Breaking News

ಅಮೀನಗಡ ನಗರದ ಸಮಗ್ರ ಅಭಿವೃದ್ಧಿಯೇ ನಮ್ಮಗುರಿ ಎಂದ ವಿಜಯಕುಮಾರ್ ಎಸ್, ಕನ್ನೂರು

ಅಮೀನಗಡ : ಇಂದು ಮಕರ ಸಂಕ್ರಾಂತಿಯ ಅಂಗವಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ವತಿಯಿಂದ ನೂತನ ಪಟ್ಟಣ ಪಂಚಾಯತ ಸದಸ್ಯರಿಗೆ ಸರಳ ಸನ್ಮಾನ ಸಮಾರಂಭ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕರದಂಟು ನಗರದ ಜನಕ , ಯುತ್ ಐಕಾನ್ ನೂತನ ಪ,ಪಂ, ಸದಸ್ಯರಾದ ಸಂತೋಷ ಐಹೊಳ್ಳೆ ಅವರು ನಿನ್ನೆಯ ದಿನ ವೀರಸನ್ಯಾಸಿಯಾದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸದಸ್ಯರ ಸನ್ಮಾನ ಕಾರ್ಯಕ್ರಮ ಇದ್ದ ಕಾರಣ ಎರಡು ಒಂದೇ ಸಮಯದಲ್ಲಿ ಇದ್ದುದ್ದರಿಂದ ಬರಲು ಆಗಲಿಲ್ಲ ,ಇಂದು ಸಂಕ್ರಾಂತಿಯ ಸಂಭ್ರಮದಲ್ಲಿ ನನ್ನನ್ನು ಕರೆದು ಈ ಸಮಾರಂಭದ ಉದ್ಘಾಟನೆ ಮಾಡಿಸಿ ಗೌರವಿಸಿದ್ದಕ್ಕಾಗಿ ನಾನು ಧನ್ಯಾವಾದ ಹೇಳುತ್ತೇನೆ. ಯಾವತ್ತು ನಿಮ್ಮ ಶಿಕ್ಷಣ ಸಂಸ್ಥಯ ಜೊತೆಗೆ ನಾವು ಇದ್ದೇವೆ ಏನೇ ಸಹಕಾರ ಸಹಾಯ ಇದ್ದರು ಮಾಡತಿವಿ ಎಂದು ಎಲ್ಲರಿಗೂ ಸಂಕ್ರಮಣದ ಶುಭಾಶಯ ಕೋರಿದರು.

ಮುಖ್ಯಾಥಿತಿಗಳಾಗಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಯುವ ನಾಯಕ ಹಾಗೂ ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ವಿಜಯಕುಮಾರ್ ಎಸ್ ಕನ್ನೂರು ಅವರು ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಾಟ್ಟಾಗಿ ಶ್ರಮಿಸುತ್ತೇವೆ.ಅಲ್ಲದೆ ಸಾರ್ವಜ ನಿಕರಿಗೆ ಒಂದು ಉತ್ತಮ ಮಾದರಿ ಆಡಳಿತ ವ್ಯವಸ್ಥೆಯನ್ನು ಮಾಡಲಿದ್ದೇವೆ. ಇಲ್ಲಿ ಜಾತಿ,ಧರ್ಮ,ಪಕ್ಷಾತೀ ತವಾಗಿ,ಕರ್ತವ್ಯ ಮಾಡುತ್ತೇವೆ,ಸ್ಥಳೀಯ ಎಲ್ಲಾ ಸಂಘಸಂ ಸ್ಥೆಗಳು,ಪತ್ರಕರ್ತರು ನಿಮ್ಮೆಲ್ಲರ ಸಹಕಾರ ಇದ್ದರೆ ಈ ನಗರವನ್ನು ಮಾದರಿ ನಗರವನ್ನಾಗಿ ಮಾಡುತ್ತೇವೆ,ಎಂದರು.

ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯ ಕೋರಿದರು.ಈ ಸರಳ ಸನ್ಮಾನ ಸಮಾರಂಭ ದಲ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀಮತಿ ಫಾತೀಮಾ,ಡಿ ಅತ್ತಾರ,ಶ್ರೀ ಸಂಜಯ್ ಐಹೊಳೆ,ಶ್ರೀ ಶಂಕರಗೌಡ ಗೌಡರ, ಅನೇಕರಿಗೆ ಸನ್ಮಾನ ಮಾಡಲಾಯಿತು. ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶಾಂತಾದೇವಿ, ಡಾ: ಪ್ರಶಾಂತ ನಾಯಕ,ಶ್ರೀ ಡಿ,ಬಿ,ವಿಜಯ ಶಂಕರ್, ಶ್ರೀ ಡಿ,ಫಿ,ಅತ್ತಾರ, ಅನೇಕರು ಉಪಸ್ಥಿತಿ ಇದ್ದರು.

ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಸಂತೋಷ ಐಹೊಳೆ ಅವರಿಗೆ ಗೌರವ ಸನ್ಮಾನ
ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ವಿಜಯಕುಮಾರ್ ಅವರಿಗೆ ಗೌರವ ಸನ್ಮಾನ
ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಫಾತೀಮಾ ಡಿ ಅತ್ತಾರ ಅವರಿಗೆ ಗೌರವ ಸನ್ಮಾನ
ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಸಂಜಯಕುಮಾರ್ ಐಹೊಳೆ ಅವರಿಗೆ ಗೌರವ ಸನ್ಮಾನ
ನಗರದ ಖ್ಯಾತ ದರ್ಶನ ಖಾನಾವಳಿ ಮಾಲೀಕರು, ಶ್ರೀ ವಿಠ್ಠಲ ಹಾಗೂ ಧರ್ಮಪತ್ನಿ ಶ್ರೀಮತಿ ಶೋಭಾ ಅವರಿಗೆ ಗೌರವ ಸನ್ಮಾನ
ಗರದ ಸಮಾಜ ಸೇವಕರಾದ ಶ್ರೀ ಶಂಕರಗೌಡ ಡೌಡರ ಅವರಿಗೆ ಗೌರವ ಸನ್ಮಾನ

ಅಮೀನಗಡ ನಗರದ ಭಾರತೀಯ ಜನತಾ ಪಕ್ಷದ ಮುಖಂಡರಾದ ಶ್ರೀಮತಿ ರೇಣುಕಾ ಪಿ ರಾಠೋಡ,ಅವರಿಗೆ ಗೌರವ ಸನ್ಮಾನ

ನಗರದ ಅಂಜುಮನ್ ಕಮಿಟಿ/ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಶ್ರೀ ಡಿ,ಪಿ,ಅತ್ತಾರ. ಅವರಿಗೆ ಗೌರವ ಸನ್ಮಾನ.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.