Breaking News

ಬಾಗಲಕೋಟೆ ರೈಲು ನಿಲ್ದಾಣದಲ್ಲಿ 3 ವರ್ಷಗಳಿಂದ ಶುದ್ದ ಕುಡಿಯುವ ನೀರಿನ ಘಟಕ “Water point, ಬಂದ್ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಿರಾ?

ಬಾಗಲಕೋಟೆ: ರಾಜ್ಯದ ಯಾವುದೇ ಮೂಲೆಗೆ ತಲುಪಲು ಇದು ಮುಖ್ಯದ್ವಾರ ನಿತ್ಯಸಾವಿರಾರು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಾರೆ. ಆದರೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ ೨೦೧೯ ರಿಂದ ಈ ನಿಲ್ದಾಣದಲ್ಲಿ ೨ ಶುದ್ದ ನೀರಿನ ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ ಕೇವಲ ೫ ರೂಪಾಯಿಗೆ ೧ ಲೀಟರ್ ನೀರು ಕೋಡಬೇಕು ಆದರೆ ಕಾಟಚಾರಕ್ಕೆ ಸರಕಾರ ಇಂತಹ ಟೆಂಡರಗಳನ್ನು ನೀಡಿ ಕೋಟಿ ಗಟ್ಟಲೆ ಹಣ ಹಾಕಿ ಈಗ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ.

ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವರು ,ಶಾಸಕರು,ಸಾರ್ವಜನಿಕರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು ರೈಲ್ವೆ ಸಚಿವರು ಮೊದಲು ಇತ್ತ ಗಮನ ಹರಿಸಿ ಸಾರ್ವಜನಿಕರ ಈ ತೊಂದರೆಗೆ ಈ ಕ್ಷಣ ಸ್ಪಂದಿಸಬೇಕು.ಉತ್ತರ ಕರ್ನಾಟಕದಲ್ಲಿ ಹೆಚ್ವುತ್ತಿರುವ ಬೇಸಿಗೆ ಆರ್ಭಟಕ್ಕೆ ಜನ ಮೊದಲೆ ಹೈರಾನಾಗಿದ್ದಾರೆ,ಒಂದು ಲೀಟರ್ ನೀರಿನ ಬಾಟಲಿಗೆ ೨೦ ರೂಪಾಯಿ ಕೊಟ್ಟು ಕರಿದಿ ಮಾಡಿ ಕುಡಿಯುವಷ್ಟು ಶ್ರಿಮಂತರು ರೈಲು ಪ್ರಯಾಣ ಮಾಡಲ್ಲ ಕಡು ಬಡವರಿಗೆ ಇದರಿಂದ ಬಹಳ ಅನಾನುಕೂಲವಾಗಿದೆ,ರೈಲ್ವೆ ಅಧಿಕಾರಿಗಳು ಈ ಬಗ್ಗೆ ಇದರ ಬಗ್ಗೆ ಸಮಗ್ರ ವರದಿ ತಯಾರಿಸಿ ತಕ್ಷಣ ಸಾರ್ವಜನಿಕರಿಗೆ ಇಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮ್ಮ BB News ಕಳಕಳಿ.

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.