Breaking News

ಶೂಲೇಶ್ವರ ಉತ್ಸವದ ಬಿತ್ತಿಪತ್ರ ಬಿಡುಗಡೆ ಮಾಡಿದ ಎಸ್,ಜಿ,ನಂಜಯ್ಯನಮಠ ಅದ್ದೂರಿ ಶೂಲೇಶ್ವರ ಉತ್ಸವಕ್ಕೆ ಕರೆ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ ಮಾರ್ಚ್ ೧ ನೇ ತಾರಿಕು ಶಿವರಾತ್ರಿ ಅಮವಾಸ್ಯೆ  ಅಂಗವಾಗಿ ಶಿವಯೋಗದ ನಿಮಿತ್ತವಾಗಿ ಶಿವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಚ್ ೧ ಮಂಗಳವಾರ ದಂದು ಬೆಳಗಿನ ಜಾವ ೪ ಗಂಟೆಗೆ ಶಿವಾಲಯದಲ್ಲಿ ಮಹಾ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಮಹಾ ಪೂಜೆ ನಡೆಯಲಿದೆ, ಬೆಳಗ್ಗೆ ೦೬ ಗಂಟೆಯಿಂದ ಮಹಾ ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. ನಂತರ ೧೨:೩೦ ಕ್ಕೆ ಎರಡನೆ ಮಹಾ ರುದ್ರಾಭಿಶೇಖ & ಸಹಸ್ರ ಬಿಲ್ವಾರ್ಚನೆ ಪೊಜೆ ನಡೆಯಲಿದೆ, ಮಧ್ಯಾಹ್ನ ೧ಗಂಟೆಯಿಂದ ರಾತ್ರಿ ೯ ಗಂಟೆಯ ವರೆಗೆ ಮಹಾ ಅನ್ನಸಂತರ್ಪನೆ ಪ್ರಸಾದ ನಡೆಯಲಿದೆ. ಅದೆ ದಿನ ಸಾಯಂಕಾಲ ೦೪ ಗಂಟೆಗೆ ೧೦೧ ಲೀಟರ್ ಹಾಲಿನಿಂದ ಶಿವಲಿಂಗಕ್ಕೆ ಮಹಾ ಕ್ಷೀರಾಭಿಶೇಖ ಪೊಜೆ ನಿರಂತರ ೩ ಗಂಟೆ ಮಾಹಾ ಕ್ಷೀರಾಭಿಶೇಖ  ನಡೆಯಲಿದೆ ಸಾರ್ವಜನಿಕವಾಗಿ ಭಕ್ತರಿಗೆ & ಶಿವರಾತ್ರಿ ಉಪಾಸಕರಿಗೆ ಒಂದು ಬಟ್ಟಲು ಹಾಲು ಒಂದು ಬಿಲ್ವ ಪತ್ರಿಯನ್ನು ಶಿವಲಿಂಗಕ್ಕೆ ಅರ್ಪಿಸುವ ಅವಕಾಶವನ್ನು ನೀಡಲಾಗಿದೆ.

ಮೊದಲು ಬಂದವರಿಗೆ ಈ ಅವಕಾಶ ಸಿಗಲಿದೆ,ಸಾಯಂಕಲ ೭:೩೦ ಕ್ಕೆ ಮಹಾ ಮಂಗಳಾರತಿ, ಪೊಜೆ ನಡೆಯಲಿದೆ.ನಂತರ ದೇವಾಲಯಕ್ಕೆ ಬಂದ ಮುತ್ತೈದೇಯರಿಂದ ದೀಪೊತ್ಸವ ನಡೆಯಲಿದೆ. ಸಾಯಂಕಾಲ ೬;೩೦ ಕ್ಕೆ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತರಾಷ್ಟ್ರೀಯ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಮಹಾದೇವ ಸತ್ತಿಗೇರಿ ಅವರಿಂದ ಹಾಸ್ಯಸಂಜೆ ಜನಪದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

೨/೦೩/೨೦೨೨ ಬುಧವಾರ ಶಿವರಾತ್ರಿ ಅಮವಾಸ್ಯೆ ನಿಮಿತ್ಯ ಬೆಳಗ್ಗೆ ೮ ಗಂಟೆಗೆ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ, ಮಹಾ ಪೊಜೆ ನಡೆಯಲಿದೆ ೧೦:೩೦ ಕ್ಕೆ ಇಲಕಲ್ಲ ನಗರದ ಶ್ರೀಮತಿ ಸುನಿತಮ್ಮ ಕರಜಗಿ ಹಾಗೂ ಸಂಗಡಿಗರಿಂದ  ಹಾಗೂ ಶೂಲೇಭಾವಿ ಗ್ರಾಮದ ಶ್ರೀಮತಿ ಜ್ಯೋತಿ ಜ ಪೂಜಾರ ಹಾಗೂ  ದೇವಾಂಗ ಸಮಾಜದ ಮಹಿಳೆಯರಿಂದ ರುದ್ರ ಪಠಣ  & ಲಲಿತ ಸಹಸ್ರನಾಮ  ಪಾರಾಯಣ ನಡೆಯಲಿದೆ, ೧೨ ಗಂಟೆಗೆ ಮಹಾ ಅನ್ನಸಂತರ್ಪನೆ ಪ್ರಸಾದ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈ ಎರಡು ದಿನದ ವಿಶೇಷ ಧಾರ್ಮಿಕ ಪೊಜಾ ಕಾರ್ಯಕ್ರಮ  ಹಾಗೂ ಶೂಲೇಶ್ವರ  ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಆ ಶಿವನ ಜಾಗರಣೆ ಮಾಡೋಣ ಹಾಗೆ ಎಲ್ಲರೂ ಸೌಹಾರ್ಧತೆಯಿಂದ ಭಾವೈಕ್ಯತೆಯಿಂದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಶಾಸಕ ಶ್ರೀ ಎಸ್,ಜಿ,ನಂಜಯ್ಯನಮಠ ಹಾಗೂ ಸಹಕಾರಿ ಧುರಿಣ ಶ್ರೀ ಆರ್,ಪಿ,ಕಲಬುರ್ಗಿ ಅವರು ತಿಳಿದರು. ಈ ಉತ್ಸವದ ಪೊಸ್ಟರ್ ಬಿಡುಗಡೆ ಸಂದರ್ಭದಲ್ಲಿ ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಕಮತಗಿ,ಉಪಾಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ,ನಿರ್ದೆಶಕ ಶ್ರೀ ಮಹಂತೇಶ ಭದ್ರಣ್ಣನವರ,ಶ್ರೀ ಮುತ್ತಪ್ಪ ಹಡಪದ,ಶ್ರೀ ಆನಂದ ಮೊಕಾಶಿ ಶ್ರೀ ಮಹಾಂತಯ್ಯ ಹಿರೇಮಠ ಕಾರ್ಯದರ್ಶಿ , ಶ್ರೀ ಡಿ,ಬಿ,ವಿಜಯಶಂಕರ್ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಮಾನು ಹೊಸಮನಿ,ಶ್ರೀ ವಿರೇಶ ಮಠಪತಿ ಉಪಸ್ಥಿತಿ ಇದ್ದರು.

About vijay_shankar

Check Also

ಕಮತಗಿ  PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಕಮತಗಿ PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.