
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ನೂತನ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ ,ಇದರ ತಾಲೂಕಿನ ಅಧ್ಯಕ್ಷರಾಗಿ ನಗರದ ವಿವಿಧ ಪತ್ರಿಕೆಯ ಸಂಪಾದಕರ ಸಮ್ಮುಖದಲ್ಲಿ ಅಧಿಕೃತವಾಗಿ ಸದರಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ದಾನಯ್ಯಸ್ವಾಮಿ ಹಿರೇಮಠ ಅವರು ಘೋಷಣೆ ಮಾಡಿದರು, ನಗರದ ಪ್ರವಾಸಿ ಮಂದಿರದಲ್ಲಿ ಈ ಸರಳ ಸಭೆಯಲ್ಲಿ ನೂತನ ಸಾರಥಿ ನೀಡಲಾಯಿತು, ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ಸೇರಿದಂತೆ ಜಿಲ್ಲಾ ಕಾರ್ಯದರ್ಶಿ ಶ್ರೀ ಡಿ,ಬಿ ವಿಜಯಶಂಕರ್,ಹುನಗುಂದ ತಾಲೂಕಿನ ಅಧ್ಯರಾದ ಶ್ರೀ ರಾಮನಗೌಡ ಶಿವಣಗಿ, ಹಿರಿಯ ಸಂಪಾದಕರು ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಮಹಾಂತೇಶ ಬೇವುನೂರಮಠ,ಶ್ರೀ ತಿರ್ಥಲಿಂಗ ಬೆಳಗಲ್ಲ, ಶ್ರೀ ಅಶೋಕ ಸಿಳ್ಳೇಕ್ಯಾತರ್, ಇನ್ನೂ ಅನೇಕ ಜನ ಸಂಪಾದಕರು ಉಪಸ್ಥಿತಿ ಇದ್ದರು.

ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಅಧ್ಯಕ್ಷರಿಗೆ ನಮ್ಮ ಜಿಲ್ಲಾ ಸಂಪಾದಕರ ಸಂಘದ ಪರವಾಗಿ ಆರ್ ಕೆ, ನಂದಿಹಾಳಮಠ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು,
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News