂತಹ ಯುವ ನಾಯಕರು ರಾಜಕೀಯವಾಗಿ ಮುಂದೆ ಬರಬೇಕು,ಅಂದಾಗ ಮಾತ್ರ ಸಮಾಜ ಸದೃಢವಾಗಲು ಸಾಧ್ಯ , ರೈತರಿಗೆ ಸರಕಾರದ ಹಲವಾರು ಸಾಲ ಸೌಲಭ್ಯಗಳನ್ನು ನೀಡಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘವನ್ನು ಬೆಳೆಸಬೇಕೆಂದು ವಿನಂತಿಸಿ ನಾಡಿನ ಸಮಸ್ತ ಕುಲ ಕೋಟಿ ಬಾಂಧವರಿಗೆ ಗೌರಿ – ಗಣೇಶ ಹಬ್ಬದ ಶುಭಾಶಯ ತಿಳಿಸಿದರು. ಸಂಘಜೀವಿ,ಸ್ನೇಹಜೀವಿಯಾದ ಹುಸೇನಪಾಷಾ ಅವರು ಹಿಂದೂ ಮುಸ್ಲಿಂ ಎನ್ನದೆ ಸೌಹಾರ್ದಯುತವಾಗಿ ಸಮಾಜದಲ್ಲಿ ಸಾಮರಸ್ಯ ಮುಡಿಸಲು ಯುವಕರಿಗೆ ಉತ್ತೆಜನ ನೀಡುತ್ತಿರುವ ಹುಸೇನಪಾಷಾ ಅವರ ಈ ನೀಲುವು ಶ್ಲಾಘನೀಯ. ಮುಂದಿನ ದಿನಮನದಲ್ಲಿ ನಗರದ ಪಟ್ಟಣ ಪಂಚಾಯತ ಚುನಾವಣೆಗೆ ಇಂತಹ ಯುವ ಉತ್ಸಾಹಿ ಯುವಕರು ಮುಂದೆ ಬಂದಾಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ ನಿಲುವು ನಮ್ಮದು ಹುಸೇನಪಾಷಾ ಅವರು ಇದೆ ತರ ಉತ್ತಮ ಚಿಂತನೆಗಳಿಂದ ಸಾಗಿದರೆ ಮುಂದೆ ದೊಡ್ಡ ಮಟ್ಟದಲ್ಲಿ ಬೇಪಾರಿ ಸಮಾಜದ ಬಲಿಷ್ಠ ನಾಯಕನಾಗಿ ಬೆಳೆಯುತ್ತಾನೆ ,ಎಂಬುದವುದರಲ್ಲಿ ಎರಡು ಮಾತಿಲ್ಲ

ಅಮೀನಗಡ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯ.

About vijay_shankar

Check Also

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.