Breaking News

ಮತ್ತೆ ಏರಿದ ಈರುಳ್ಳಿ ದರ, ತರಕಾರಿ-ಸೊಪ್ಪುಗಳ ಬೆಲೆಯೂ ಹೆಚ್ಚಳ!

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬೆಳೆಗಳ ರೋಗ ಬಾಧೆಯಿಂದ ಅಪಾರ ಪ್ರಮಾಣದಲ್ಲಿ ಬೆಲೆಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೊಪ್ಪು ತರಕಾರಿ ಸೇರಿದಂತೆ ಈರುಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ.

ಬೆಂಗಳೂರು:ಈರುಳ್ಳಿ ದರ ಮತ್ತೆ ಏರಿಕೆಯಾಗಿದೆ. ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬೆಳೆಗಳ ರೋಗ ಬಾಧೆಯಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲೂಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಈರುಳ್ಳಿ ದರ ಎರಡು ವಾರಗಳಿಂದೀಚೆಗೆ 20-25 ರೂ. ಇದ್ದುದು ಇದೀಗ 30-45 ರೂ.ವರೆಗೆ ಏರಿಕೆಯಾಗಿದೆ. ಈರುಳ್ಳಿ ಕೊರತೆಯಿಂದಾಗಿಯೇ ಕೇಂದ್ರ ಸರಕಾರ ರಫ್ತು ಪ್ರಕ್ರಿಯೆಯನ್ನು ನಿಷೇಧಿಸಿದೆ.

ಇಡೀ ದೇಶಾದ್ಯಂತ ಮುಂದಿನ ಬೆಳೆ ಬರುವವರೆಗೆ ಮಹಾರಾಷ್ಟ್ರದಲ್ಲಿರುವ ಹಳೆಯ ದಾಸ್ತಾನನ್ನೇ ಅವಲಂಬಿಸಬೇಕಾಗಿದೆ ಎಂದು ಯಶವಂತಪುರ ಎಪಿಎಂಸಿಯ ರವಿ ಟ್ರೇಡಿಂಗ್‌ ಕಂಪನಿಯ ಬಿ. ರವಿಶಂಕರ್‌ ತಿಳಿಸಿದರು.

ನವೆಂಬರ್‌ ನಂತರ ಮಹಾರಾಷ್ಟ್ರ , ರಾಜಸ್ಥಾನದಿಂದ ಹೊಸ ಬೆಳೆ ಬರಬೇಕು. ಅದಕ್ಕೆ ಸಂಬಂಧಿಸಿದಂತೆ ನಾಟಿ ಮಾಡಲು ಅಣಿಯಾಗಿರುವ ಸಸಿಗಳು ಸಹ ಮಳೆಯಿಂದ ಹಾನಿಗೊಳಗಾಗಿವೆ. ಅದರಲ್ಲೂ ಕೊರತೆ ಬರಬಹುದು. ಇದರ ಜತೆಗೆ ಮಳೆ ಮುಂದುವರಿದರೆ ರೈತರ ಬಳಿ ಉಳಿದಿರುವ ಅಲ್ಪ ಸ್ವಲ್ಪ ಬೆಳೆಯೂ ಕೊಳೆತು ಹೋಗಬಹುದು. ಹೀಗಾಗಿ, ಈರುಳ್ಳಿ ಧಾರಣೆ ಕಳೆದ ವರ್ಷದಂತೆ ಈ ವರ್ಷವೂ ಅತಿ ಹೆಚ್ಚಾಗುವ ಸಂಭವವಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈರುಳ್ಳಿ ರಫ್ತು ನಿಷೇಧದಿಂದ ಪಾಕಿಸ್ತಾನಕ್ಕೆ ಲಾಭ, ರೈತರಿಗೆ ನಷ್ಟ – ನಿರ್ಧಾರ ಮರುಪರಿಶೀಲಿಸಿ ಎಂದ ಪವಾರ್‌

