Breaking News

ಇಲಕಲ್ಲ ನಗರದ ಸರ್ವ ವಿಜಯ ಸೇವಾ ಸಂಸ್ಥೆಯಿಂದ ಪತ್ರಿಕೆಯ ವಿತರಕರಿಗೆ ಸನ್ಮಾನ.

ಇಲಕಲ್ಲ : ನೂತನ ಇಲಕಲ್ಲ ತಾಲೂಕಿನ ನಗರದಲ್ಲಿ ವಿವಿಧ ದಿನ ಪತ್ರಿಕೆಯ ಎಲ್ಲಾ ವಿತರಕರಿಗೆ ಶುಭಾಶಯ ಕೋರುವ ಮೂಲಕ ಅವರನ್ನು ಕರೆಹಿಸಿ ಸಂಸ್ಥೆಯ ಕಾರ್ಯಾಲಯದಲ್ಲಿ ಅವರಿಗೆ ಸರ್ವ ವಿಜಯ ಸೇವಾ ಸಂಸ್ಥೆ ಯ ವತಿಯಿಂದ ಸಂಸ್ಥೆಯ ಗೌರವ ಅಧ್ಯಕ್ಷರಾದ ಸನ್ಮನ್ಯ ರಾಜು ಎಮ್ ಬೋರಾ ,ಧಣಿಗಳು ಎಲ್ಲಾ ಪತ್ರಿಕೆ ವಿತರಕನ್ನು ಗೌರವಿಸಿ, ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಮಳೆ ,ಚಳಿ ಎನ್ನದೇ ಸರಿಯಾಗಿ ಬೆಳಕಿನ ಜಾವ ೦೬ ಗಂಟೆಗೆ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಅವರ ಕಾಯಕ ಈ ದಿನ ಎಲ್ಲಾ ಸಾರ್ವಜನಿಕರು ಇವರ ಕಾಯಕ ನಿಷ್ಟೆ ಯನ್ನು ಗೌರವಯುತ ವಾಗಿ, ಕಾಣಬೇಕು ಅ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಇವರನ್ನು ಗುರುತಿಸಿ ಇವರ ಕಾಯಕ ಮೆಚ್ಚಿ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಹಾಗಾಗಿ ಇವರಿಗೆ ನನ್ನ ಪರವಾಗಿ ಹಾಗೂ ನಮ್ಮ ಸಂಸ್ಥೆಯ ಪರವಾಗಿ ಎಲ್ಲಾ ಮಾಧ್ಯಮ ಪತ್ರಿಕಾ ವಿತರಕರಿಗೆ ಹಾರ್ಧಿಕ ಶುಭಾಶಯಗಳು ಎಂದರು,
ಈ ಸಂಧರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಸೇರಿದಂತೆ ಶ್ಯಾಮ್ ಸುಂದರ್,ಕರವಾ ,ಮತ್ತು ಸಂಸ್ಥೆಯ ಸಿಬ್ಬಂದಿ ಹಾಗೂ ಹಿರಿಯ & ಕಿರಿಯ ಪತ್ರಿಕೆಯ ವಿತರಕರು ಹಾಜರಿದ್ದರು .

About vijay_shankar

Check Also

ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಸಂಪನ್ನ

ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.