Breaking News

65 ಇನ್ಸ್ ಪೆಕ್ಟರ್ ಗಳನ್ನು ಎತ್ತಂಗಡಿ ಮಾಡಿದ ರಾಜ್ಯ ಪೊಲೀಸ್ ಇಲಾಖೆ ಬೆಂಗಳೂರು

BB News Kannada

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಇನ್ಸ್ಪೆಕ್ಟರ್ ಎಲ್.ದೀಪಕ್ ಸೇರಿ 65 ಇನ್ಸ್ಪೆಕ್ಟರ್ಗಳನ್ನು ಎತ್ತಂಗಡಿ ಮಾಡಿ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯದ ವಿವಿಧೆಡೆ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 65 ಇನ್ಸ್ಪೆಕ್ಟರ್ಗಳನ್ನು ತಕ್ಷಣ ಜಾರಿಗೆ ಬರುವಂತೆ ವಿವಿಧ ಭಾಗಗಳಿಗೆ ವರ್ಗಾವಣೆ ಮಾಡಲಾಗಿದ್ದು, ಸಂಬಂಧಿಸಿದ ಘಟಕಾಧಿಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.


ಪಿ.ಜಿ.ಮಧುಕರ್ (ಬೆಂಗಳೂರು ಎಟಿಸಿ), ಶಿವಾನಂದ್ ಬೇವೂರು (ಲೋಕಾಯುಕ್ತ), ಶಿಲ್ಪಾ (ಸಿಐಡಿ), ವೀರಭದ್ರಯ್ಯ ಹೀರೆಮಠ್ (ಲೋಕಾಯುಕ್ತ), ದಯಾನಂದ್ ಶೆಗುಣಿಸಿ (ಐಎಸ್‌ಡಿ), ಜಾವೆದ್ ಮುಸಾಪುರಿ(ಎಸಿಬಿ), ಬಸವರಾಜು ಬಿ(ಲೋಕಾಯುಕ್ತ), ರಂಗಸ್ವಾಮಿ ವೈಆರ್ (ರಾಜ್ಯ ಗುಪ್ತವಾರ್ತೆ), ಎಲ್.ದೀಪಕ್ (ಗಿರಿನಗರ ಠಾಣೆ), ಜಿ.ಗುರುಪ್ರಸಾದ್(ಜಯನಗರ ಸಂಚಾರ ಠಾಣೆ), ವಿ.ಮಡಿವಾಳ ಚಿದಂಬರ(ಎಸಿಬಿ), ಕೆ.ರಾಜೇಂದ್ರ(ಲೋಕಾಯುಕ್ತ), ಬಸವರಾಜ್ ಜಿ.ಪುಲಾರಿ (ಎಸಿಬಿ) ಸೇರಿ 65 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

About vijay_shankar

Check Also

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.