
ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ ಜಾವ ಗದ್ದುಗೆಗೆ ಮಹಾ ರುದ್ರಾಭಿಶೇಖ ಧಾರ್ಮಿಕ ಪೂಜೆಯನ್ನು ಅರ್ಚಕರಾದ ಶ್ರೀ ಹುಚ್ಚೇಶ ಹುಚ್ಚಪ್ಪಯ್ಯನಮಠ ಸ್ವಾಮಿಗಳು ಪೂಜೆ ಮಾಡಿದ ನಂತರ ೮ ಗಂಟೆಗೆ ಮುತ್ತೈದೆಯರಿಂದ ಕುಂಭ ,ಅಗೂ ಸುಮಂಗಲಿಯರಿಂದ ಆರತಿ ತಟ್ಟೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಮಠದಿಂದ ಪ್ರಾರಂಭವಾಗಿ ಸ್ವಾಮಿ ಭಿಮಾಂಬಿಕಾ ದೇವಿಗೆ ಪೊಜೆ ಸಲ್ಲಿಸಿ ಕುಂಭಕ್ಕೆ ನೀರು ತೆಗೆದುಕೊಂಡು ಗ್ರಾಮದ ಪ್ರಮುಖ ಬಿದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ವಾಧ್ಯ ಮೇಳದೊಂದಿಗೆ ಸಾಗಿತು.
ಈ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕೂಡ ಹಮ್ಮಿಕೊಂಡಿದ್ದರು. ೧೦ ಜೊಡಿ ವಧು ವರರಿಂದ ೧೨:೩೦ ಕ್ಕೆ ಮಾಂಗಲ್ಯ ಧಾರಣೆ ನಡೆಯಿತು. ನಂತರ ೨ ಗಂಟೆಗೆ ಮಹಾ ಪ್ರಸಾದ ನಂತರ ಅದ್ದೂರಿಯಾಗಿ ಸಾಯಂಕಾಲ ೫:೩೦ ಕ್ಕೆ ಮಹಾ ರಥೋತ್ಸವ ಪ,ಪೂಜ್ಯ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳಿಂದ ಚಾಲನೆ ನೀಡಲಾಯಿತು. ಈ ಮಹಾ ರಥೋತ್ಸವಕ್ಕೆ ಹೂವಿನ ಸೇವೆ ಗ್ರಾಮದ ಆಟೋ ಚಾಲಕರಿಂದ ನಡೆಯಿತು.
ಹಗ್ಗದ ಸೇವೆಯನ್ನು ತಿಮ್ಮಸಾಗರ ಗ್ರಾಮದ ಹಿರಿಯಿಂದ ನಡೆಯಿತು. ಕಳಸ ಸೇವೆಯನ್ನು ಚಿಕ್ಕ ಮುಚ್ಚಳಗುಡ್ಡ ಗ್ರಾಮದ ಸಮಸ್ತ ಗುರು ಹಿರಿಯರಿಂದ ನಡೆಯಿತು, ಸುತ್ತ ಹಳ್ಳಿಯ ಸಾವಿರಾರು ಜನ ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು, ಇನ್ನೊಂದು ವಿಶೇಷವೆಂದರೆ ಈ ರಥೋತ್ಸವಕ್ಕೆ ಉತ್ತತ್ತಿ,ಬಾಳಿ ಹಣ್ಣು, ಎಸೆಯದೇ ಕೇವಲ ಹೂವುಗಳನ್ನು ಮಾತ್ರ ಇಡಿ ಜನ ರಥಕ್ಕೆ ಎಸೆದು ಅರ್ಪಣೆ ಮಾಡಿ ಅದ್ದೂರಿಯಾಗಿ ಜಾತ್ರೆಯನ್ನು ಶಾಂತಿಯುತವಾಗಿ ನೇರೆವೇರಿದರು. ಈ ಸಂದರ್ಭದಲ್ಲಿ ಬದಾಮಿ ಪೊಲೀಸ್ ಠಾಣೆಯ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿದ್ದರು.
ಈ ರಥೋತ್ಸವದ ಅಂಗವಾಗಿ ರಂಗಭೂಮಿ ಶ್ರೀ ಹೊಳೆ ಹುಚ್ಚೇಶ್ವರ ನಾಟ್ಯದಿಂದ ಸುಂದರ ಸಾಮಾಜಿಕ ನಾಟಕ ನೇಗಿಲು ಬಂಗಾರ," ರೈತನಿಗೆ ಸಿಂಗಾರ , ಎಂಬ ನಾಟಕ ನಡೆಯಿತು, ಮಾರನೆ ದಿನ ಟಗರಿನ ಕಾಳಕ ನಡೆತು. ಈ ರಥೋತ್ಸವದಲ್ಲಿ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಗಂಗಾವತಿ. ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು ಕಮತಗಿ. ಹಾಗೂ ಕಾಶೀನಾಥ್ ಮಹಾಸ್ವಾಮಿಗಳು ಗುಳೇದಗುಡ್ಡ ಮತ್ತು ನೀಲಕಂಠ ಸ್ವಾಮಿಗಳು ಅಮರೇಶ್ವರ ಮಠ ಕೋಟೆಕಲ್ ಮತ್ತು ಸಮಸ್ತ ಕುಟಕನಕೇರಿ ಗ್ರಾಮದ ಗುರು ಹಿರಿಯರು, ಯುವಕರು ಅಪಾರ ಜನಸ್ತೋಮ ಸೇರಿ ವಿಜೃಂಭಣೆಯಿಂದ ಈ ರಥೋತ್ಸವ ನೇರೆವೇರಿಸಿದರು.




ವರದಿ : ಸಿದ್ದು ನೀಲಗುಂದ .