ಅಮೀನಗಡ: ಇಂದು ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಬೆಳಗ್ಗೆ ೬ ಗಂಟೆಗೆ ವಿಶ್ವ ಯೋಗ ದಿನದ ನಿಮಿತ್ತವಾಗಿ ಗ್ರಾಮದ ವೀರ ಸಾರ್ವಕರ ಯುವಸೇನೆ ಸಂದಿಂದ ಈ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಯೋಗಪಟು ಗ್ರಾಮದ ಸಂಗಮೇಶ ಘಂಟಿ ಅವರಿಂದ ಶಾಲಾ ಮಕ್ಕಳಿಗೆ ,ಕಿರಿಯರಿಗೆ, ಮಹಿಳೆಯರಿಗೆ, ಒಂದು ಗಂಟೆ ಯೋಗದ ವಿವಿಧ ಭಂಗಿಗಳ ನ್ನು ನಿತ್ಯ ಮನೆಯಲ್ಲಿ ಹೇಗೆ ಮಾಡಬೇಕು ಎಂದು ಸಂಗಮೇಶ ಅವರು ತಿಳಿಸಿ ಕೊಟ್ಟರು. …
Read More »ಖ್ಯಾತ ನಿರ್ದೇಶಕ ವಿಶ್ವನಾಥ ನಿರ್ದೇಶಿಸಿರುವ ‘ಮಾರಿಗಡ’ ಚಲನಚಿತ್ರ ಶೀಘದಲ್ಲೇ ಬಿಡುಗಡೆ
ಹುಬ್ಬಳ್ಳಿ :‘ಮಾರಿಗಡ’ ಚಲನಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವದು ಎಂದು ಚಿತ್ರದ ನಿರ್ದೇಶಕ ವಿಶ್ವನಾಥ ಎಂ ಹೇಳಿದರು.ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಯುವ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ‘ಮಾರಿಗಡ’ ಚಲನಚಿತ್ರದಲ್ಲಿ ಮಾರೇಶ, ಅನನ್ಯ,ರೂಪಾ, ಶಶಿಕುಮಾರ್, ಮಹೇಶ್, ಅಂಬಿಕಾ ಸೇರಿದಂತೆ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿಶೇಷವಾಗಿ ಇದರಲ್ಲಿ ನಾಯಕನಾಗಿ ಅಭಿನಯಿಸಿರುವ ಮಾರೇಶ್ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮದ ಬಹುರೂಪಿ ಕಲಾವಿದರ (ವೇಷಗಾರ) ಕುಟುಂಬದವರಾಗಿದ್ದು ಭಿಕ್ಷಾಟನೆ …
Read More »ವೀರ ಸೈನಿಕ ಪಾರೂಕ್ ಸೈಯದ್ ತಂಗಡಗಿ ಅವರಿಗೆ ೨೩ ವರ್ಷದ ಹುಟ್ಟು ಹಬ್ಬದ ಸಂಭ್ರಮ
ಅಮೀನಗಡ: ಕಾಶ್ಮೀರ ಕಣಿವೆಯಲ್ಲಿ ಕಳೇದ ಎರಡು ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ ವೀರ ಯೋದ ಕುಮಾರ್ ಪಾರೂಕ್ ಸೈಯದ್ ತಂಗಡಗಿ ಅವರಿಗೆ ಗ್ರಾಮದ ಅಲ್ಪಸಂಖ್ಯಾತ ಯುವ ಮುಖಂಡರು ಹಾಗೂ ಅಭಿಮಾನಿಗಳು ನಿನ್ನೆಯ ದಿನ ಶೂಲೇಭಾವಿಯ ಅಂಜುಮನ್ ಕಮಿಟಿಯ ಶಾದಿ ಮಹಲ್ ನಲ್ಲಿ ಓಣಿಯ ಯುವಕರು ಅಭಿಮಾನದಿಂದ ಕೇಕ್ ತರಿಸಿ ಇವರ ತಂದೆ/ತಾಯಿ ಅವರಿಗೆ ಸನ್ಮಾನಿಸಿ ಇವರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿದರು. ಈ ದೇಶ ಸೇವೆ ಮಾಡಲು ಮಗನನ್ನು ಹುರುದುಂಬಿಸಿ ಅವರ …
Read More »ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರಿಂದ ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಪ್ರಚಾರ ಸಭೆ
ಇಲಕಲ್ಲ : ಇಂದು ನಗರದ ಆರ್ ವೀರಮಣಿ ಸಭಾಭವನ ದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಕ್ಷೇತ್ರದ ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆ ಯ ಪ್ರಚಾರ ಸಭೆಯು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಪ್ರಕಾಶ ಬಾ ಹುಕ್ಕೇರಿ ಅವರು ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಸುನೀಲ ಸಂಕ …
Read More »ಕಮತಗಿಯಲ್ಲಿ ನೆಹರು ಯುವ ಕೇಂದ್ರ ಬಾಗಲಕೋಟೆ & ವಿವಿಧ ಸಂಸ್ಥೆಯ ಸಹಯೋಗ ದಲ್ಲಿ ವಿಶ್ವ ಪರಿಸರ ದಿನಾಚರಣೆ
ಕಮತಗಿ: ಇಂದು ನಗರದಲ್ಲಿ ಶ್ರೀ ನೆಹರು ಯುವ ಕೇಂದ್ರ ಬಾಗಲಕೋಟ ಹಾಗೂ ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ ಹಾಗೂ ರೈನ್ ಬೋ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಕಮತಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಹಾಗೂ ಉದ್ಘಾಟಕರಾಗಿ ಸುಷ್ಮಾ ಎಂ ಗವಳಿ ( ಡಿಸ್ಟಿಕ್ ಯೂತ್ ಆಫೀಸರ ) ಹಾಗೂ ಕಾರ್ಯಕ್ರಮದಲ್ಲಿ ಶ್ರೀ …