ಎಪಿಎಂಸಿಯಲ್ಲಿ ಮಹಾರಾಷ್ಟ್ರದ ಮೊದಲ ದರ್ಜೆಯ ಹಳೆಯ ಈರುಳ್ಳಿ ಕೆ.ಜಿ.ಗೆ 28-29 ರೂ. ಇದ್ದರೆ, ಕರ್ನಾಟಕದ ಈರುಳ್ಳಿ ಕೆ.ಜಿ.ಗೆ 26-27 ರೂ. ಇದೆ. ಹಾಪ್‌ಕಾಮ್ಸ್ನಲ್ಲಿ ಕೆ.ಜಿ.ಗೆ 45 ರೂ. ಇದೆ. ಚಿಲ್ಲರೆ ಮಾರಾಟಗಾರರು ಎರಡು ಮತ್ತು ಮೂರನೇ ದರ್ಜೆಯ ಈರುಳ್ಳಿಯನ್ನು 30 ರೂ. ಮೇಲ್ಪಟ್ಟು ಮಾರುತ್ತಿದ್ದಾರೆ.

ಏಕಾಏಕಿ ಎಲ್ಲಾ ವಿಧಧ ಈರುಳ್ಳಿ ರಫ್ತುನ್ನು ನಿಷೇಧಿಸಿದ ಭಾರತ, ಬಾಂಗ್ಲಾದೇಶ ಸೇರಿ ಕೆಲವು ದೇಶಗಳಿಗೆ ಹೊಡೆತ?

ಗಗನಕ್ಕೇರಿದ ಇತರೆ ತರಕಾರಿಗಳು
ಮಳೆಯಿಂದಾಗಿ ಬಹುತೇಕ ಸೊಪ್ಪು, ತರಕಾರಿಗಳ ದರದಲ್ಲಿತೀವ್ರ ಪ್ರಮಾಣದಲ್ಲಿಏರಿಕೆಯಾಗಿದೆ. ಹಾಪ್‌ ಕಾಮ್ಸ್ ನಲ್ಲಿ ಬೀನ್ಸ್‌ 85 ರೂ. ತಲುಪಿದರೆ, ಕ್ಯಾರಟ್‌ 95 ರೂ. ಟೊಮೇಟೊ 55 ರೂ., ಬೆಂಡೆಕಾಯಿ-56 ರೂ., ನುಗ್ಗೆಕಾಯಿ-92 ರೂ. ಹೀಗೆ ಬಹುತೇಕ ತರಕಾರಿಮತ್ತು ಸೊಪ್ಪುಗಳ ದರ ಗಗನಕ್ಕೇರಿದೆ.

ನೊಗಕ್ಕೆ ಹೆಗಲು ಕೊಟ್ಟ ರೈತರು !

ಮೊಟ್ಟೆ ದರ 6 ರೂ.ಗೆ ಏರಿಕೆ:
ಒಂದೆಡೆ ಪಿತೃಪಕ್ಷದಿಂದಾಗಿ ಮಟನ್‌, ತರಕಾರಿ ದರ ಹೆಚ್ಚಾಗಿದೆ. ಜತೆಗೆ ಮಳೆಯಿಂದಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿ ಒಂದು ಮೊಟ್ಟೆಯ ದರ 6 ರೂ. ತಲುಪಿದೆ.

ಹಾಪ್‌ ಕಾಮ್ಸ್ ನಲ್ಲಿ ಸೊಪ್ಪು, ತರಕಾರಿ ದರ

ಗೋರಿಕಾಯಿ -74 ರೂ, ಊಟಿ ಕ್ಯಾರಟ್‌ -95 ರೂ, ನಾಟಿ ಕ್ಯಾರಟ್‌ -80 ರೂ, ಎಲೆಕೋಸು -29 ರೂ, ನಿಂಬೆಹಣ್ಣು-98 ರೂ, ಆಲೂಗಡ್ಡೆ -46 ರೂ, ಮೂಲಂಗಿ -30 ರೂ, ಟೊಮೇಟೊ -55 ರೂ, ಮೆಂತ್ಯ -74 ರೂ, ಸಬ್ಬಕ್ಕಿ -80 ರೂ, ಪಾಲಾಕ್‌ -48 ರೂ, ಕೊತ್ತಂಬರಿ ಸೊಪ್ಪು 80 ರೂ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.