
ಅಮೀನಗಡ: ಕಾಶ್ಮೀರ ಕಣಿವೆಯಲ್ಲಿ ಕಳೇದ ಎರಡು ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ ವೀರ ಯೋದ ಕುಮಾರ್ ಪಾರೂಕ್ ಸೈಯದ್ ತಂಗಡಗಿ ಅವರಿಗೆ ಗ್ರಾಮದ ಅಲ್ಪಸಂಖ್ಯಾತ ಯುವ ಮುಖಂಡರು ಹಾಗೂ ಅಭಿಮಾನಿಗಳು ನಿನ್ನೆಯ ದಿನ ಶೂಲೇಭಾವಿಯ ಅಂಜುಮನ್ ಕಮಿಟಿಯ ಶಾದಿ ಮಹಲ್ ನಲ್ಲಿ ಓಣಿಯ ಯುವಕರು ಅಭಿಮಾನದಿಂದ ಕೇಕ್ ತರಿಸಿ ಇವರ ತಂದೆ/ತಾಯಿ ಅವರಿಗೆ ಸನ್ಮಾನಿಸಿ ಇವರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿದರು. ಈ ದೇಶ ಸೇವೆ ಮಾಡಲು ಮಗನನ್ನು ಹುರುದುಂಬಿಸಿ ಅವರ ೧೮ ವಸಂತಗಳನ್ನು ದಾಟಿ ೧೯ ರ ವಸ್ತಿಲಲ್ಲಿ ಕಾಲಿಟ್ಟಿದ್ದು ಕಾಶ್ಮೀರ ಕಣಿವೆಯಲ್ಲಿ ಪಾರೂಕ್ ಅವರ ಈ ಸಾಧನೆ ನಮ್ಮ ಓಣಿಯ ಎಲ್ಲಾ ಯುವಕರಿಗೆ ಮಾದರಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಅವರು ಹೇಳಿದರು ಈ ಸರಳ ಸಮಾರಂಭ ದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಜಹಾಂಗೀರಸಾಬ ಜಾಗೀರದಾರ್, ಮಾಜಿ,ಗ್ರಾಮ,ಪಂ,ಸದಸ್ಯರಾದ ಖಾಸೀಮ ಸಾಬ ಬೂದಿಹಾಳ ಹಾಗೂ


ಶ್ರೀ ಮೈನುದ್ದೀನ್ ಮುಲ್ಲಾ ಶ್ರೀ ರೀಯಾಜ್ ಮುಲ್ಲಾ ಶ್ರೀ ರಹೇಮಾನ್ ಬೂದಿಹಾಳ. ಶ್ರೀ
ಇಬ್ರಾಹಿಂ ಮುಲ್ಲಾ ಶ್ರೀ ರಜಾಕ್ ಮಾಗಿ ಶ್ರೀ
ರಂಜಾನ್ ಮುಲ್ಲಾ ಮೈನು ತಂಗಡಗಿ,ಮೈನು ಮುಲ್ಲಾ ,ಮುಂತಾದ ಯುವಕರು ಭಾಗಿಯಾಗಿದ್ದರು.


Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News