Read More »ಕಮತಗಿ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಷ್ಮಣ್ಣ ದ್ಯಾಮಣ್ಣನವರಿಂದ SSLC ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಕಮತಗಿ : ಕಳೆದ SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಚ್ಮಣ್ಣ ದ್ಯಾಮಣ್ಣನವರ ದಂಪತಿಗಳು ತಮ್ಮ ವಾರ್ಡ ೮ ರಲ್ಲಿ ಇಂದು ಸಾಯಂಕಾಲ ಎಲ್ಲಾ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಪ್ರಮಾಣಪತ್ರ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಸನ್ಮಾನ್ಯ ಶ್ರೀಮತಿ ನಂದಾ ಲ ಧ್ಯಾಮಣ್ಣನವರ ಸದಸ್ಯರು ಪಟ್ಟಣ ಪಂಚಾಯತಿ ಕಮತಗ. ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ಬಾಗಲಕೋಟೆ ನಗರದ …
Read More »ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಿ: ವಿಠ್ಠಲ ಸಾಲಿಯಾನ್
ಹುನಗುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹುನಗುಂದ ತಾಲೂಕಿನ ಬೆಳಗಲ್ಲ ವಲಯದ ಧನ್ನೂರು ಗ್ರಾಮದ ಶಾರದಾ ವಿದ್ಯಾ ನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ ಸಾಲಿಯಾನ್ ರವರು ಮಾತನಾಡುತ್ತಾ ಯೋಜನೆಯು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಕಾರ್ಯಕ್ರಮವು ಒಂದು. ಇಂದಿನ ದಿನ ಆಮ್ಲಜನಕದ ಕೊರತೆಯಿಂದ ಮನುಕುಲವೇ ಪರದಾಡುವಂತಾಗಿದೆ. …
Read More »ನವಲಗುಂದ ನಗರದಲ್ಲಿ ತಾಜ್ ಮಹಲ್-೨ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ *
ನವಲಗುಂದ : ನವಲಗುಂದ ನಗರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ “ತಾಜ್ ಮಹಲ್-೨” ಕನ್ನಡ ಚಲನಚಿತ್ರದ ಧ್ವನಿಸುರುಳಿಯೊಂದು ಬಿಡುಗಡೆಗೊಂಡು ಹೊಸದೊಂದು ಇತಿಹಾಸವೇ ನಿರ್ಮಾಣವಾಯಿತು. ಇದರ ಕೇಂದ್ರಬಿಂದುವಾಗಿದ್ದ ಮನ್ವರ್ಷಿ ನವಲಗುಂದ ತಮ್ಮ ಊರಿನ ಬಗೆಗೆ ಇರುವ ಅಭಿಮಾನವೇ ಇದಕ್ಕೆಲ್ಲ ಕಾರಣವಾದದ್ದು.ಗ್ರಾಮದ ಮುಖ್ಯ ಅತಿಥಿಗಳಾಗಿ ಸಕ್ಕರೆ ,ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಮಿಸಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿ ತಮ್ಮೂರ ಹುಡುಗ ಮನ್ವರ್ಷಿ ಅವರ ಸಾಧನೆಗೆ ಮೆಚ್ಚುಗೆ …
Read More »ನೂತನ ಜಿಲ್ಲಾಧಿಕಾರಿ ಪಿ, ಸುನೀಲಕುಮಾರ್ ಅವರಿಗೆ ಕ, ಪ, ಸಂಘದ ಜಿಲ್ಲಾ ಅಧ್ಯಕ್ಷ ಡಿ,ಬಿ,ವಿಜಯಶಂಕರ್ ಅವರಿಂದ ಸನ್ಮಾನ
ಬಾಗಲಕೋಟೆ: ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಪಿ,ಸುನೀಲಕುಮಾರ ಅವರಿಗೆ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಅವರು ಸನ್ಮಾನ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಸಂಗಪ್ಪ ದುರಗಪ್ಪ ಭಜಂತ್ರಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಹಾಜಿಮಸ್ತಾನ್ …
Read More »ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶ್ರೀಮತಿ ಸರೋಜಾ ವಡ್ಡರ ,ಆಯ್ಕೆ ಮಾಡಿದ ಮುಖಂಡರಿಗೆ ಕೃತಜ್ಞತೆಗಳು/ಸವಾಲುಗಳು
ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ. ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ನೂತನ ಅಧ್ಯಕ್ಷರಾಗಿ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅವರು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಆದರು. ಈ ಹಿಂದೆ ಇದ್ದ ಗ್ರಾಮ ಪಂ,ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜಿನಾಮೆ ನೀಡಿದ ಪ್ರಯುಕ್ತ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷೆ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವುದರಿಂದ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News